ಸೆಲೂನ್ ಮಾಲಕ ಆತ್ಮಹತ್ಯೆ
ಕಾರ್ಕಳ : ಅನಾರೋಗ್ಯ ಪೀಡಿತ ಸೆಲೂನ್ ಮಾಲಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂ.೪ರಂದು ಸಂಜೆ ವೇಳೆ ಬೈಲೂರು ಎಂಬಲ್ಲಿ ನಡೆದಿದೆ.
ಮೃತರನ್ನು ಕಾರ್ಕಳ ನೀರೆ ಗ್ರಾಮದ ನಿವಾಸಿ ಕುಟ್ಟಿ ಸಾಲಿಯಾನ್(೭೨) ಎಂದು ಗುರುತಿಸಲಾಗಿದೆ. ಇವರು ಬೈಲೂರಿನಲ್ಲಿ ಸೆಲೂನ್ ನಡೆಸಿಕೊಂಡಿದ್ದು ಅಸ್ತಮಾ ಮತ್ತು ಶುಗರ್ ಕಾಯಿಲೆಯಿಂದ ಬಳಲುತ್ತಿದ್ದರು. ಇದೇ ಕಾರಣದಿಂದ ಖಿನ್ನತೆಗೆ ಒಳಗಾಗಿದ್ದ ಇವರು, ಬೈಲೂರಿನಲ್ಲಿರುವ ಸೆಲೂನಿನ ಹಿಂಭಾಗದ ಬಾವಿಯ ಪೈಪಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





