ಮಂಜೇಶ್ವರದಲ್ಲಿ ಉಚಿತ ಸಾಮೂಹಿಕ ವಿವಾಹ
![ಮಂಜೇಶ್ವರದಲ್ಲಿ ಉಚಿತ ಸಾಮೂಹಿಕ ವಿವಾಹ ಮಂಜೇಶ್ವರದಲ್ಲಿ ಉಚಿತ ಸಾಮೂಹಿಕ ವಿವಾಹ](https://www.varthabharati.in/sites/default/files/images/articles/2022/05/18/335615-1652893879.jpeg)
ಮಂಜೇಶ್ವರ: ನಿರ್ಗತಿಕ ಕುಟುಂಬಗಳನ್ನು ಗುರುತಿಸಿ ವಿದ್ಯಾಭ್ಯಾಸ, ಆಸ್ಪತ್ರೆ ಹಾಗೂ ಹೆಣ್ಣು ಮಕ್ಕಳ ಮದುವೆ ಮೊದಲಾದ ಕ್ಷೇತ್ರಗಳಲ್ಲಿ ಅವರಿಗೆ ಬೇಕಾದ ಸಹಾಯ ಸಹಕಾರವನ್ನು ನೀಡುವ ಉದ್ದೇಶದಿಂದ 2020 ರಲ್ಲಿ ವಾಟ್ಸಪ್ ಮೂಲಕ ರೂಪೀಕೃತಗೊಂಡ ಮಂಜೇಶ್ವರ ಲೈಫ್ ಲಾಂಗ್ ಚ್ಯಾರಿಟಿಯ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವು ಬುಧವಾರದಂದು ಮಂಜೇಶ್ವರದ ಹೃದಯ ಭಾಗದಲ್ಲಿರುವ ಹೊಸಂಗಡಿ ಗ್ರ್ಯಾಂಡ್ ಅಡಿಟೋರಿಯಂ ನಲ್ಲಿ ಭಾರೀ ವಿಜ್ರಂಭಣೆಯಿಂದ ನಡೆಯಿತು.
ವಧುವಿಗೆ 5 ಪವನ್ ಆಭರಣ ಹಾಗೂ ವಧು ವರನಿಗೆ ಉಡುಗೆ ಹಾಗೂ ಎರಡೂ ಕಡೆಯ ಬಂಧುಗಳಿಗೆ ಊಟೋಪಚಾರದ ವ್ಯವಸ್ಥೆಯನ್ನು ಮಾಡಿ ಆಯೋಜಿಸಿದ 3 ಜೋಡಿಗಳ ಸಾಮೂಹಿಕ ವಿವಾಹದ ಚ್ಯಾರಿಟಿಯ ಕಾರ್ಯಕ್ರಮ ಜನಮೆಚ್ಚುಗೆಯನ್ನು ಪಡೆಯುವುದರ ಜೊತೆಗೆ ಭಾರೀ ಪ್ರಶಂಶೆಗೂ ಪಾತ್ರವಾಯಿತು.
ಮುಂಬೈಯಲ್ಲಿ ಉದ್ಯಮಿಯಾಗಿರುವ ಅಶ್ಫಾಕ್ ಎಂಬವರ ಮುತುವರ್ಜಿಜಿಯಿಂದ ಹುಟ್ಟಿಕೊಂಡ ಈ ಚ್ಯಾರಿಟಿಯು ಬಳಿಕ ಮಂಜೇಶ್ವರದ ಹಲವು ಸಮಾಜ ಸೇವಾ ಮನೋಭಾವವುಳ್ಳ ಉದ್ಯಮಿಗಳ ಹಾಗೂ ಸಮಾಜ ಸೇವಕರ ಬೆಂಬಲದೊಂದಿಗೆ ಇದೀಗ ಈ ಲೈಫ್ ಲಾಂಗ್ ಚ್ಯಾರಿಟಿ ಹೆಮ್ಮರವಾಗಿ ಬೆಳೆದು ಸೇವೆಯನ್ನು ನೀಡುತ್ತಿದೆ.
ಮುಂದಿನ ದಿನಗಳಲ್ಲಿ ಜಾತಿ ಮತ ಭೇದವನ್ನು ಮರೆತು ಮಂಜೇಶ್ವರ ಹಾಗೂ ಮೀಂಜ ಗ್ರಾ.ಪಂಚಾಯತ್ ವ್ಯಾಪ್ತಿಯಲ್ಲಿರುವ ನಿರ್ಗತಿಕ ಕುಟುಂಬಗಳನ್ನು ಪತ್ತೆ ಹಚ್ಚಿ ವಿಧ್ಯಾಭ್ಯಾಸ, ರೋಗಿಗಳಿಗೆ ಆಸ್ಪತ್ರೆ ವೆಚ್ಚ , ಮನೆ ಇಲ್ಲದವರಿಗೆ ಮನೆ ನಿರ್ಮಿಸಿ ಕೊಡುವುದು ಹಾಗೂ ಹಾಸಿಗೆ ಹಿಡಿದ ರೋಗಿಗಳಿಗೆ ಬೇಕಾದ ಉಪಕರಣಗಳನ್ನು ವಿತರಿಸುವುದು ಮೊದಲಾದ ರೀತಿಯಲ್ಲಿ ಬ್ಯಾರಿಟಿಯ ಸೇವೆಯನ್ನು ನೀಡಲು ತೀರ್ಮಾನಿಸಿರು ಬಗ್ಗೆ ಅಧಿಕೃತರು ಮಾಹಿತಿ ನೀಡಿದ್ದಾರೆ.
ಮಂಜೇಶ್ವರದ ಉದ್ಯಮಿ ಹಾಗೂ ಲೈಫ್ ಲಾಂಗ್ ಬ್ಯಾರಿಟಿ ಅಧ್ಯಕ್ಷರೂ ಆಗಿರುವ ಯಾಫ್ಕೋ ಹಮೀದ್ ಹಾಜಿಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಮಂಜೇಶ್ವರದ ಶಾಸಕ ಎಕೆಎಂ ಅಶ್ರಫ್ ಉದ್ವಾಟಿಸಿದರು. ಸಯ್ಯದ್ ಅತ್ತಾವುಲ್ಲ ತಂಘಲ್ ಜೋಡಿಗಳಿಗೆ ಸಿಖಾಹ್ ಸೆರವೇರಿಸಿ ಕೊಟ್ಟು ಪ್ರಾರ್ಥನೆ ನಡೆಸಿದರು.
ಅಶ್ರಫ್ ಪೆರ್ಲ, ಫಾರೂಕ್ ಹಾಜಿ , ಅನ್ಸಾಫ್', ಆರ್.ಕೆ. ಭಾವ ಹಾಜಿ, ಅಬ್ದಲ್ಲ ಕಜೆ, ಅಶ್ಪಾಕ್, ಮಹ್ಮೂದ್ ಹಾಜಿ, ಎಂ.ಕೆ. ಖಲೀಲ್ ಪಾಂಡ್ಯಾಲ್ , ಲತೀಫ್ ಬನಾನ , ನಬ್ರಾಸ್ ಮೊದಲಾದವರು ನೇತೃತ್ವ ನೀಡಿದರು. ವೇದಿಕೆಯಲ್ಲಿ ಚ್ಯಾರಿಟಿ ಸದಸ್ಯ ರುಗಳಾದ ಹನೀಫ್ ಪೊಸೋಟು , ಇಕ್ಬಾಲ್ ಪೊಸೋಟು , ಸಿದ್ದೀಖ್, ಇಬ್ರಾಹಿಂ ಬುಟೋ, ನಝೀರ್ ಮೊದಲಾದವರು ಉಪಸ್ಥರಿದ್ದರು.