ಬಿಜೆಪಿಯಲ್ಲಿ ಆಂತರಿಕ ಕಲಹಕ್ಕೆ ನಾಂದಿ ಹಾಡಿದ ನೂಪುರ್ ಶರ್ಮಾ ಅಮಾನತು
![ಬಿಜೆಪಿಯಲ್ಲಿ ಆಂತರಿಕ ಕಲಹಕ್ಕೆ ನಾಂದಿ ಹಾಡಿದ ನೂಪುರ್ ಶರ್ಮಾ ಅಮಾನತು ಬಿಜೆಪಿಯಲ್ಲಿ ಆಂತರಿಕ ಕಲಹಕ್ಕೆ ನಾಂದಿ ಹಾಡಿದ ನೂಪುರ್ ಶರ್ಮಾ ಅಮಾನತು](https://www.varthabharati.in/sites/default/files/images/articles/2022/06/6/337908-1654539433.jpeg)
ಹೊಸದಿಲ್ಲಿ,ಜೂ.6: ಪ್ರವಾದಿ ಮುಹಮ್ಮದ್ ಕುರಿತು ಅವಹೇಳನಕಾರಿ ಹೇಳಿಕೆಗಳಿಗಾಗಿ ಭಾರತ ಮತ್ತು ಪಶ್ಚಿಮ ಏಷ್ಯಾ ದೇಶಗಳ ನಡುವಿನ ರಾಜತಾಂತ್ರಿಕ ಕೋಲಾಹಲದ ನಡುವೆಯೇ ರವಿವಾರ ಬಿಜೆಪಿಯ ರಾಷ್ಟ್ರೀಯ ವಕ್ತಾರರಾಗಿದ್ದ ನೂಪುರ್ ಶರ್ಮಾರ ಅಮಾನತು ಮತ್ತು ಪಕ್ಷದ ದಿಲ್ಲಿ ಘಟಕದ ಮಾಧ್ಯಮ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಅವರ ಉಚ್ಚಾಟನೆಯು ಪಕ್ಷದೊಳಗೆ ಭಾರೀ ಸಂಚಲನೆಯನ್ನು ಸೃಷ್ಟಿಸಿದೆ.
ಸಮಸ್ಯೆಯನ್ನು ನಿರ್ವಹಿಸಿದ ರೀತಿಯ ಕುರಿತು 2014ರ ಚುನಾವಣೆಯ ಮುನ್ನ ಮತ್ತು ನಂತರ ಸೃಷ್ಟಿಸಲಾಗಿದ್ದ ಸಾಮಾಜಿಕ ಮಾಧ್ಯಮ ಪರಿಸರ ವ್ಯವಸ್ಥೆಯಲ್ಲಿ ಮಾತ್ರವಲ್ಲ,ಪಕ್ಷದ ಸಂಘಟನೆಯೊಳಗೂ ಚರ್ಚೆಗಳು ಹುಟ್ಟಿಕೊಂಡಿವೆ. ಈ ಅಧ್ಯಾಯವು ವಾಗ್ವೈಖರಿ,ಸಿದ್ಧಾಂತ ಮತ್ತು ಪ್ರತಿಫಲಗಳ ಕುರಿತು ಬಿಜೆಪಿಯೊಳಗಿನ ಆಂತರಿಕ ಮಂಥನವನ್ನು ಪ್ರತಿಫಲಿಸುತ್ತಿದೆ.
ಶರ್ಮಾರ ಅಮಾನತಿನ ಬಳಿಕ #ShameOnBJP ಯಂತಹ ಟ್ವಿಟರ್ ಹ್ಯಾಷ್ ಟ್ಯಾಗ್ಗಳು ಟ್ರೆಂಡ್ ಆಗಿವೆ. ಬಿಜೆಪಿಯ ಅಧಿಕೃತ ಸದಸ್ಯರಲ್ಲದಿದ್ದರೂ ಹಲವಾರು ಪ್ರಮುಖ ಬಿಜೆಪಿ ಬೆಂಬಲಿಗರು ಶರ್ಮಾ ತನ್ನ ಹೇಳಿಕೆಗಳಿಗಾಗಿ ಜೀವ ಬೆದರಿಕೆಗಳನ್ನೂ ಎದುರಿಸುತ್ತಿರುವ ಸಂದರ್ಭದಲ್ಲಿ ಅವರನ್ನು ಮತ್ತು ಜಿಂದಾಲ್ರನ್ನು ಪಕ್ಷವು ಕೈಬಿಟ್ಟಿರುವದಕ್ಕಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
‘ನಮ್ಮ ಆಂತರಿಕ ಗುಂಪುಗಳಲ್ಲಿ ಶರ್ಮಾರಿಗೆ ವ್ಯಾಪಕ ಸಹಾನುಭೂತಿ ವ್ಯಕ್ತವಾಗಿದೆ ಮತ್ತು ನಮ್ಮ ಬೆಂಬಲಿಗರನ್ನು ನೆರವಾಗುವಲ್ಲಿ ಇಷ್ಟೊಂದು ಹೇಡಿತನವನ್ನು ಪ್ರದರ್ಶಿಸಿರುವ ಮತ್ತು ಅಧಿಕೃತ ವಕ್ತಾರರನ್ನು ‘ಗೌಣ’ಎಂದು ಬಣ್ಣಿಸಿರುವ ಪಕ್ಷವನ್ನು ಬೆಂಬಲಿಸಬೇಕೇ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ ’ ಎಂದು ಯುವ ಸಾಮಾಜಿಕ ಮಾಧ್ಯಮ ಬಲಪಂಥೀಯ ಪ್ರಭಾವಿಯೋರ್ವರು ಹೇಳಿದರು.
ಇಂತಹ ಗುಂಪುಗಳಿಂದ ಈವರೆಗೆ ಪ್ರಶಂಸೆಗಳನ್ನು ಮಾತ್ರ ಪಡೆದಿದ್ದ ಬಿಜೆಪಿ ಮತ್ತು ಸರಕಾರ ಈಗ ಮೊದಲ ಬಾರಿಗೆ ತೀವ್ರ ಟೀಕೆಗೆ ಗುರಿಯಾಗಿವೆ.
#shameonbjp #IStandWithNupurSharma @BJP4India you lost the trust of Hindus https://t.co/OoSf0c4EzM
— Satyavadi ji (@ji_study) June 5, 2022
Need a new Party, while the seculars never condemn killings and plunder and even justify, here punishment is meted out for stating the obvious. #ShameOnBJP
— Ronakk Jain (@jainonymous) June 5, 2022
#ShameOnBJP they don't have the Guts to protect Kashmiri Pandits & Bengali Hindus but for Minority Appeasement they can Suspend #NupurSharma their Spokesperson without any valid reason!!! #Shame #IsupportNupurSharma#Nupursharmabjp pic.twitter.com/1Oj5hmV2yy
— Sarthak Bhawankar (@sarthakvb_108) June 5, 2022