Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಬೆಂಗಳೂರಿನಲ್ಲಿ ಸಾರ್ವಜನಿಕರ...

ಬೆಂಗಳೂರಿನಲ್ಲಿ ಸಾರ್ವಜನಿಕರ ಗಮನಸೆಳೆಯುತ್ತಿರುವ ‘ಶೂದ್ರಸ್’ ತಟ್ಟೆ ಇಡ್ಲಿ!

ಸಮೀರ್ ದಳಸನೂರುಸಮೀರ್ ದಳಸನೂರು27 May 2022 12:17 AM IST
share
ಬೆಂಗಳೂರಿನಲ್ಲಿ ಸಾರ್ವಜನಿಕರ ಗಮನಸೆಳೆಯುತ್ತಿರುವ ‘ಶೂದ್ರಸ್’ ತಟ್ಟೆ ಇಡ್ಲಿ!

ಬೆಂಗಳೂರು, ಮೇ 27: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಹಲವು ಕಡೆಗಳಲ್ಲಿ ತಲೆ ಎತ್ತಿರುವ ಬ್ರಾಹ್ಮಣ್ ಕೆಫೆ, ಬ್ರಾಹ್ಮಣರ ಉಪಾಹಾರ ಮಂದಿರ, ಅಯ್ಯಂಗಾರ್ ಪುಳಿಯೋಗರೆ ಮಾದರಿಯಲ್ಲಿಯೇ ವ್ಯಕ್ತಿಯೊಬ್ಬರು 'ಶೂದ್ರಸ್ ತಟ್ಟೆ ಇಡ್ಲಿ' ಹೊಟೇಲ್ ಆರಂಭಿಸಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ನಗರದ ವಿದ್ಯಾರಣ್ಯಪುರ ಬಸ್ ನಿಲ್ದಾಣ ಸಮೀಪದ ರಾಷ್ಟ್ರಕವಿ ಕುವೆಂಪು ರಸ್ತೆಯ ನರಸೀಪುರ ಲೇಔಟ್‌ನಲ್ಲಿ ಮಂಡ್ಯ ಮೂಲದ ಎನ್.ಟಿ.(ನಲ್ಲಹಳ್ಳಿ ತಮ್ಮಣ್ಣ) ರಾಜೇಂದ್ರ ಎಂಬವರು ‘ಶೂದ್ರಸ್ ತಟ್ಟೆ ಇಡ್ಲಿ’ ಸಸ್ಯಾಹಾರಿ ಹೊಟೇಲ್ ಆರಂಭಿಸಿದ್ದು, ಹೊಟೇಲ್ ಹೆಸರಿನ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜಾತಿ ಆಧಾರಿತ ಬೇಡ ಎನ್ನುವ ಒಂದು ಸಮುದಾಯವೇ ಈಗ ಅವರದ್ದೇ ಜಾತಿಯನ್ನು ಬ್ರ್ಯಾಂಡ್ ಮಾಡಿಕೊಂಡು ವ್ಯಾಪಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ವಿರುದ್ಧವಾಗಿ ಚಳವಳಿ ಮಾದರಿಯಲ್ಲಿಯೇ ಶೂದ್ರಸ್ ಹೆಸರು ಹುಟ್ಟುಹಾಕಿ, ವ್ಯಾಪಾರ ಮಾಡುವ ಈ ವ್ಯಾಪಾರಿಯ ಧೈರ್ಯ ಮೆಚ್ಚಲೇಬೇಕೆಂದು ರಾಜೇಂದ್ರ ಅವರ ಕಾಯಕವನ್ನು ಬಣ್ಣಿಸಿ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಲ್ಲಹಳ್ಳಿ ತಮ್ಮಣ್ಣ ರಾಜೇಂದ್ರ- ಹೊಟೇಲ್ ಮಾಲಕ 

ಸ್ವತಃ ಈ ಕುರಿತು ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಹೊಟೇಲ್ ಮಾಲಕ ನಲ್ಲಹಳ್ಳಿ ತಮ್ಮಣ್ಣ ರಾಜೇಂದ್ರ, 20 ವರ್ಷಗಳಿಂದ ಹೊಟೇಲ್ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದೇನೆ. ಇದೇ ಸ್ಥಳದಲ್ಲಿ ಮಹದೇಶ್ವರ ಹೆಸರಿನಲ್ಲಿ ಹೊಟೇಲ್ ನಡೆಸಲಾಗುತಿತ್ತು. ಆದರೆ, ಇತ್ತೀಚಿಗೆ ಹೊಟೇಲ್ ಉದ್ಯಮದಲ್ಲಿ ಮೇಲ್ಜಾತಿಯ ಜನ ಜಾತಿಯನ್ನೇ ಅಸ್ತ್ರವನ್ನಾಗಿಸಿಕೊಂಡು, ದಪ್ಪ ದಪ್ಪ ಅಕ್ಷರಗಳಲ್ಲಿ ಬೋರ್ಡ್ ಬರೆಸಿ ಯಶಸ್ಸು ಗಳಿಸುತ್ತಿರುವಾಗ, ನಾವು ಏಕೆ ನಮ್ಮನ್ನು ಗುರುತಿಸಬಾರದು?. ಇಂತಹ ಸಂದರ್ಭದಲ್ಲಿ ನಮ್ಮನ್ನು ಗುರುತಿಸುವ ಶೂದ್ರ ಬ್ರ್ಯಾಂಡ್‌ನಲ್ಲಿಯೇ ಹೊಟೇಲ್ ಹೆಸರು ಬದಲಾಯಿಸಿದೆ ಎಂದರು.

ಬಿಎ ವ್ಯಾಸಂಗ ಮಾಡಿರುವ ನನಗೆ, ನಮ್ಮ ಜನರ ಸಂಕಷ್ಟ, ನೋವು, ಹೋರಾಟದ ಹಿನ್ನೆಲೆ ಗೊತ್ತಿದೆ. ಹೊಟೇಲ್ ಹೆಸರಿಟ್ಟಾಗ ಕೆಲವರು ಮಾತ್ರ ಏಕೆ ನಾವು ನಮ್ಮನ್ನು ಕೀಳಾಗಿ ಶೂದ್ರ ಎಂದು ಕರೆದುಕೊಳ್ಳಬೇಕು ಎಂದರು. ಆದರೆ, ಬಹುತೇಕರು ಈ ಹೆಸರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹೀಗಾಗಿಯೇ, ನಾನು ಈ ಹೆಸರನ್ನೇ ಮುಂದುವರಿಸುವೆ ಎಂದು ನುಡಿದರು.

ಹೆಚ್ಚಿದ ಗ್ರಾಹಕರ ಸಂಖ್ಯೆ: ಮೊದಲಿನಿಂದಲೇ ರಾಜೇಂದ್ರ ಹೊಟೇಲ್ ರುಚಿ ಎಂದರೆ ಈ ಭಾಗದ ಜನರಿಗೆ ಅಚ್ಚುಮೆಚ್ಚು. ಇದೀಗ, ಹೊಟೇಲ್ ಹೆಸರು ಶೂದ್ರಸ್ ಎಂದು ಬದಲಾಯಿಸಿದಾಗ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ಜತೆಗೆ, ದೂರದ ಪ್ರದೇಶಗಳಿಂದಲೂ ಬರುತ್ತಿದ್ದಾರೆ ಎಂದು ರಾಜೇಂದ್ರ ಸಂತಸ ವ್ಯಕ್ತಪಡಿಸಿದರು.

ಹೆಸರು ನೋಡಿ ಬಂದೆ!

ಈ ಹೊಟೇಲ್ ಅನ್ನು ಬಸ್ಸಿನಿಂದ ದಿನನಿತ್ಯ ನೋಡುತ್ತಿದ್ದೆ. ಇದರ ಹೆಸರು ನೋಡಿ ಯಾರೋ ನಮ್ಮವರೇ ಆರಂಭಿಸಿದ್ದಾರೆ ಎನ್ನುವ ಭಾವನೆ. ಹೀಗಾಗಿಯೇ ಇಂದು ತಿಂಡಿಗೆ ಶೂದ್ರಸ್ ಹೊಟೇಲ್‍ಗೆ ಬಂದೆ ಗ್ರಾಹಕ ನವೀನ್ ಗೌಡ ನುಡಿದರು.


ಶೂದ್ರ ಎನ್ನುವುದು ನಮ್ಮ ಒಗ್ಗಟ್ಟು

ಶೂದ್ರ ಎನ್ನುವುದು ನಮ್ಮ ಒಗ್ಗಟ್ಟು ಆಗಿದೆ. ಅಲ್ಲದೆ, ಯಾರು ನಾವೆಲ್ಲರೂ ಒಂದು ಎನ್ನುತ್ತಾರೋ, ಅವರೇ ಜಾತಿ ಆಧಾರಿತ ಹೊಟೇಲ್ ಆರಂಭಿಸಿದ್ದಾರೆ. ಹೀಗಿರುವಾಗ ನಾವೇಕೆ, ಶೂದ್ರ ಎಂದು ಹೆಸರಿಡಬಾರದು. ನಮ್ಮವರು ಇದನ್ನು ಅಪ್ಪಿಕೊಳ್ಳುತ್ತಾರೆ ಎನ್ನುವ ವಿಶ್ವಾಸ ಇದೆ.

-ಎನ್.ಟಿ.ರಾಜೇಂದ್ರ, ಮಾಲಕ

share
ಸಮೀರ್ ದಳಸನೂರು
ಸಮೀರ್ ದಳಸನೂರು
Next Story
X