Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕೋವಿಡ್ ರೋಗಿಗಳಿಂದ ಅಧಿಕ ಪ್ರಮಾಣದಲ್ಲಿ...

ಕೋವಿಡ್ ರೋಗಿಗಳಿಂದ ಅಧಿಕ ಪ್ರಮಾಣದಲ್ಲಿ ಶುಲ್ಕ ವಸೂಲಿ ಪ್ರಕರಣ: 70 ಆಸ್ಪತ್ರೆಗಳಿಂದ 1 ಕೋಟಿ ರೂ. ಮರು ಪಾವತಿ

ಜಿ.ಮಹಾಂತೇಶ್ಜಿ.ಮಹಾಂತೇಶ್16 May 2022 11:58 PM IST
share
ಕೋವಿಡ್ ರೋಗಿಗಳಿಂದ ಅಧಿಕ ಪ್ರಮಾಣದಲ್ಲಿ ಶುಲ್ಕ ವಸೂಲಿ ಪ್ರಕರಣ: 70 ಆಸ್ಪತ್ರೆಗಳಿಂದ 1 ಕೋಟಿ ರೂ. ಮರು ಪಾವತಿ

ಬೆಂಗಳೂರು, ಮೇ 16: ಕೋವಿಡ್ ರೋಗಿಗಳಿಂದ ಸರಕಾರ ಸೂಚಿಸಿದ್ದ ಶುಲ್ಕಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಒಟ್ಟು 3. 54 ಕೋಟಿ ರೂ. ಶುಲ್ಕ ವಸೂಲಿ ಮಾಡಿದ್ದ 246 ಆಸ್ಪತ್ರೆಗಳ ಪೈಕಿ ಕೇವಲ 70 ಆಸ್ಪತ್ರೆಗಳು 1 ಕೋಟಿ ರೂ .ಗಳನ್ನಷ್ಟೇ ರೋಗಿಗಳಿಗೆ ಮರು ಪಾವತಿಸಿರುವುದು ಇದೀಗ ಬಹಿರಂಗವಾಗಿದೆ.

ಖಾಸಗಿ ಅಸ್ಪತ್ರೆಗಳು ವಸೂಲಿ ಮಾಡಿದ್ದ ಪಟ್ಟಿ ಮತ್ತು ಇದುವರೆಗೂ ರೋಗಿಗಳಿಗೆ ಮರು ಪಾವತಿಸಿರುವ ಪಟ್ಟಿಯನ್ನು ''the-file.in'' ಆರ್‌ಟಿಐ ಅಡಿಯಲ್ಲಿ ಮಾಹಿತಿ ಪಡೆದುಕೊಂಡಿದೆ. ಸುವರ್ಣ ಆರೋಗ್ಯ ಟ್ರಸ್ಟ್ 2022ರ ಮೇ 7ರಂದು ನೀಡಿರುವ ಮಾಹಿತಿ ಪ್ರಕಾರ 70 ಆಸ್ಪತ್ರೆಗಳಿಂದ 1.00 ಕೋಟಿ ರೂ.ಗಳನ್ನಷ್ಟೇ ರೋಗಿಗಳಿಗೆ ಮರು ಪಾವತಿಸಿದೆ. ಮರು ಪಾವತಿಗೆ ಬಾಕಿ ಉಳಿಸಿಕೊಂಡಿರುವ ಉಳಿದ ಆಸ್ಪತ್ರೆಗಳ ಪಟ್ಟಿ ಮತ್ತು ವಸೂಲಿ ಮಾಡಿರುವ ಆಧಿಕ ಶುಲ್ಕದ ಮೊತ್ತದ ಪಟ್ಟಿಯನ್ನು ಒದಗಿಸಿಲ್ಲ.

ಅಲ್ಲದೆ ಅಧಿಕ ಶುಲ್ಕ ವಸೂಲಿ ಮಾಡಿರುವ ಆಸ್ಪತ್ರೆಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ರೋಗಿಗಳಿಗೆ ಹಣವನ್ನು ಮರು ಪಾವತಿಸಿ ಕೈತೊಳೆದುಕೊಂಡಿರುವುದು ಆರ್‌ಟಿಐ ಮಾಹಿತಿಯಿಂದ ತಿಳಿದು ಬಂದಿದೆ.

ಬೆಂಗಳೂರು ವ್ಯಾಪ್ತಿಯಲ್ಲಿ ಬರುವ ರೋಗಿಗಳಿಗೆ ಹಣ ಮರುಪಾವತಿ ಮಾಡದಿರುವ ಕೋವಿಡ್ 19 ಪ್ರಕರಣಗಳ ಬಗ್ಗೆ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು ಹಾಗೂ ರೋಗಿಗಳು, ಸಹಾಯಕರ ಸಮ್ಮುಖದಲ್ಲಿ ಎಸ್‌ಎಎಸ್ಟಿ ಕಚೇರಿಯಲ್ಲಿ ವಿಚಾರಣೆ ನಡೆಸಿ ರೋಗಿಗಳಿಗೆ ಹಣ ಮರು ಪಾವತಿಸಲು ಕ್ರಮವಹಿಸಲಾಗಿದೆ. ಬೆಂಗಳೂರು ಹೊರತುಪಡಿಸಿದ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ರೋಗಿಗಳಿಗೆ ಹಣ ಮರುಪಾವತಿ ಮಾಡದಿರುವ ಕೋವಿಡ್ 19 ಪ್ರಕರಣಗಳ ಬಗ್ಗೆ ಸಂಬಂಧಪಟ್ಟ ಜಿಲ್ಲಾ ವ್ಯಾಪ್ತಿಯ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು ಹಾಗೂ ರೋಗಿಗಳು, ಸಹಾಯಕರ ಸಮ್ಮುಖದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದ ಜಿಲ್ಲಾ ಕುಂದುಕೊರತೆ ಪರಿಹಾರ ಸಮಿತಿ ಸಭೆಯಲ್ಲಿ ವಿಚಾರಣೆ ನಡೆಸಿ ರೋಗಿಗಳಿಗೆ ಹಣ ಮರುಪಾವತಿಸಲು ಕ್ರಮವಹಿಸಲಾಗಿರುತ್ತದೆ,’ ಎಂದು ಮಾಹಿತಿಯಲ್ಲಿ ವಿವರಿಸಲಾಗಿದೆ.

ಅದೇ ರೀತಿ ರೋಗಿಗಳ ವೈಯಕ್ತಿಕ ವಿಷಯಗಳನ್ನು ಒಳಗೊಂಡಿದೆ ಎಂಬ ಕಾರಣವನ್ನು ಮುಂದಿರಿಸಿ ನಿಗದಿಗಿಂತ ಅಧಿಕ ಶುಲ್ಕ ವಸೂಲು ಮಾಡಿರುವ ಆಸ್ಪತ್ರೆಗಳಿಗೆ ನೀಡಿರುವ ನೋಟಿಸ್‌ಗಳನ್ನು ಆರ್‌ಟಿಐ ಅಡಿಯಲ್ಲಿ ನೀಡಲು ಟ್ರಸ್ಟ್ ನಿರಾಕರಿಸಿದೆ.

ಅಧಿಕ ಶುಲ್ಕ ವಸೂಲಿ ಮಾಡಿ ರೋಗಿಗಳಿಗೆ ಮರು ಪಾವತಿ ಮಾಡಿರುವ ಆಸ್ಪತ್ರೆಗಳ ಪಟ್ಟಿಯಲ್ಲಿ ನಾರಾಯಣ ಹೃದಯಾಲಯ, ನಾರಾಯಣ ಸೂಪರ್ ಸ್ಪೆಷಾಲಿಟಿ, ಶಾಸಕ ಶಾಮನೂರು ಶಿವಶಂಕರಪ್ಪ ಒಡೆತನದ ಎಸ್‌ಎಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ಮಾಜಿ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರ ಕುಟುಂಬ ಒಡೆತನದ ಸಿದ್ಧಾರ್ಥ್ ಸಮೂಹದ ವೈದ್ಯಕೀಯ ಆಸ್ಪತ್ರೆ, ಮಾಜಿ ಸಚಿವ ಎಂ ಬಿ ಪಾಟೀಲ್ ಕುಟುಂಬ ಒಡೆತನದ ಬಿಎಲ್ಡ್‌ಇ ವಿಶ್ವವಿದ್ಯಾನಿಲಯ ,ಬಿ.ಎಂ. ಪಾಟೀಲ್ ಮೆಡಿಕಲ್ ಕಾಲೇಜು ಆಸ್ಪತ್ರೆ, ಎಸ್‌ಡಿಎಂ ಕಾಲೇಜ್ ಆಫ್ ಮೆಡಿಕಲ್ ಸೈನ್ಸ್ಸ್ ಹಾಸ್ಪಿಟಲ್, ಅಗಡಿ, ಆಸ್ತರ್ ಸಿಎಂಐ, ಎಂವಿಜೆ ಆಸ್ಪತ್ರೆಯೂ ಇವೆ.

ಈ ಪೈಕಿ ನಾರಾಯಣ ಹೃದಯಾಲಯ ಪ್ರೈವೈಟ್ ಹಾಸ್ಪಿಟಲ್ 45,800 ರೂ. ನಾರಾಯಣ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಮಲ್ಲೇಶ್ವರಂ 75,000 ರೂ. ಎಸ್‌ಡಿಎಂ ಕಾಲೇಜ್ ಆಫ್ ಮೆಡಿಕಲ್ ಸೈನ್ಸ್ ಆ್ಯಂಡ್ ಹಾಸ್ಟಿಟಲ್ 32,387 ರೂ. ಎಸ್‌ಎಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಕಲ್ ಸೈನ್ಸ್ ಆ್ಯಂಡ್ ಹಾಸ್ಪಿಟಲ್ 1,07,000 ರೂ. ಜಿಂದಾಲ್ ಸಂಜೀವಿನಿ ಮಲ್ಟಿ ಸ್ಪೆಷಾಲಿಟಿ ಹಾಸ್ಟಿಟಲ್ 1,40,000 ರೂ. ಬಿ.ಎಂ ಪಾಟೀಲ್ ಮೆಡಿಕಲ್ ಕಾಲೇಜು ಆಸ್ಪತ್ರೆ 6,90,618 ರೂ. ಮಣಿಪಾಲ್ ಆಸ್ಪತ್ರೆಯು 6,47,202 ರೂ. ಗಳನ್ನು ರೋಗಿಗಳಿಗೆ ಮರು ಪಾವತಿಸಿರುವುದು ಪಟ್ಟಿಯಿಂದ ಗೊತ್ತಾಗಿದೆ.

ಡಿಸೆಂಬರ್ ಅಂತ್ಯದವರೆಗೆ ರಾಜ್ಯದಲ್ಲಿ 1,36,160 ಕೋವಿಡ್ ಸೋಂಕಿತರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಪೈಕಿ 1,17,690 ಸೋಂಕಿತರಿಗೆ ಸರಕಾರದಿಂದ ವೆಚ್ಚ ಭರಿಸಲಾಗಿದೆ. 197 ಪ್ರಕರಣಗಳಲ್ಲಿ ಅಧಿಕ ಶುಲ್ಕ ವಸೂಲಿ ಮಾಡಿರುವ 57 ಖಾಸಗಿ ಆಸ್ಪತ್ರೆಗಳ ವಿರುದ್ಧ ನೇರವಾಗಿ ಮತ್ತು ಇ ಮೇಲ್ ಮೂಲಕ ಸರಕಾರಕ್ಕೆ ದೂರು ಸಲ್ಲಿಕೆಯಾಗಿತ್ತು.

238 ರೋಗಿಗಳು ನೇರವಾಗಿ ಸುವರ್ಣ ಆರೋಗ್ಯ ಟ್ರಸ್ಟ್‌ನ ವಿಶೇಷ ವಿಭಾಗಕ್ಕೆ ದೂರು ಸಲ್ಲಿಸಿದ್ದರೂ. ಇದರ ಅನ್ವಯ 1,460 ಆಸ್ಪತ್ರೆಗಳಿಗೆ ಶೋಕಾಸ್ ನೋಟಿಸ್ ನೀಡಿದೆ. ಈ ಪೈಕಿ 153 ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳು 30,63, 343 ರೂ.ಗಳನ್ನು ಮರು ಪಾವತಿಸಿದೆ. ಒಟ್ಟಾರೆ 73,28,034 ರೂ.ಗಳನ್ನು ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳಿಗೆ ಮರು ಪಾವತಿಸಿದ್ದವು.

ಆಸ್ಪತ್ರೆಗಳು ಮರುಪಾವತಿಸಿರುವ ಪಟ್ಟಿ

ಇನ್ನುಳಿದಂತೆ ಅಗಡಿ ಆಸ್ಪತ್ರೆ 40,738 ರೂ., ಚಿಕ್ಕಬಳ್ಳಾಪುರದ ಅನನ್ಯ ಸ್ಪೆಷಾಲಿಟಿ ಆಸ್ಪತ್ರೆ 5,96, 461 ರೂ., ಎ ಎಲ್‌ ಅನ್ಸಾರ್‌ ಆಸ್ಪತ್ರೆ 32,100 ರೂ., ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಅಪೊಲೋ ಆಸ್ಪತ್ರೆ 10,000 ರೂ., ಆರೋಗ್ಯ ಆಧಾರ ಆಸ್ಪತ್ರೆ 3,35,000 ರೂ., ಆಸ್ತರ್‌ ಸಿಎಂಐ ಆಸ್ಪತ್ರೆ 30,955 ರೂ., ಆಸ್ತರ್‌ ಆರ್‌ವಿ ಆಸ್ಪತ್ರೆ 750 ರೂ., ಅಶ್ವಿನಿ ಆಯುರ್ವೇದ ಮೆಡಿಕಲ್‌ ಕಾಲೇಜು 3,64, 818 ರೂ., ಬೆಂಗಳೂರು ಬ್ಯಾಪಿಸ್ಟ್‌ ಆಸ್ಪತ್ರೆ 2,00,030 ರೂ., ಬೆಂಗಳೂರು ಇನ್ಸಿಟಿಟ್ಯೂಟ್‌  ಆಫ್‌ ಗ್ರಾಸ್ಟ್ರೋಎಂಟ್ರಾಲಜಿ 36,610 ರೂ., ಬಸವೇಶ್ವರ ಟೀಚಿಂಗ್‌ ಜನರಲ್‌ ಆಸ್ಪತ್ರೆ 90,000 ರೂ., ಬಿಜಿಎಸ್‌ ಗ್ಲೋಬಲ್‌ ಇನ್ಸಿಟಿಟ್ಯೂಟ್‌ ಸೈನ್ಸ್‌ಸ್‌ ಅಂಡ್‌ ಹಾಸ್ಪಿಟಲ್‌ 82, 172 ರೂ., ಭಗವಾನ್‌ ಮಹಾವೀರ್‌ ಜೈನ್‌ 69,500 ರೂ., ಮೈಸೂರಿನ ಭವಾನಿ ಆಸ್ಪತ್ರೆ 4,19,928 ರು, ಬಿಎಚ್‌ಎಸ್‌ ಲೇಕ್‌ ವ್ಯೂ ಹಾರ್ಟ್ ಅಂಡ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ 75,000 ರೂ., ಬಿಎಲ್‌ಡಿಇ ಯುನಿವರ್ಸಿಟಿ ಶ್ರೀ ಬಿ ಎಂ ಪಾಟೀಲ್‌ಮೆಡಿಕಲ್‌ಕಾಲೇಜು ಅಸ್ಪತ್ರೆ 6,90,618, ಚೌಧರಿ ಆಸ್ಪತ್ರೆ 6,63,780, ಕೊಲಂಬಿಯಾ ಏಷ್ಯಾ ಆಸ್ಪತ್ರೆ, ಸರ್ಜಾಪುರ ರಸ್ತೆ 3,500, ಕೊಲಂಬಿಯಾ ಏಷ್ಯಾ ಆಸ್ಪತ್ರೆ ಹೆಬ್ಬಾಳ 3,78,741, ಕೊಲಂಬಿಯಾ ಏಷ್ಯಾ ಆಸ್ಪತ್ರೆ ಯಶವಂತಪುರ 97,460, ದಾನೇಶ್ವರಿ ಮಲ್ಟಿ ಸ್ಪೆಷಾಲಿಟಿ ಹೆಲ್ತ್‌ಕೇರ್‌ 2, 13,000, ಡಾ ಚಂದ್ರಮ್ಮ ದಯಾನಂದ್‌ ಸಾಗರ್‌ ಇನ್ಸಿಟಿಟ್ಯೂಟ್‌ ಆಫ್‌ಮೆಡಿಕಲ್‌ 25,000, ಫೋರ್ಟೀಸ್‌ ಆಸ್ಪತ್ರೆ ರಾಜಾಜಿನಗರ 14,000, ಹೆಚ್‌ಬಿಎಸ್‌ಹಾಸ್ಪಿಟಲ್‌ಟ್ರಸ್ಟ್‌ 3,15,000, ಹುಬ್ಬಳ್ಳಿ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ, ಹುಬ್ಬಳ್ಳಿ 35,000, ಜಗದ್ಗುರು ಶ್ರೀ ಶಿವರಾತ್ರೀಶ್ವರ ಆಸ್ಪತ್ರೆ 30,000, ಜಿಂದಾಲ್‌ ಸಂಜೀವಿನಿ ಮಲ್ಟಿ ಸ್ಪೆಷಾಲಿಟಿ 1,40,000, ಜಸ್ಟೀಸ್‌ಕೆ ಎಸ್‌ಹೆಗ್ಡೆ ಚಾರಿಟಬಲ್‌ಆಸ್ಪತ್ರೆ 66,799, ಕಾಮಾಕ್ಷಿ ಆಸ್ಪತ್ರೆ ಯುನಿಟ್‌-(2 ) 10,000, ಕಣಚೂರು ಹಾಸ್ಟಿಟಲ್‌ ಅಂಡ್‌ರೀಸರ್ಚ್ ಸೆಂಟರ್‌ 6,895, ಕಿಮ್ಸ್‌ ಹಾಸ್ಪಟಿಲ್‌ ಅಂಡ್‌ರೀಸರ್ಚ್ ಸೆಂಟರ್‌ 50,000, ಕಿಮ್ಸ್‌ ಬೆಂಗಳೂರು 3,65,700, ಮಲ್ಲಿಗೆ ಮೆಡಿಕಲ್‌ ಸೆಂಟರ್‌ ಪ್ರೈವೈಟ್‌ ಲಿಮಿಟೆಡ್‌ 32,297, ಮಣಿಪಾಲ್‌ಆಸ್ಪತ್ರೆ, ಬೆಂಗಳೂರು  6,47,202, ಮೆಡಿಕೋಸ್ಕೋಪ್‌ ಚೆಸ್ಟ್‌ ಅಂಡ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ  2,19,637, ಎಂವಿಜೆ ಮೆಡಿಕಲ್‌ ಕಾಲೇಜು ಅಂಡ್‌ ರೀಸರ್ಚ್‌ ಹಾಸ್ಪಿಟಲ್ 30,000, ನಂಜಪ್ಪ ಆಸ್ಪತ್ರೆ  76,468, ನಾರಾಯಣ ಹೃದಯಾಲಯ ಹಾಸ್ಪಿಟಲ್‌ ಮಲ್ಲೇಶ್ವರಂ 45,800, ನಾರಾಯಣ ಸೂಪರ್‌ಸ್ಪೆಷಾಲಿಟಿ ಹಾಸ್ಪಟಿಲ್‌ಮಲ್ಲೇಶ್ವರಂ ಬೆಂಗಳೂರು  75,000, ನವಚೇತನ ಹಾಸ್ಟಿಟಲ್‌ಬೆಂಗಳೂರು 35,145, ನಿನಾದ್‌ಪೃಥ್ವಿ ಸೂಪರ್‌ಸ್ಪೆಷಾಲಿಟಿ ಹಾಸ್ಟಿಟಲ್‌ 68,803, ಪೀಪಲ್‌ಟ್ರೀ ಹಾಸ್ಟಿಟಲ್‌ 81,600, ಪ್ರಣವ್‌ಹಾಸ್ಪಿಟಲ್‌ 96,500 ಪ್ರಶಾಂತ್‌ ಹಾಸ್ಟಿಟಲ್‌ 1,73,500, ಪೃಥ್ವಿ ಕೋವಿಡ್‌ ಹಾಸ್ಟಿಟಲ್‌ತುಮಕೂರು  37, 253, ರಾಮಯ್ಯ ಹರ್ಷ ಹಾಸ್ಪಿಟಲ್‌ ನೆಲಮಂಗಲ  25,000, ರಂಗದುರೈ ಮೆಮೋರಿಯಲ್‌ ಹಾಸ್ಪಿಟಲ್‌ 46, 886, ಎಸ್‌ ಎಸ್‌ ಇನ್ಸಿಟಿಟ್ಯೂಟ್‌ ಮೆಡಿಕಲ್‌ಸೈನ್ಸ್‌ಸ್‌ ರೀಸರ್ಚ್‌ಸೆಂಟರ್‌ 1,07,000, ಸಕ್ರಾ ಆಸ್ಪತ್ರೆ  3, 06, 993, ಸತ್ಯಸಾಯಿ ಆರ್ಥೋಪೆಡಿಕ್‌ ಅಂಡ್‌ ಮಲ್ಟಿಸ್ಪೆಷಾಲಿಟಿ ಹಾಸ್ಟಿಟಲ್‌ 25, 377, ಎಸ್‌ಡಿಎಂ ಕಾಲೇಜ್‌ ಆಫ್‌ ಮೆಡಿಕಲ್‌ ಸೈನ್ಸ್‌ ಅಂಡ್‌ ಹಾಸ್ಟಿಟಲ್‌ 32, 387, ಎಸ್‌ಡಿಎಸ್‌ಟಿಆರ್‌ಸಿ ಆರ್‌ಜಿಐಸಿಡಿ 7,000, ಶಕುಂತಲಾ ಗ್ರಾಮೀಣ್‌ ಹಾಸ್ಟಿಟಲ್‌ 1,51,000, ಶಿಫಾ ಹಾಸ್ಟಿಟಲ್‌ 11, 859, ಶ್ರೀ ಭಾಗ್ಯವಂತಿ ಮಲ್ಟಿಸ್ಪೆಷಾಲಿಟಿ  3,20,000, ಶ್ರೀದೇವಿ ಇನ್ಸಿಟಿಟ್ಯೂಟ್‌ ಆಫ್‌ ಮೆಡಿಕಲ್‌ಸೈನ್ಸ್‌ ಅಂಡ್‌ ರೀಸರ್ಚ್‌ ಹಾಸ್ಪಿಟಲ್‌ 5,83,539, ಎಸ್‌ಎನ್‌ಎಂಸಿ ಎಚ್‌ಎಸ್‌ಕೆ ಹಾಸ್ಪಟಿಲ್‌ 4, 158, ಶ್ರೀ ಸಿದ್ಧಾರ್ಥ ಮೆಡಿಕಲ್‌ ಕಾಲೇಜ್‌ ಅಂಡ್‌ ರೀಸರ್ಚ್‌ ಸೆಂಟರ್‌ ತುಮಕೂರು 76,112, ಶ್ರೀ ಆದಿಚುಂಚನಗಿರಿ ಹಾಸ್ಪಿಟಲ್‌ ಅಂಡ್‌ ರೀಸರ್ಚ್‌ ಸೆಂಟರ್‌ 9,100, ಶ್ರೀ ಹಾನಗಲ್‌ ಕುಮಾರೇಶ್ವರ ಹಾಸ್ಪಿಟಲ್‌ ಬಾಗಲಕೋಟೆ 24, 245, ಸೇಂಟ್‌ ಜಾನ್ಸ್‌ ಮೆಡಿಕಲ್‌ ಕಾಲೇಜ್‌ ಹಾಸ್ಪಿಟಲ್‌ 1,75, 964, ಸೇಂಟ್‌ ಮಾರ್ಥಾಸ್‌  ಹಾಸ್ಪಿಟಲ್‌ 6,09, 415, ಸುಬ್ಬಯ್ಯ ಮೆಡಿಕಲ್ ಕಾಲೇಜ್‌ ಹಾಸ್ಪಿಟಲ್‌ ರೀಸರ್ಚ್ ಸೆಂಟರ್‌ 1,750, ದ ಬೆಂಗಳೂರು ಹಾಸ್ಪಿಟಲ್‌ 2, 370, ಟಿಎಚ್‌ಎಸ್‌ ಸೂಪರ್‌ ಸ್ಪೆಷಾಲಿಟಿ ಹಾಸ್ಪಿಟಲ್‌ ತುಮಕೂರು  65, 287, ಯೂನಿಟಿ ಸೆಂಟರ್‌ ಫಾರ್‌ ಅಡ್ವಾನ್ಸ್‌ಡ್‌ ಪೀಡಿಯಾಟ್ರಿಕ್ಸ್ ಕೇರ್‌ 53,000, ವಾತ್ಸಲ್ಯ ಲೈಫ್‌ ಹಾಸ್ಪಿಟಲ್‌  61, 335, ವೀರಾಪುರ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್‌ 8,000, ವಿಶ್ವಾಸ್‌ ಹಾಸ್ಪಿಟಲ್‌ನಿಪ್ಪಾಣಿ 20,000, ವೈದೇಹಿ ಹಾಸ್ಪಿಟಲ್‌ 1, 74, 119 ರೂ. ಮರು ಪಾವತಿ ಮಾಡಿರುವುದು ಆರ್‌ಟಿಐ ದಾಖಲೆಯಿಂದ ಗೊತ್ತಾಗಿದೆ.

ರಾಜ್ಯ ಸರ್ಕಾರವು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ನವೆಂಬರ್‌ 23 ಅಂತ್ಯಕ್ಕೆ 62,458 ಪ್ರಕರಣಗಳಿಗೆ 203.24 ಕೋಟಿ ರೂ. ಪಾವತಿಸಲು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಪ್ರಸ್ತಾವನೆ ಸಲ್ಲಿಸಿತ್ತು.  ಇದರಲ್ಲಿ  49,751 ಪ್ರಕರಣಗಳಿಗೆ 166.42 ಕೋಟಿ ರೂ.ಗಳನ್ನು ಭರಿಸಿರುವ ಸರ್ಕಾರ 12,707 ಪ್ರಕರಣಗಳಿಗೆ ವೆಚ್ಚ ಪಾವತಿಸಲು ಈಗಾಗಲೇ ಅನುಮೋದಿಸಿದೆ. ಹಾಗೆಯೇ  36.82 ಕೋಟಿ ಪಾವತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. 30 ಜಿಲ್ಲೆಗಳಲ್ಲಿನ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿನ  ಒಟ್ಟು 26,692 ಪ್ರಕರಣಗಳಿಗೆ 139.89 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದೆ ಎಂದು ಗೊತ್ತಾಗಿದೆ. 

share
ಜಿ.ಮಹಾಂತೇಶ್
ಜಿ.ಮಹಾಂತೇಶ್
Next Story
X