ಮಂಗಳೂರು: ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಕಾರ್ಮಿಕ ಮೃತ್ಯು

ಸಾಂದರ್ಭಿಕ ಚಿತ್ರ
ಮಂಗಳೂರು: ನಗರದ ಪಂಪ್ವೆಲ್ನಲ್ಲಿ ನಿರ್ಮಾಣ ಹಂತದ ಬಹು ಮಹಡಿ ಕಟ್ಟಡದ 10ನೇ ಮಹಡಿಯಿಂದ 3ನೇ ಮಹಡಿಗೆ ಬಿದ್ದು ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ಬುಧವಾರ ನಡೆದಿದೆ.
ಉತ್ತರ ಪ್ರದೇಶದ ಕುಷಿ ನಗರದ ಜಬ್ಬಾರಿ ಅನ್ಸಾರಿ (35) ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ಕಾರ್ಮಿಕ.
10ನೆ ಮಹಡಿಯಲ್ಲಿ ಇಲೆಕ್ಟ್ರಿಕಲ್ ಮತ್ತು ಪ್ಲಂಬಿಂಗ್ ಕೆಲಸ ಮಾಡುತ್ತಿದ್ದಾಗ ಆಯ ತಪ್ಪಿ 3ನೆ ಮಹಡಿಗೆ ಬಿದ್ದಿದ್ದಾರೆ. ಇದರಿಂದ ಜಬ್ಬಾರ್ ಅನ್ಸಾರಿಯ ತಲೆಯ ಎಡ ಭಾಗ, ಕತ್ತಿನ ಹಿಂಭಾಗ, ಎಡಕೈ ಮೊಣಗಂಟಿಗೆ ಮತ್ತು ಬಲ ಕಾಲಿನ ಪಾದಕ್ಕೆ ಗಾಯವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸಂಜೆಯ ವೇಳೆ ಮೃತಪಟ್ಟಿದ್ದಾರೆ.
ಬಹು ಮಹಡಿ ಕಟ್ಟಡದ ಮಾಲಕ ಮತ್ತು ಕಟ್ಟಡದ ಮೇಲ್ವಿಚಾರಕ ಹಾಗೂ ಗುತ್ತಿಗೆದಾರರು ಸೂಕ್ತ ಸುರಕ್ಷಾ ವಿಧಾನ ಅನುಸರಿದೆ ಕಾರ್ಮಿಕರ ಬಗ್ಗೆ ನಿರ್ಲಕ್ಷ ವಹಿಸಲಾಗಿದೆ ಎಂದು ನೀಡಿದ ದೂರಿನಂತೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





