Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ವಾಯವ್ಯ ಭಾರತ ಮತ್ತು ಪಾಕಿಸ್ತಾನದಲ್ಲಿ...

ವಾಯವ್ಯ ಭಾರತ ಮತ್ತು ಪಾಕಿಸ್ತಾನದಲ್ಲಿ ಗರಿಷ್ಟ ಪ್ರಮಾಣದ ಉಷ್ಣಮಾರುತದ ಸಾಧ್ಯತೆ: ವರದಿ

ವಾರ್ತಾಭಾರತಿವಾರ್ತಾಭಾರತಿ19 May 2022 11:31 PM IST
share
ವಾಯವ್ಯ ಭಾರತ ಮತ್ತು ಪಾಕಿಸ್ತಾನದಲ್ಲಿ ಗರಿಷ್ಟ ಪ್ರಮಾಣದ ಉಷ್ಣಮಾರುತದ ಸಾಧ್ಯತೆ: ವರದಿ

ಲಂಡನ್, ಮೇ 19: ಹವಾಮಾನ ಬದಲಾವಣೆಯಿಂದ ವಾಯವ್ಯ ಭಾರತ ಮತ್ತು ಪಾಕಿಸ್ತಾನದಲ್ಲಿ ದಾಖಲೆ ಮಟ್ಟದ ಉಷ್ಣಮಾರುತ ಬೀಸುವ ಸಾಧ್ಯತೆ 100%ದಷ್ಟಿದೆ ಎಂದು ಬ್ರಿಟನ್‌ನ ಹವಾಮಾನಶಾಸ್ತ್ರ ಇಲಾಖೆಯ ಅಧ್ಯಯನ ವರದಿ ಹೇಳಿದೆ.2010ರ ಎಪ್ರಿಲ್ - ಮೇ ಅವಧಿಯಲ್ಲಿ ಈ ವಲಯದಲ್ಲಿ ದಾಖಲೆ ಮೀರಿದ ತಾಪಮಾನ ವರದಿಯಾಗಿತ್ತು. ಇದನ್ನೂ ಮೀರಿದ ತಾಪಮಾನದಿಂದ ಕೂಡಿದ ಉಷ್ಣಮಾರುತ ಬೀಸಲಿದೆ ಎಂದು ಈ ವಾರ ಪ್ರಕಟವಾದ ಬ್ರಿಟನ್ ಹವಾಮಾನ ಶಾಸ್ತ್ರ ಇಲಾಖೆ ಗುಣಲಕ್ಷಣ ಅಧ್ಯಯನ ವರದಿ ಹೇಳಿದೆ.

2010ರಲ್ಲಿ ಸರಾಸರಿ ತಾಪಮಾನ ಮೀರಿದ ಉಷ್ಣಮಾರುತ ಬೀಸಿರುವುದು 312 ವರ್ಷಕ್ಕೊಮ್ಮೆ ಜರಗುವ ಸಹಜ ವಿದ್ಯಮಾನವಾಗಿದೆ. ಆದರೆ, ಈಗಿನ ಹವಾಮಾನ ವೈಪರೀತ್ಯದ ಸಂದರ್ಭದಲ್ಲಿ ಈ ಸಾಧ್ಯತೆ ಪ್ರತೀ 3.1 ವರ್ಷಕ್ಕೆ ಇಳಿದಿದೆ ಮತ್ತು ಶತಮಾನದ ಅಂತ್ಯದ ವೇಳೆಗೆ ಇದು ಪ್ರತೀ 1.15 ವರ್ಷಕ್ಕೊಮ್ಮೆ ಸಂಭವಿಸುವ ಸಾಧ್ಯತೆಯಿದೆ ಎಂದು ಅಧ್ಯಯನ ವರದಿ ಹೇಳಿದೆ. ಇತ್ತೀಚಿನ ದಿನಗಳಲ್ಲಿ ತಾಪಮಾನ 50.0 ಡಿಗ್ರಿ ಸೆಲ್ಶಿಯಸ್‌ಗೆ ಏರಿರುವುದರಿಂದ ಪ್ರಸ್ತುತ ಉಷ್ಣಮಾರುತ ಸಮುದಾಯ ಮತ್ತು ಜೀವನೋಪಾಯಗಳ ಮೇಲೆ ಪರಿಣಾಮ ಬೀರುವ ಹವಾಮಾನ ವೈಪರೀತ್ಯವಾಗಿರುವುದು ಸ್ಪಷ್ಟವಾಗಿದೆ ಎಂದು ಹವಾಮಾನ ಇಲಾಖೆಯ ಪ್ರೊಫೆಸರ್ ಪೀಟರ್ ಸ್ಟಾಟ್ ಹೇಳಿದ್ದಾರೆ.  ಹೊಸ ದಾಖಲೆಯ ಉಷ್ಣಮಾರುತದ ಸಾಧ್ಯತೆಯಿದೆ ಎಂದು ಹೇಳಲಾಗಿದ್ದರೂ ಹವಾಮಾನ ವಿಜ್ಞಾನಿಗಳು ಈ ತಿಂಗಳಾಂತ್ಯದವರೆಗೆ ಕಾಯಬೇಕಿದೆ. ತಿಂಗಳಾಂತ್ಯಕ್ಕೆ ಎಪ್ರಿಲ್-ಮೇ ತಿಂಗಳ ಎಲ್ಲಾ ತಾಪಮಾನಗಳ ದಾಖಲೆಗಳನ್ನು ಒಟ್ಟುಗೂಡಿಸಿದಾಗ ಪ್ರಸ್ತುತ ಶಾಖದ ಅಲೆಯು 2010ರ ಮಟ್ಟವನ್ನು ಮೀರುತ್ತದೆಯೇ ಎಂಬುದು ಖಚಿತವಾಗುತ್ತದೆ.

 ಈ ಅಧ್ಯಯನ ವರದಿಯನ್ನು ಡಾ. ನಿಕೋಸ್ ಕ್ರಿಸ್ಟಿಡೀಸ್ ಸಿದ್ಧಪಡಿಸಿದ್ದಾರೆ. ಯಾವಾಗಲೂ ಎಪ್ರಿಲ್ ಮತ್ತು ಮೇ ಸಮಯದಲ್ಲಿ ಉಷ್ಣತೆಯ ಸ್ಥಿತಿಯು ಆ ಪ್ರದೇಶದಲ್ಲಿ ಮುಂಗಾರು ಪೂರ್ವ ಹವಾಮಾನದ ಲಕ್ಷಣವಾಗಿದೆ. ಆದರೂ ಹವಾಮಾನ ಬದಲಾವಣೆ ಶಾಖದ ತೀವ್ರತೆಯನ್ನು ಹೆಚ್ಚಿಸುತ್ತದೆ ಎಂದು ನಮ್ಮ ಅಧ್ಯಯನವು ತೋರಿಸುತ್ತದೆ. ಇದು ದಾಖಲೆ ಮುರಿಯುವ ತಾಪಮಾನ ಉಂಟಾಗುವ 100% ಸಾಧ್ಯತೆಯನ್ನು ತೋರಿಸುತ್ತದೆ . ಶತಮಾನದ ಅಂತ್ಯದ ವೇಳೆಗೆ ಹವಾಮಾನ ಬದಲಾವಣೆಯಲ್ಲಿನ ಹೆಚ್ಚಳವು ಈ ರೀತಿಯ ದಾಖಲೆ ಮಟ್ಟದ ತಾಪಮಾನದ ಸರಾಸರಿಯನ್ನು ಪ್ರತೀ ವರ್ಷಕ್ಕೆ ಇಳಿಸಬಹುದು(ಈ ಹಿಂದೆ 312 ವರ್ಷಕ್ಕೆ ಒಮ್ಮೆ) ಎಂದವರು ಹೇಳಿದ್ದಾರೆ.

 ಈ ಮಧ್ಯೆ, ಪಾಕಿಸ್ತಾನದಲ್ಲಿ ರವಿವಾರ 51 ಡಿಗ್ರಿ ಸೆಲ್ಶಿಯಸ್‌ಗೆ ಏರಿದ್ದ ಉಷ್ಣಮಾರುತ ಸೋಮವಾರ ತುಸು ಇಳಿಕೆಯಾಗಿದೆ ಎಂದು ವರದಿಯಾಗಿದೆ. ಆದರೆ, ವಾರದ ಮಧ್ಯಾವಧಿಯಲ್ಲಿ ಮತ್ತೆ ಉಷ್ಣತೆ ಹೆಚ್ಚುವ ನಿರೀಕ್ಷೆಯಿದ್ದು ಪಾಕಿಸ್ತಾನದ ಕೆಲವೆಡೆ ತಾಪಮಾನ ಮತ್ತೆ 50 ಡಿಗ್ರಿ ಮೀರಬಹುದು. ವಾರಾಂತ್ಯದ ವೇಳೆ ಮತ್ತೆ ಸರಾಸರಿ ಮಟ್ಟಕ್ಕೆ ಕುಸಿಯಬಹುದು. ದೇಶದ ಕೆಲವೆಡೆ ಕೃಷಿ ಕಾಯಕದ ಪೂರ್ವಭಾವಿಯಾಗಿ ಯೋಜಿತ ಕೃಷಿ ದಹನ(ತರಗೆಲೆ, ಮಣ್ಣು, ಕಸಕಡ್ಡಿ ಒಟ್ಟುಸೇರಿಸಿ ಸುಡುವ ಮೂಲಕ ಮಣ್ಣಿನ ಫಲವತ್ತತೆ ಹೆಚ್ಚಿಸುವುದು) ಕಾರ್ಯ ನಡೆಯುತ್ತಿರುವುದರಿಂದ ವಾಯು ಗುಣಮಟ್ಟ ಕುಸಿಯಲಿದೆ ಎಂದು ಬ್ರಿಟನ್ ಹವಾಮಾನ ಇಲಾಖೆಯ ಜಾಗತಿಕ ಮಾರ್ಗದರ್ಶನ ಘಟಕದ ಅಧಿಕಾರಿ ಪೌಲ್ ಹಚಿಯನ್ ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X