ಭಗತ್ ಸಿಂಗ್ ಪಠ್ಯವನ್ನು ಕೈಬಿಟ್ಟ ಕ್ರಮ ಬಿಜೆಪಿ ಸರ್ಕಾರದ ರಾಷ್ಟ್ರಭಕ್ತಿಯ ಮುಖವಾಡವನ್ನು ಕಳಚಿ ಹಾಕಿದೆ: ಕಾಂಗ್ರೆಸ್
''ಅಷ್ಟ ವಕ್ರನನ್ನು ಪಠ್ಯ ಪುಸ್ತಕ ಸಮಿತಿಯಲ್ಲಿ ಕೂರಿಸಿದ ಪರಿಣಾಮ ಇದು''
ಬೆಂಗಳೂರು: 'ಭಗತ್ ಸಿಂಗ್ ಪಠ್ಯವನ್ನು ಪಠ್ಯಪುಸ್ತಕದಿಂದ ಕೈಬಿಟ್ಟ ಕ್ರಮ ಈ ಬಿಜೆಪಿ ಸರ್ಕಾರದ ರಾಷ್ಟ್ರಭಕ್ತಿಯ ಮುಖವಾಡವನ್ನು ಕಳಚಿ ಹಾಕಿದೆ' ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ' ಬ್ರಿಟೀಷರ ವಿರುದ್ಧ ಹೋರಾಡಿದ ಭಗತ್ ಸಿಂಗ್ ಬದಲು ಬ್ರಿಟೀಷರೊಂದಿಗೆ ಕೈ ಜೋಡಿಸಿದವರ ಪಠ್ಯವನ್ನು ಸೇರಿಸಲಾಗಿದೆ. ಇದು ನಿಜವಾದ ದೇಶದ್ರೋಹಿಗಳ ಕೆಲಸ. ನಿಮ್ಮ ದೇಶದ್ರೋಹ ಜನತೆಗೆ ತಿಳಿಯಲಿದೆ' ಎಂದು ಹೇಳಿದೆ.
''ಇದು ಪಠ್ಯ ಪುಸ್ತಕವೇ ಹೊರತು ನಿಮ್ಮ ಸಂಘದ ಪುಸ್ತಕವಲ್ಲ. ಯಾರೋ ಅಷ್ಟ ವಕ್ರನನ್ನು ಪಠ್ಯ ಪುಸ್ತಕ ಸಮಿತಿಯಲ್ಲಿ ಕೂರಿಸಿದ ಪರಿಣಾಮ ಇದು. ನಿಮ್ಮ ಸಂಘದ ಅಜೆಂಡಾಗಳನ್ನು ಮಕ್ಕಳ ಮೇಲೆ ಹೇರಲು ಹೊರಟಿರುವುದು ನಾಚಿಕೆಗೇಡು. ಸರ್ಕಾರ ಇಂತಹ ಹೊಣೆಗೇಡಿಗಳನ್ನು ಪಠ್ಯ ಪುಸ್ತಕ ಸಮಿತಿಯಿಂದ ಹೊರಗಿಡಲಿ'' ಎಂದು ಕಾಂಗ್ರೆಸ್ ಕಿಡಿಗಾರಿದೆ.
ಭಗತ್ ಸಿಂಗ್ ಪಠ್ಯವನ್ನು ಪಠ್ಯಪುಸ್ತಕದಿಂದ ಕೈಬಿಟ್ಟ ಕ್ರಮ ಈ ಬಿಜೆಪಿ ಸರ್ಕಾರದ ರಾಷ್ಟ್ರಭಕ್ತಿಯ ಮುಖವಾಡವನ್ನು ಕಳಚಿ ಹಾಕಿದೆ. ಬ್ರಿಟೀಷರ ವಿರುದ್ಧ ಹೋರಾಡಿದ ಭಗತ್ ಸಿಂಗ್ ಬದಲು ಬ್ರಿಟೀಷರೊಂದಿಗೆ ಕೈ ಜೋಡಿಸಿದವರ ಪಠ್ಯವನ್ನು ಸೇರಿಸಲಾಗಿದೆ. ಇದು ನಿಜವಾದ ದೇಶದ್ರೋಹಿಗಳ ಕೆಲಸ. ನಿಮ್ಮ ದೇಶದ್ರೋಹ ಜನತೆಗೆ ತಿಳಿಯಲಿದೆ. pic.twitter.com/1WYataeL56
— Karnataka Congress (@INCKarnataka) May 17, 2022