ಎಸೆಸೆಲ್ಸಿ ಪರೀಕ್ಷೆ: ಭಟ್ಕಳ ತಾಲೂಕು ಶೇ. 85.91 ಫಲಿತಾಂಶ
ವಿದ್ಯಾರ್ಥಿನಿ ಹರ್ಷಿತಾ ವಿಷ್ಣು ನಾಯ್ಕ ರಾಜ್ಯಕ್ಕೆ 2ನೆ ರ್ಯಾಂಕ್
![ಎಸೆಸೆಲ್ಸಿ ಪರೀಕ್ಷೆ: ಭಟ್ಕಳ ತಾಲೂಕು ಶೇ. 85.91 ಫಲಿತಾಂಶ ಎಸೆಸೆಲ್ಸಿ ಪರೀಕ್ಷೆ: ಭಟ್ಕಳ ತಾಲೂಕು ಶೇ. 85.91 ಫಲಿತಾಂಶ](https://www.varthabharati.in/sites/default/files/images/articles/2022/05/19/335741-1652981731.jpg)
ಹರ್ಷಿತಾ ನಾಯ್ಕ, ಜೀವಿತಾ ಮಂಜುನಾಥ್ ನಾಯ್ಕ
ಭಟ್ಕಳ: 2021-22ನೆ ಸಾಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು ಭಟ್ಕಳ ತಾಲೂಕಿನಲ್ಲಿ ಶೇ.85.91 ಫಲಿತಾಂಶ ದಾಖಲಾಗಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ದೇವಿದಾಸ್ ಮೊಗೇರ್ ತಿಳಿಸಿದ್ದಾರೆ.
ಗುರುವಾರ ಸಂಜೆ ಸಾಗರ್ ರಸ್ತೆಯಲ್ಲಿರುವ ಕ್ಷೇತ್ರಶಿಕ್ಷಣಾಧಿಕಾರಿ ಕಚೇರಿಯಲ್ಲಿ ಫಲಿತಾಂಶದ ಕುರಿತಂತೆ ಮಾದ್ಯಮಗಳಿಗೆ ಮಾಹಿತಿ ನೀಡಿದರು.
2172 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 1866 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ತಾಲೂಕಿನ 20 ಶಾಲೆಗಳು ‘ಎ’ ಗ್ರೇಡ್, 13 ಶಾಲೆಗಳು ‘ಬಿ’ಗ್ರೇಡ್ ಹಾಗೂ 4 ಶಾಲೆಗಳು ‘ಸಿ’ ಗ್ರೇಡ್ ಪಡೆದುಕೊಂಡಿವೆ ಎಂದು ಅವರು ಮಾಹಿತಿ ನೀಡಿದರು.
ಇಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ ಹರ್ಷಿತಾ ವಿಷ್ಣು ನಾಯ್ಕ 625 ಅಂಕಗಳಿಗೆ 624 ಅಂಕ ಪಡೆದು (ಶೇ.99.84) ರಾಜ್ಯಕ್ಕೆ ದ್ವಿತೀಯಾ ರ್ಯಾಂಕ್ ಪಡೆದು ತಾಲೂಕಿಗೆ ಪ್ರಥಮ ರ್ಯಾಂಕ್ ಗಳಿಸಿಕೊಂಡಿದ್ದಾಳೆ, ಇದೇ ಶಾಲೆಯ ಜೀವಿತಾ ಮಂಜುನಾಥ್ ನಾಯ್ಕ 623 ಅಂಕಗಳನ್ನು (ಶೇ99.68 ) ಪಡೆದು, ರಾಜ್ಯಕ್ಕೆ ತೃತೀಯ ಹಾಗೂ ತಾಲೂಕಿಗೆ ದ್ವಿತೀಯಾ ರ್ಯಾಂಕ್ ಪಡೆದುಕೊಂಡಿರುತ್ತಾಳೆ.
ನ್ಯೂ ಇಂಗ್ಲಿಷ್ ನ್ಯಾಶನಲ್ ಹೈಸ್ಕೂಲ್ ಮುರುಡೇಶ್ವರದ ವಿದ್ಯಾರ್ಥಿನಿ ಇಫಾ ಜುಕ್ಕಾ ಬಿನ್ತೆ ಮುಹಮ್ಮದ್ ಫತ್ಹಾ ಉಲ್ಲಾ ಜುಕ್ಕಾ 622 ಅಂಕ(ಶೇ.99.52) ಪಡೆದು ಭಟ್ಕಳ ತಾಲೂಕಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾಳೆ. ಆರ್.ಎನ್.ಎಸ್ ವಿದ್ಯಾನಿಕೇತನ ಶಾಲೆಯ ಆಕಾಶ ದಿನೇಶ ಶೇಟ್ (621 ಅಂಕ) 4ನೇ ರ್ಯಾಂಕ್, ವಿದ್ಯಾಭಾರತಿ ಶಾಲೆಯ ನಯನ ಶ್ರೀಧರ್ ಪೈ (621) 5ನೇ ರ್ಯಾಂಕ್, ಸ.ಪ್ರೌ.ಶಾಲೆ ಬೆಳಕೆಯ ಸುಜನ್ ಕೃಷ್ಣ ನಾಯ್ಕ (620 ಅಂಕ) 6ನೇ ರ್ಯಾಂಕ್, ಆರ್.ಎನ್.ಎಸ್ ವಿದ್ಯಾನೀಕೇತನ ಶಾಲೆಯ ಸುಧೀಶ ನಾಯ್ಕ (619) 7ನೇ ರ್ಯಾಂಕ್, ಇದೇ ಶಾಲೆಯ ವಿದ್ಯಾರ್ಥಿನಿ ಯಶಸ್ವಿನಿ ಪ್ರಕಾಶ ನಾಯ್ಕ (619) 8ನೇ ರ್ಯಾಂಕ್, ವಿದ್ಯಾಭಾರತಿ ಶಾಲೆಯ ರಶ್ಮಿ ರಾಜರಾಂ ಪ್ರಭು (619) 9ನೇ ರ್ಯಾಂಕ್, ಆರ್.ಎನ್.ಎಸ್ ವಿದ್ಯಾನೀಕೇತನ ಯಶಸ್ವಿನಿ ಪುಜಾರಿ (618) 10ನೇ ರ್ಯಾಂಕ್ ಪಡೆದುಕೊಂಡಿದ್ದಾಳೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಾಹಿತಿ ನೀಡಿದ್ದಾರೆ.