VIDEO- ಸಶಸ್ತ್ರ ತರಬೇತಿ ನಡೆದಿಲ್ಲ, ಬಜರಂಗದಳದವರು ಶಿಬಿರ ನಡೆಸಿದ್ದಾರೆ: ಕೊಡಗು ಎಸ್ಪಿ ಎಂ.ಎ. ಅಯ್ಯಪ್ಪ
ಮಡಿಕೇರಿ ಮೇ 16 : ಶಸ್ತ್ರಾಸ್ತ್ರ ತರಬೇತಿ ಅಂತ ನಡೆದಿಲ್ಲ, ವಿಹೆಚ್ಪಿ ಮತ್ತು ಬಜರಂಗದಳದ ಕಾರ್ಯಕರ್ತರಿಗೆ ಶಿಬಿರ ನಡೆಸಿದ್ದಾರೆ. ಪ್ರತಿವರ್ಷ ಶಿಬಿರ ನಡೆಸುತ್ತಿದ್ದಾರೆ, ಶಾಲೆಯಿಂದ ಅನುಮತಿ ಪಡೆದು ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ತಿಳಿಸಿದ್ದಾರೆ.
''ಏರ್ ಗನ್ ತರಬೇತಿ ಕುರಿತು ಸಾಮಾಜಿಕ ಜಾಲತಾಣಗಳ ಮೂಲಕ ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ, ಶಸ್ತ್ರಾಸ್ತ್ರ ಕಾಯ್ದೆ ಪ್ರಕಾರ ಏರ್ಗನ್ ಖರೀದಿಸಲು ಮತ್ತು ಉಪಯೋಗಿಸಲು ಯಾವುದೇ ಅನುಮತಿ ಬೇಡ. ಮತ್ತೊಮ್ಮೆ ಕಾಯ್ದೆ ಬಗ್ಗೆ ತಿಳಿದುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು'' ಎಂದು ತಿಳಿಸಿದರು.
Next Story