ಅವಹೇಳನಕಾರಿ ಟ್ವೀಟ್ ಗೂ ಸರಕಾರಕ್ಕೂ ಸಂಬಂಧವಿಲ್ಲ: ಕತರ್ ಆಡಳಿತಕ್ಕೆ ಭಾರತೀಯ ರಾಯಭಾರಿ ಉತ್ತರ
"ಅದು ಕೆಲವು ಸಣ್ಣಪುಟ್ಟ ಗುಂಪು ಹಾಗೂ ವ್ಯಕ್ತಿಗಳ ಹೇಳಿಕೆ"
![ಅವಹೇಳನಕಾರಿ ಟ್ವೀಟ್ ಗೂ ಸರಕಾರಕ್ಕೂ ಸಂಬಂಧವಿಲ್ಲ: ಕತರ್ ಆಡಳಿತಕ್ಕೆ ಭಾರತೀಯ ರಾಯಭಾರಿ ಉತ್ತರ ಅವಹೇಳನಕಾರಿ ಟ್ವೀಟ್ ಗೂ ಸರಕಾರಕ್ಕೂ ಸಂಬಂಧವಿಲ್ಲ: ಕತರ್ ಆಡಳಿತಕ್ಕೆ ಭಾರತೀಯ ರಾಯಭಾರಿ ಉತ್ತರ](https://www.varthabharati.in/sites/default/files/images/articles/2022/06/5/337730-1654438772.jpg)
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಪ್ರವಾದಿ ಕುರಿತು ಬಿಜೆಪಿ ನಾಯಕರು ಮಾಡಿದ ಅವಹೇಳನಕಾರಿ ಹೇಳಿಕೆಗಳ ಕುರಿತು ದೇಶ ಮತ್ತು ವಿದೇಶಗಳಲ್ಲಿ ಹೆಚ್ಚುತ್ತಿರುವ ಆಕ್ರೋಶದ ನಡುವೆಯೇ ಕತಾರ್ನಲ್ಲಿನ ಭಾರತೀಯ ರಾಯಭಾರಿಗೆ ಸರ್ಕಾರ ಸಮನ್ಸ್ ನೀಡಿದೆ. ವಕ್ತಾರೆ ನೂಪುರ್ ಶರ್ಮಾ ಮತ್ತು ಅವರ ಸಹೋದ್ಯೋಗಿ ನವೀನ್ ಕುಮಾರ್ ಜಿಂದಾಲ್ ವಿರುದ್ಧ ಪಕ್ಷವು ಕ್ರಮ ಕೈಗೊಂಡಿದೆ, ಆದರೆ ಅರಬ್ ರಾಷ್ಟ್ರಗಳಲ್ಲಿನ ಆಕ್ರೋಶವನ್ನು ಶಾಂತಗೊಳಿಸಲಾಗಿಲ್ಲ. ಭಾರತೀಯ ವಸ್ತುಗಳನ್ನು ಮತ್ತು ಸಿನಿಮಾಗಳನ್ನು ಬಹಿಷ್ಕರಿಸುವ ಕರೆಗಳು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದೆ.
ಇಂದು ಬೆಳಗ್ಗೆ, ರಾಯಭಾರಿ ದೀಪಕ್ ಮಿತ್ತಲ್ ಅವರು ವಿದೇಶಾಂಗ ಕಚೇರಿಯಲ್ಲಿ ಸಭೆ ನಡೆಸಿದ್ದು, ಇದರಲ್ಲಿ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಅವರ ಹೇಳಿಕೆಗಳ ಬಗ್ಗೆ ಕತಾರ್ ಕಳವಳ ವ್ಯಕ್ತಪಡಿಸಿತ್ತು. ಬಳಿಕ ಈ ಬಗ್ಗೆ ಸಮನ್ಸ್ ಹೊರಡಿಸಿ, ಕೇಂದ್ರ ಸರಕಾರ ಸಾರ್ವಜನಿಕ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ ಕತಾರ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು "ಟ್ವೀಟ್ಗಳು ಯಾವುದೇ ರೀತಿಯಲ್ಲಿ ಭಾರತ ಸರ್ಕಾರದ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಇವುಗಳು ಸಣ್ಣ ಗುಂಪುಗಳ ದೃಷ್ಟಿಕೋನಗಳಾಗಿವೆ" ಎಂದು ರಾಯಭಾರಿ ತಿಳಿಸಿದ್ದಾರೆ.
"ನಮ್ಮ ನಾಗರಿಕ ಪರಂಪರೆ ಮತ್ತು ವಿವಿಧತೆಯಲ್ಲಿ ಏಕತೆಯ ಬಲವಾದ ಸಾಂಸ್ಕೃತಿಕ ಸಂಪ್ರದಾಯಗಳಿಗೆ ಅನುಗುಣವಾಗಿ, ಭಾರತ ಸರ್ಕಾರವು ಎಲ್ಲಾ ಧರ್ಮಗಳಿಗೆ ಅತ್ಯುನ್ನತ ಗೌರವವನ್ನು ನೀಡುತ್ತದೆ. ಅವಹೇಳನಕಾರಿ ಹೇಳಿಕೆಗಳನ್ನು ನೀಡಿದವರ ವಿರುದ್ಧ ಈಗಾಗಲೇ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ" ಎಂದು ಹೇಳಿಕೆಯಲ್ಲಿ ತಿಳಿಸಿದೆ.
Indian Embassy in Qatar responds , says “Ambassador conveyed that the tweets do not, in any manner, reflect the views of the Government of India. These are the views of fringe elements.
— Nidhi Razdan (@Nidhi) June 5, 2022
Government of India accords the highest respect to all religions”https://t.co/0nKsfXvStM