Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಬೃಹತ್ ಕಂಪೆನಿಗಳ 3,188 ಕೋಟಿ ರೂ....

ಬೃಹತ್ ಕಂಪೆನಿಗಳ 3,188 ಕೋಟಿ ರೂ. ಬಡ್ಡಿ, ದಂಡ ಮನ್ನಾ

ಜಿ. ಮಹಾಂತೇಶ್ಜಿ. ಮಹಾಂತೇಶ್3 Jun 2022 7:52 AM IST
share
ಬೃಹತ್ ಕಂಪೆನಿಗಳ 3,188 ಕೋಟಿ ರೂ. ಬಡ್ಡಿ, ದಂಡ ಮನ್ನಾ

ಬೆಂಗಳೂರು: ಕರ ಸಮಾಧಾನ ಯೋಜನೆಗಳ ಹೆಸರಿನಲ್ಲಿ ಫ್ಲಿಪ್ ಕಾರ್ಟ್, ಲಾರ್ಸೆನ್ ಆ್ಯಂಡ್ ಟೂಬ್ರೋ ಪ್ರೈ ಲಿ. (ಎಲ್‌ಆ್ಯಂಡ್‌ಟಿ ), ನಿತೀಶ್ ಎಸ್ಟೇಟ್ಸ್, ಬಿಇಎಂ ಎಲ್, ಕಿಡ್ಸ್ಕೆಂಪ್ ಸೇರಿದಂತೆ ಸಾವಿರಾರು ಕೋಟಿ ರೂ. ವಹಿವಾಟು ನಡೆಸುವ ಹಲವು ಕಂಪೆನಿಗಳಿಗೆ ಕಳೆದೆರಡು ವರ್ಷಗಳಲ್ಲಿ ವಿಧಿಸಿದ್ದ ಬಡ್ಡಿ ಮತ್ತು ದಂಡದ ಮೊತ್ತ 3,188.17 ಕೋಟಿ ರೂ.ಯನ್ನು ಮನ್ನಾ ಮಾಡಲಾಗಿದೆ.

ಕರ್ನಾಟಕ ಮಾರಾಟ ತೆರಿಗೆ, ಮೌಲ್ಯ ವರ್ಧಿತ, ಕೇಂದ್ರ ಮಾರಾಟ ತೆರಿಗೆ, ವಿಲಾಸಿ, ಕೃಷಿ ವರಮಾನ, ಮನರಂಜನಾ ತೆರಿಗೆ, ಕರ್ನಾಟಕ ಸರಕುಗಳ ಪ್ರವೇಶ ತೆರಿಗೆ ಅಡಿಯಲ್ಲಿ ತೆರಿಗೆ ನಮೂನೆ, ಸ್ವಘೋಷಿತ ತೆರಿಗೆ, ಹುಟ್ಟುವಳಿ ತೆರಿಗೆ ಬಾಧ್ಯತೆ ಕಡಿಮೆ ಘೋಷಿಸಿರುವುದು ಸೇರಿದಂತೆ ಇನ್ನಿತರ ಪ್ರಕರಣಗಳಲ್ಲಿ ಬಡ್ಡಿ ಮತ್ತು ದಂಡವನ್ನು ವಿಧಿಸಲಾಗಿತ್ತು.

2019ರಲ್ಲಿ ಜಾರಿಗೆ ತಂದ ಸಮಗ್ರ ಕರ ಸಮಾಧಾನ ಮತ್ತು 2021ರ ಕರಸಮಾಧಾನ ಯೋಜನೆಯಡಿಯಲ್ಲಿ ಶೇ.100 ರಷ್ಟು ಬಡ್ಡಿ ಮತ್ತು ದಂಡ ಮನ್ನಾ ಮಾಡುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಅದರಂತೆ 2019 ಮತ್ತು 2021ರಲ್ಲಿ ಒಟ್ಟು 3,188.17 ಕೋಟಿ ರೂ. ಬಡ್ಡಿ ಮತ್ತು ದಂಡವನ್ನು ಮನ್ನಾ ಮಾಡಿದೆ. ಈ ಸಂಬಂಧ ‘the-file.in’ಗೆ ದಾಖಲೆ ಮತ್ತು ಅಂಕಿ ಅಂಶಗಳು ಲಭ್ಯವಾಗಿವೆ.

ತೆರಿಗೆ ನಮೂನೆ ಲ್ಲಿಸದೆ ಇರುವ ಪ್ರಕರಣ, ತೆರಿಗೆ ನಮೂನೆ ಸಲ್ಲಿಸಿದ್ದರೂ ಸ್ವ-ಘೋಷಿತ ತೆರಿಗೆ ಬಾಧ್ಯತೆ ಪಾವತಿ ಮಾಡದೇ ಇರುವುದು, ಹುಟ್ಟುವಳಿ ತೆರಿಗೆ ಬಾಧ್ಯತೆ ಕಡಿಮೆ ಘೆಷಣೆ ಮಾಡಿರುವುದು, ಹೂಡುವಳಿ ತೆರಿಗೆ ಕ್ಲೇಮ್ ಹೆಚ್ಚಾಗಿ ಘೋಷಣೆ ಮಾಡಿರುವುದು, ವ್ಯಾಟ್ ನಮೂನೆ -240 (ವಾರ್ಷಿಕ ಲೆಕ್ಕ ಪರಿಶೋಧನಾ ವರದಿ_ ಸಲ್ಲಿಸದೇ ಇರುವ ಪ್ರಕರಣಗಳಲ್ಲಿ ದಂಡ ಮತ್ತು ಬಡ್ಡಿಯನ್ನು ವಿಧಿಸಲಾಗುತ್ತಿತ್ತು. ಕೈಗಾರಿಕೋದ್ಯಮದ ಸಂಘ ಸಂಸ್ಥೆಗಳ ಮನವಿಯನ್ನು ಪರಿಗಣಿಸಿ ಕರಸಮಾಧಾನ ಯೋಜನೆಯಡಿ ಪ್ರಯೋಜನ ಪಡೆಯಲು ಎರಡು- ಮೂರು ಬಾರಿ ಕಾಲಾವಕಾಶವನ್ನು ವಿಸ್ತರಿಸಲಾಗಿದೆ.

ಹೀಗಾಗಿಯೇ ಒಟ್ಟು 3,188.17 ಕೋಟಿ ರೂ. ಬಡ್ಡಿ ಮತ್ತು ದಂಡ ಮನ್ನಾ ಮಾಡಲಾಗಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆಯು ಸಾರ್ವ ಜನಿಕ ಲೆಕ್ಕಪತ್ರ ಸಮಿತಿಗೆ ನೀಡಿರುವ ಟಿಪ್ಪಣಿಯಿಂದ ಗೊತ್ತಾಗಿದೆ.

ಫ್ಲಿಪ್ ಕಾರ್ಟ್ ಇಂಡಿಯಾ ಪ್ರೈವೆಟ್ ಲಿಮಿಟೆಟ್‌ಗೆ 5,22,826 ರಷ್ಟು ಬಡ್ಡಿ ಮೊತ್ತ ಮತ್ತು ದಂಡವನ್ನು ಕರ ಸಮಾಧಾನ ಯೋಜನೆಯಡಿಯಲ್ಲಿ ಮನ್ನ್ನಾ ಮಾಡಲಾಗಿದೆ. ಸನ್ ಲಕ್ಸ್ ಟೆಕ್ನಲಾಜೀಸ್ ಪ್ರೈ ಲಿಮಿಟೆಡ್ 3,29,488 ರೂ., ಆರ್‌ಕೆ ಕನ್‌ಸ್ಟ್ರಕ್ಷನ್ಸ್ 7,64,266 ರೂ., ಬಿಇಎಂಎಲ್ ಲಿಮಿಟೆಡ್ ತೆರಿಗೆಯನ್ನು ವಿಳಂಬವಾಗಿ ಪಾವತಿಸಿದ್ದರಿಂದಾಗಿ 15,57,063 ರಷ್ಟು, ಲಾರ್ಸನ್ ಆ್ಯಂಡ್ ಟೂಬ್ರೋ ಪ್ರೈ ಲಿ., 25,94, 194 ರೂ., ಬಡ್ಡಿ ಮನ್ನಾ ಮಾಡಿರುವುದು ತಿಳಿದು ಬಂದಿದೆ.

ಅದೇ ರೀತಿ ಮದ್ಯ ಮಾರಾಟದ ಮೇಲಿನ ತೆರಿಗೆಗೆ ಸಂಬಂಧಿಸಿದಂತೆ 2014ರ ಮಾರ್ಚ್‌ನಿಂದ 2016ರ ಮಾರ್ಚ್ ಅವಧಿಗೆ ಮದ್ಯ ಮಾರಾಟದ 226.19 ಕೋಟಿ ರೂ. ವಹಿವಾಟಿನ ಮೇಲೆ ತೆರಿಗೆಯನ್ನು ಸಂಪೂರ್ಣವಾಗಿ ಪಾವತಿಸಿರಲಿಲ್ಲ ಎಂದು ಸಿಎಜಿ ಆಕ್ಷೇಪ ಎತ್ತಿತ್ತು.ಶೇ. ಐದೂವರೆ ದರದಲ್ಲಿ ಪಾವತಿಸಬೇಕಿದ್ದ ತೆರಿಗೆಯು 12.43 ಕೋಟಿ ಇತ್ತು. ಈ ಪೈಕಿ ಕೇವಲ 1.54 ಕೋಟಿ ರೂ. ಮಾತ್ರ ಪಾವತಿಯಾಗಿತ್ತು. ಇನ್ನುಳಿದ 10.89 ಕೋಟಿ ರೂ. ಬಾಕಿ ಇತ್ತು. ಕರ್ನಾಟಕ ವೌವತೆ (ವೌಲ್ಯವರ್ಧಿತ ತೆರಿಗೆ) ಅಧಿನಿಯಮ 2003ರ ಪರಿಚ್ಛೇದಗಳು 72(2)ಮತ್ತು 36ರ ಅಡಿಯಲ್ಲಿ 1.09 ಕೋಟಿ ರೂ. ಮತ್ತು 3.40 ಕೋಟಿ ರೂ. ದಂಡ ಮತ್ತು ಬಡ್ಡಿ ಪಾವತಿಗೆ ಬಾಕಿ ಇತ್ತು.

ಸಮಗ್ರ ಕರ ಸಮಾಧಾನ ಮತ್ತು ಕರಸಮಾಧಾನ ಯೋಜನೆಯಡಿಯಲ್ಲಿ 2019ರಲ್ಲಿ ಒಟ್ಟು 1,93,251 ಮತ್ತು 2021ರಲ್ಲಿ 1,33,328 ಅರ್ಜಿಗಳು ಸಲ್ಲಿಕೆಯಾಗಿದ್ದವು. 2019ರಲ್ಲಿ 692.63 ಕೋಟಿ ರೂ. ಮತ್ತು 2021ರಲ್ಲಿ 400.61 ಕೋಟಿ ರೂ. ಸೇರಿ 1,093.24 ಕೋಟಿ ರೂ. ತೆರಿಗೆ ಪಾವತಿ ಸಲಾಗಿತ್ತು. 2019ರಲ್ಲಿ 1,168.50 ಕೋಟಿ ರೂ., 2021ರಲ್ಲಿ 1,082.27 ಕೋಟಿ ರೂ. ಬಡ್ಡಿ ಮನ್ನಾ ಮಾಡಿದ್ದರೆ 2019ರಲ್ಲಿ 420.93 ಕೋಟಿ ಮತ್ತು 2021ರಲ್ಲಿ 516.45 ಕೋಟಿ ರೂ. ದಂಡ ಮನ್ನಾ ಮಾಡಲಾಗಿದೆ.

share
ಜಿ. ಮಹಾಂತೇಶ್
ಜಿ. ಮಹಾಂತೇಶ್
Next Story
X