ಕಸವಿಲೇವರಿ ಸಮಸ್ಯೆ ಸರಿಪಡಿಸದಿದ್ದಲ್ಲಿ ಪ್ರತಿಭಟನೆ: ವಿನಯ ಕುಮಾರ್ ಸೊರಕೆ
ಕಾಪು : ಕಾಪು ವಿಧಾನಸಭಾ ಕ್ಷೇತ್ರದ ಪ್ರಮುಖ ಪಂಚಾಯಿತಿಗಳಲ್ಲಿ ಕಸ ವಿಲೇವರಿ ಸಮಸ್ಯೆ ತಲೆದೋರಿದ್ದು, ಇದನ್ನು ಕೂಡಲೇ ಸರಿಪಡಿಸದಿದ್ದಲ್ಲಿ ಜನಪ್ರತಿನಿಧಿಗಳ ಮತ್ತು ಆಡಳಿತದ ಲೋಪವನ್ನು ಜನರ ಮುಂದಿಡುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸ್ಥಳೀಯರ ಸಹಕಾರದೊಂದಿಗೆ ವಿರೋಧ ಪಕ್ಷದ ನೆಲೆಯಲ್ಲಿ ಕಾಂಗ್ರೆಸ್ ತೀವ್ರ ಪ್ರತಿಭಟನೆ ನಡೆಸಲಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಎಚ್ಚರಿಸಿದರು.
ಅವರು ಮಂಗಳವಾರ ಕಾಪು ಪ್ರೆಸ್ಕ್ಲಬ್ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಡುಬಿದ್ರೆ ಪಂಚಾಯತ್ ನಲ್ಲಿ ಹಸಿಕಸವನ್ನು ಪಂಚಾಯಿತಿ ಕಚೇರಿಯ ಎದುರೇ ರಾಶಿ ಹಾಕಲಾಗಿದೆ. ಹೆಜಮಾಡಿ, ಪಲಿಮಾರು, ಉಚ್ಚಿಲ, ತೆಂಕ ಪಂಚಾಯಿತಿಗಳಲ್ಲಿ ಕಸದ ಸಮಸ್ಯೆ ದಿನದಿಂದ ದಿನಕ್ಕೆ ಹಚ್ಚಾಗುತ್ತಿದೆ.
ನಾನು ಸಚಿವ, ಶಾಸಕನಾಗಿದ್ದ ಕಾಪು ಪುರಸಭೆ ಹಾಗೂ ಸುತ್ತಲಿನ ಗ್ರಾಮ ಪಂಚಾಯಿತಿಗಳ ತ್ಯಾಜ್ಯ ವಿಲೇವಾರಿಗೆ ಅನುಕೂಲವಾಗುವ ನಿಟ್ಟನಲ್ಲಿ ಎಲ್ಲೂರಿನಲ್ಲಿ 10 ಎಕರೆ ಜಮೀನು ಹಾಗೂ 5 ಕೋಟಿ ರೂ ಅನುದಾನದ ವ್ಯವಸ್ಥೆಗೊಳಿಸಿ ಜನರಿಗೆ ತೊಂದರೆಯಾಗದ ರೀತಿಯಲ್ಲಿ ವೈಜ್ಞಾನಿಕ ಮಾದರಿಯಲ್ಲಿ ಕಸ ವಿಲೇವಾರಿ ಘಟಕಕ್ಕೆ ವ್ಯವಸ್ಥೆ ಕಲ್ಪಿಸಿದ್ದೆವು. ಆದರೆ ಈಗಿನ ಆಡಳಿತ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷದಿಂದ ನಡೆದ ಘಟಕದ ಕಾಮಗಾರಿ ಅರೆಬರೆಯಾಗಿ ನಡೆದಿದ್ದು, ಕಸ ನಿರ್ವಹಣೆಗೆ ಯಂತ್ರೋಪಕರuಗಳ ಅಳವಡಿಕೆ ಯಾಗದೆ ಜನರು ಸಮಸ್ಯೆ ಅನುಭವಿಸುತಿದ್ದಾರೆ.
ಗೊಬ್ಬರ ಘಟಕ ಮಾಡಲು ಯಂತ್ರೋಪಕರಣಕ್ಕೆ ಹಣ ಉಳಿಸಿಲ್ಲ. ಸರಕಾರದಿಂದ ಹೊಸ ಅನುದಾನವ ತರುವ ಪ್ರಯತ್ನವನ್ನೂ ಮಾಡದೆ ತ್ಯಾಜ್ಯದಿಂದ ಜನರಿಗೆ ಸಮಸ್ಯೆಯಾಗುವಂತಾಗಿದೆ ಎಂದು ಆರೋಪಿಸಿದ ಅವರು, ಕಸ ಇಲೇವಾರಿಯಲ್ಲಿನ ಜನಪ್ರತಿನಿಧಿಗಳ ಮತ್ತು ಆಡಳಿತದ ಲೋಪವನ್ನು ಜನರ ಮುಂದಿಡುವ ನಿಟ್ಟಿನಲ್ಲಿ ಮುಂದೆ ತೀವ್ರ ಪ್ರತಿಭಟನೆ ನಡೆಸಲಿದ್ದೇವೆ ಎಂದರು.
ಈಗ ಇತರ ಪಂಚಾಯತ್ಗಳ ತ್ಯಾಜ್ಯ ಎಲ್ಲೂರಿಗೆ ತರಬಾರದು ಎಂದು ಅಲ್ಲಿನವವರು ಒತ್ತಡ ಕೂಡಾ ಹಾಕುತ್ತಿದ್ದಾರೆ. ನಮ್ಮದೂ ಅಲ್ಲಿಗೇ ಕಸ ತರಲೇಬೇಕೆಂಬ ಒತ್ತಾಯವೇನೂ ಇಲ್ಲ ನಮ್ಮ ಒತ್ತಾಯ ಕಸದ ಸಮಸ್ಯೆ ಬಗೆಹರಿಸಬೇಕೆಂಬುದಷ್ಟೇ ಆಗಿದೆ. ಜಿಲ್ಲಾಡಳಿತ, ತಾಲೂಕು ಆಡಳಿತ, ಪುರಸಭೆ ಆಡಳಿತ ಹಾಗೂ ಜನಪ್ರತಿನಿಧಿಗಳು ಇದಕ್ಕೊಂದು ಸೂಕ್ತ ಪರಿಹಾರ ನೀಡಿ ಕ್ಷೇತ್ರದ ಕಸ ವಿಲೇವಾರಿಯನ್ನು ಸುಸೂತ್ರವಾಗಿ ವ್ಯವಸ್ಥೆಗೊಳಿಸಬೇಕು ಎಂದು ಒತ್ತಾಯಿಸಿದರು.
ಸಮುದ್ರಕ್ಕೆ ಕಲ್ಲುಹಾಕುವಲ್ಲಿ ಅವ್ಯವಹಾರ ತನಿಖೆಗೂ ಒತ್ತಾಯ : ಕಾಪು ಕ್ಷೇತ್ರದಲ್ಲಿ ಆಗಿರುವ ತಡೆಗೋಡೆ ಕಾಮಗಾರಿಯಲ್ಲಿ ಲೋಪಗಳಿದ್ದು 50 ಶೇ.ಕಾಮಗಾರ ಪೂರ್ಣಗೊಂಡಿಲ್ಲ ಪಡುಕೆರೆಯಿಂದ 79 ಕೋಟಿ ರೂ ತಡೆಗೋಡೆ, ಉಚ್ಚಿಲ ಪರಿಸರದಲ್ಲಿ 69 ಕೋಟಿ ಕಾಮಗಾರಿಗಳು ಇನ್ನೂ ಪೂರ್ತಿಗೊಂಡಿಲ್ಲ. ಪೊಲಿಪುವಿನಲ್ಲಿ ಇದ್ದ ತಡೆಗೋಡೆ ತೆಗೆದು ಹಾಕಿ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದಾರೆ. ಸಮುದ್ರಕ್ಕೆ ಕಲ್ಲುಹಾಕುವಲ್ಲಿ ಎಷ್ಟು ಗುಳುಂ ಆಗಿದೆ ಎಂಬ ಬಗ್ಗೆಯೂ ತನಿಖೆಗೆ ಒತ್ತಾಯಿಸಲಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಪು ಬ್ಲಾಕ್ ಕಾಮಗ್ರೆಸ್ ಅಧ್ಯಕ್ಷ ನವೀನ್ಚಂದ್ರ ಸುವರ್ಣ, ಕಾಪು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲತಾ ಶೆಟ್ಟಿ, ಕಾಪು ಅಲ್ಪಸಂಕ್ಯಾತ ಘಟಕದ ಅಧ್ಯಕ್ಷ ಸರ್ಪುದ್ದೀನ್, ಕಾಪು ಯೂತ್ ಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೈನ್ ಹಾಗೂ ಗ್ರಾ.ಪಂ ಸದಸ್ಯ ನವೀನ್ ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.