ಎಸ್.ದಿವಾಕರ್ಗೆ ಕಲಾಪ್ರವೀಣ ಪ್ರಶಸ್ತಿ ಪ್ರದಾನ
![ಎಸ್.ದಿವಾಕರ್ಗೆ ಕಲಾಪ್ರವೀಣ ಪ್ರಶಸ್ತಿ ಪ್ರದಾನ ಎಸ್.ದಿವಾಕರ್ಗೆ ಕಲಾಪ್ರವೀಣ ಪ್ರಶಸ್ತಿ ಪ್ರದಾನ](https://www.varthabharati.in/sites/default/files/images/articles/2022/05/17/335479-1652804919.jpg)
ಉಡುಪಿ : ರಾಗಧನ ಸಂಸ್ಥೆಯ ಮಹಾಸಭೆಯ ಸಂದರ್ಭದಲ್ಲಿ ಪರ್ಕಳದ ಸರಿಗಮ ಭಾರತಿ ವೇದಿಕೆಯಲ್ಲಿ ಎ.ಈಶ್ವರಯ್ಯ ಸ್ಮಾರಕ ’ಕಲಾಪ್ರವೀಣ’ ಪ್ರಶಸ್ತಿಯನ್ನು ಸಾಹಿತಿ ಎಸ್.ದಿವಾಕರ್ ಅವರಿಗೆ ಪ್ರದಾನ ಮಾಡಲಾಯಿತು.
ವಿಮರ್ಶಕ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡಕ ಪ್ರಶಸ್ತಿ ಪ್ರದಾನ ಮಾಡಿದರು. ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್ ಅಭಿನಂದನಾ ಭಾಷಣ ಮಾಡಿದರು. ಕೃಷ್ಣಯ್ಯ ಅನಂತಪುರ ಮತ್ತು ರಾಗಧನದ ಅಧ್ಯಕ್ಷ ಡಾ.ಕಿರಣ್ ಹೆಬ್ಬಾರ್ ಮಾತನಾಡಿದರು.
ಕಾರ್ಯದರ್ಶಿ ಉಮಾಶಂಕರಿ ಸ್ವಾಗತಿಸಿ, ರಾಘವೇಂದ್ರ ಆಚಾರ್ಯ ವಂದಿಸಿ ದರು. ಶಿಲ್ಪಾ ಜೋಷಿ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಬೆಂಗಳೂರಿನ ಅದಿತಿ ಪ್ರಹ್ಲಾದ್ ಅವರ ಸಂಗೀತ ಕಚೇರಿ ನಡೆಯಿತು. ಪಿಟೀಲಿನಲ್ಲಿ ತನ್ಮಯಿ ಉಪ್ಪಂಗಳ, ಮೃದಂಗದಲ್ಲಿ ಡಾ. ಬಾಲಚಂದ್ರ ಆಚಾರ್ಯ ಸಹಕರಿಸಿದರು.
Next Story