Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಆರ್‌ಬಿಐ ಮಂಡಳಿಯಿಂದ ಆರೆಸ್ಸೆಸ್...

ಆರ್‌ಬಿಐ ಮಂಡಳಿಯಿಂದ ಆರೆಸ್ಸೆಸ್ ಸಿದ್ಧಾಂತವಾದಿ ಎಸ್.ಗುರುಮೂರ್ತಿ ವಜಾಕ್ಕೆ ಎಐಆರ್‌ಬಿಇಎ ಆಗ್ರಹ

ವಾರ್ತಾಭಾರತಿವಾರ್ತಾಭಾರತಿ18 May 2022 2:29 PM IST
share
ಆರ್‌ಬಿಐ ಮಂಡಳಿಯಿಂದ ಆರೆಸ್ಸೆಸ್ ಸಿದ್ಧಾಂತವಾದಿ ಎಸ್.ಗುರುಮೂರ್ತಿ ವಜಾಕ್ಕೆ ಎಐಆರ್‌ಬಿಇಎ ಆಗ್ರಹ

ಹೊಸದಿಲ್ಲಿ,ಮೇ 18: ಆರೆಸ್ಸೆಸ್ ಪರ ಬಲಪಂಥೀಯ ಸಿದ್ಧಾಂತವಾದಿ ಸ್ವಾಮಿನಾಥನ್ ಗುರುಮೂರ್ತಿ ಅವರನ್ನು ಆರ್‌ಬಿಐ ಮಂಡಳಿಯಿಂದ ವಜಾಗೊಳಿಸುವಂತೆ ದೇಶದ ಅತ್ಯಂತ ಹಳೆಯ ಕಾರ್ಮಿಕ ಒಕ್ಕೂಟಗಳಲ್ಲಿ ಒಂದಾಗಿರುವ ಅಖಿಲ ಭಾರತ ರಿಸರ್ವ್ ಬ್ಯಾಂಕ್ ಉದ್ಯೋಗಿಗಳ ಸಂಘ (ಎಐಆರ್‌ಬಿಇಎ)ವು ಆಗ್ರಹಿಸಿದೆ.
ಗುರುಮೂರ್ತಿ ಅವರು ತಮಿಳು ಸಾಪ್ತಾಹಿಕ ‘ತುಘ್ಲಕ್’ನ ಸಂಪಾದಕರೂ ಆಗಿದ್ದಾರೆ. ಪ್ರಚಲಿತ ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಕುರಿತು ತೀಕ್ಷ್ಣ ಕಾರ್ಟೂನುಗಳು ಮತ್ತು ವಿಡಂಬನೆಗಳನ್ನು ಪ್ರಕಟಿಸುವಲ್ಲಿ ‘ತುಘ್ಲಕ್’ ಹೆಸರಾಗಿದೆ.ಮೋದಿ ಸರಕಾರವು ಆರ್‌ಬಿಐ ಕಾಯ್ದೆ 1934ರ ಕಲಂ 8ರಡಿ ಗುರುಮೂರ್ತಿಯವರನ್ನು ಆರ್‌ಬಿಐ ಮಂಡಳಿಗೆ ಸೇರ್ಪಡೆಗೊಳಿಸಿತ್ತು.ಗುರುಮೂರ್ತಿ ಸಾರ್ವಜನಿಕ ವಲಯದ ಬ್ಯಾಂಕ್ ಉದ್ಯೋಗಿಗಳನ್ನು ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಅವರ ಕೊಡುಗೆಯನ್ನು ಅವಮಾನಿಸಿದ್ದಾರೆ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಬರೆದಿರುವ ಪತ್ರದಲ್ಲಿ ಆರೋಪಿಸಿರುವ ಎಐಆರ್ಬಿಇಎ,ಗುರುಮೂರ್ತಿಯವರ ಟೀಕೆಗಳಿಗಾಗಿ ಅವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದೆ.


ಭಾರತೀಯ ಆರ್ಥಿಕತೆಯನ್ನು ಸದೃಢಗೊಳಿಸುವಲ್ಲಿ ಮತ್ತು ರಕ್ಷಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ನಿರ್ವಹಿಸಿರುವ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳನ್ನು ಗುರುಮೂರ್ತಿ ಅವಮಾನಿಸಿದ್ದಾರೆ ಎಂದು ಎಐಆರ್‌ಬಿಇಎ ಹೇಳಿದೆ.ಆರೆಸ್ಸೆಸ್ ಬೆಂಬಲಿಗ ಗುರುಮೂರ್ತಿ ಮೇ 8ರಂದು ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳನ್ನು ‘ಕೊಳಕು’ಎಂದು ಬಣ್ಣಿಸಿದ್ದರು ಎಂದು ಎಐಆರ್‌ಬಿಇಎ ಆರೋಪಿಸಿದೆ.ತುಘ್ಲಕ್ ಸಾಪ್ತಾಹಿಕದ 52ನೇ ವಾರ್ಷಿಕ ಸಮಾರಂಭದಲ್ಲಿ ಓದುಗರೊಬ್ಬರ ಪ್ರಶ್ನೆಗೆ ಉತ್ತರಿಸಿದ್ದ ಗುರುಮೂರ್ತಿ ಸಾರ್ವಜನಿಕ ವಲಯದ ಬ್ಯಾಂಕುಗಳ ಉದ್ಯೋಗಿಗಳನ್ನು ‘ಕೊಳಕು ’ಎಂದು ಕರೆದಿದ್ದರು. ನಿರ್ಮಲಾ ಸೀತಾರಾಮನ್ ಉಪಸ್ಥಿತಿಯಲ್ಲಿಯೇ ಅವರು ಈ ಟೀಕೆಯನ್ನು ಮಾಡಿದ್ದರು ಎನ್ನಲಾಗಿದೆ.ಗುರುಮೂರ್ತಿಯವರ ಟೀಕೆಗೆ ಆಘಾತ ಮತ್ತು ನಿರಾಶೆಯನ್ನು ವ್ಯಕ್ತಪಡಿಸಿರುವ ಎಐಆರ್‌ಬಿಇಎ,‘ಇದು ಅತ್ಯಂತ ಆಘಾತಕಾರಿ, ಅಸಹ್ಯಕರ ಮತ್ತು ಖಂಡನೀಯವಾಗಿದೆ. ದೇಶದ ಬ್ಯಾಂಕ್ ಉದ್ಯೋಗಿಗಳ ಜೊತೆಗೆ ನಾವು,ಆರ್ಬಿಐ ಉದ್ಯೋಗಿಗಳು ಇದನ್ನು ಸ್ಪಷ್ಟವಾಗಿ ಖಂಡಿಸುತ್ತೇವೆ ’ಎಂದು ಹೇಳಿದೆ.

ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್ ನೌಕರರ ನಿಸ್ವಾರ್ಥ ಸೇವೆಯನ್ನು ತನ್ನ ಪತ್ರದಲ್ಲಿ ಬೆಟ್ಟು ಮಾಡಿರುವ ಎಐಆರ್‌ಬಿಇಎ,ಬ್ಯಾಂಕ್ ಉದ್ಯೋಗಿಗಳನ್ನು ಸೀತಾರಾಮನ್ ಪ್ರಶಂಸಿಸಿದ್ದನ್ನು ಉಲ್ಲೇಖಿಸಿದೆ.
ಇಂತಹ ಉನ್ನತ ಹುದ್ದೆಗೆ ತಾನು ಅನರ್ಹ ಎನ್ನುವುದನ್ನು ಗುರುಮೂರ್ತಿ ಖುದ್ದಾಗಿ ಸಾಬೀತುಗೊಳಿಸಿದ್ದಾರೆ ಎಂದೂ ಅದು ಹೇಳಿದೆ.
ತನ್ನ ವಿರುದ್ಧ ಆಕ್ರೋಶಕ್ಕೆ ಪ್ರತಿಕ್ರಿಯಿಸಿದ,ಬಿಜೆಪಿಯ ಆರ್ಥಿಕ ನೀತಿಗಳ ಹಿಂದಿನ ಮಿದುಳು ಎಂದೇ ಪರಿಗಣಿಸಲ್ಪಟ್ಟಿರುವ ಗುರುಮೂರ್ತಿ,ಆರ್‌ಬಿಐ ಮಂಡಳಿಯಲ್ಲಿರುವುದು ದೊಡ್ಡ ವಿಷಯವೇನಲ್ಲ ಎಂದು ಹೇಳಿದರು.


‘ಆರ್‌ಬಿಐ ಮಂಡಳಿಯಲ್ಲಿ ಪ್ರತಿ ಅಭಿಪ್ರಾಯವನ್ನು ವ್ಯಕ್ತಪಡಿಸಲು ಹೆಚ್ಚಿನವರು ಇರಲಿಲ್ಲ,ಹೀಗಾಗಿ ಹುದ್ದೆಯನ್ನು ಸ್ವೀಕರಿಸುವಂತೆ ನನ್ನ ಮೇಲೆ ಒತ್ತಡ ಹೇರಲಾಗಿತ್ತು. ನನಗೆ ಅದರ ಅಗತ್ಯವಿರಲಿಲ್ಲ,ಅದನ್ನು ಬಯಸಿಯೂ ಇರಲಿಲ್ಲ. ದಶಕಗಳಿಂದಲೂ ಸರಕಾರದಲ್ಲಿ ಅಥವಾ ಸರಕಾರದಿಂದ ಯಾವುದೇ ಹುದ್ದೆಯನ್ನು ನಾನು ಪಡೆದುಕೊಂಡಿಲ್ಲ, ಪಡೆಯುವುದೂ ಇಲ್ಲ. ಆರ್‌ಬಿಐ ಮಂಡಳಿಯಲ್ಲಿ ನನ್ನನ್ನು ಪಾಶ್ಚಾತ್ಯ ಜಗತ್ತಿನ ಹಣಕಾಸು ಮಾಧ್ಯಮಗಳು ಟೀಕಿಸಿವೆ. ನೀವು ಕಮ್ಯುನಿಸ್ಟ್ ಎನ್ನುವುದು ಸಂತಸದ ವಿಷಯ,ನೀವು ಈಗ ಅವರ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು’ ಎಂದು ಹೇಳಿದರು.‘ನಿಮ್ಮ ಮಾಹಿತಿಗಾಗಿ ಹೇಳುತ್ತಿದ್ದೇನೆ. ಯಾವುದೇ ಸಾರ್ವಜನಿಕ ವೇದಿಕೆಯಲ್ಲಿ ಆರ್‌ಬಿಐ ನಿರ್ದೇಶಕ ಎಂದು ನನ್ನನ್ನು ಪರಿಚಯಿಸಲು ನಾನು ಎಂದೂ ಯಾರಿಗೂ ಅವಕಾಶ ನೀಡಿಲ್ಲ. ನಾನು ಆರ್‌ಬಿಐ ಮಂಡಳಿಯಲ್ಲಿ ಇರುವುದಕ್ಕೆ ನೀವು ತೀವ್ರ ಕಳವಳ ವ್ಯಕ್ತಪಡಿಸಿದ್ದೀರಿ. ನಿಮಗೆ ತಿಳಿದಿರಲಿಕ್ಕಿಲ್ಲ,ನಾನು ಆರ್‌ಬಿಐ ಮಂಡಳಿಯಲ್ಲಿ ಇಲ್ಲದಿದ್ದರೆ ಅದು ನನಗೆ ಹೆಚ್ಚಿನ ವ್ಯತ್ಯಾಸವನ್ನುಂಟು ಮಾಡುವುದಿಲ್ಲ’ ಎಂದು ಗುರುಮೂರ್ತಿ ಹೇಳಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X