ಕೋಲಾರ ತಾಲೂಕು ಕಚೇರಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ರೈತ

ಕೋಲಾರ : ತಾಲೂಕು ಕಚೇರಿಯಲ್ಲಿ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆ ಗೆ ಯತ್ನ, ಮಾಡಿದ ಘಟನೆ ಕೋಲಾರ ತಾಲೂಕು ಕಚೇರಿಯಲ್ಲಿ ನಡೆದಿದೆ.
ಕೋಲಾರ ತಾಲೂಕಿನ ಪುರಹಳ್ಳಿ ಗ್ರಾಮದ ನಿವಾಸಿ ನಾರಾಯಣಸ್ವಾಮಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ 6 ತಿಂಗಳ ಹಿಂದೆ ದಾಖಲೆಗಾಗಿ ಲಂಚದ ಹಣ ನೀಡಿದ್ದರು ದಾಖಲೆ ನೀಡದೆ ಸತಾಯಿಸಿದ ಸಿಬ್ಬಂದಿ, ಮುಟೇಶನ್ ದಾಖಲೆ ನೀಡಲು ಸತಾಯಿಸಿದ್ದಾರೆ ಎನ್ನಲಾಗಿದೆ. 6 ತಿಂಗಳಿಂದ ಕಚೇರಿಗೆ ಅಲೆದು ರೋಸಿ ಹೋದ ರೈತ ಅಧಿಕಾರಿಗಳ ಎದುರೇ ಡೀಸೆಲ್ ಸುರಿದುಕೊಂಡು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಕ್ಷಣ ನೀರು ಸುರಿದು ದುರ್ಘಟನೆ ತಪ್ಪಿಸಿದ ಅಧಿಕಾರಿಗಳು, ಸಾರ್ವಜನಿಕರು ಹಾಗೂ ಗಲ್ ಪೇಟೆ ಪೊಲೀಸರು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
Next Story





