ಪಿಯು ಪಠ್ಯಪುಸ್ತಕ ಪರಿಷ್ಕರಣೆ ಕೈಬಿಟ್ಟಿಲ್ಲ: ಕೋಟ ಶ್ರೀನಿವಾಸ ಪೂಜಾರಿ
ಉಡುಪಿ : ಪಿಯು ಪಠ್ಯಪುಸ್ತಕ ಪರಿಷ್ಕರಣೆ ಮುಂದೂಡಲಾಗಿದೆಯೇ ಹೊರತು ಕೈಬಿಟ್ಟಿಲ್ಲ. ಜನತೆಗೆ ಮನವರಿಕೆ ಮಾಡುವ ಜವಾಬ್ದಾರಿ ತೆಗೆದುಕೊಳ್ಳು ತ್ತೇವೆ. ಪಠ್ಯ ಪುಸ್ತಕದ ಮೂಲಕ ಮಕ್ಕಳಿಗೆ ದೇಶಪ್ರೇಮ ಕಲಿಸುತ್ತೇವೆ. ರಾಷ್ಟ್ರಪ್ರೇಮ ಬೆಳೆಸುವ ಪಠ್ಯಪುಸ್ತಕ ತಯಾರಿ ನಮ್ಮ ಜವಾಬ್ದಾರಿಯಾಗಿದೆ ಎಂದು ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟೀಕೆಗಳು ಬಂದಂತಹ ಸಂದರ್ಭದಲ್ಲಿ ಪರಿಶೀಲನೆ ಮಾಡಲಾಗುತ್ತದೆ. ಯಾರು ಕೂಡ ಸರ್ವಾಧಿಕಾರಿಗಳ ಆಗಲು ಸಾಧ್ಯವಿಲ್ಲ. ನಿಮ್ಮ ಟೀಕೆಯಲ್ಲಿ ನ್ಯಾಯವಿದ್ದರೆ ನಾವು ಸರಿಪಡಿಸುತ್ತೇವೆ. ಪಠ್ಯಪುಸ್ತಕದ ಭೂತ ಕಾಂಗ್ರೆಸಿನ ಸೃಷ್ಟಿಯಾಗಿದೆ. ಪಠ್ಯಪುಸ್ತಕ ಕೈಬಿಡಲು ಸಿಎಂಗೆ ಮನವಿ ಮಾಡುವ ಸಿದ್ದರಾಮಯ್ಯನ ವ್ಯಕ್ತಿತ್ವಕ್ಕೆ ಸ್ಥಾನಕ್ಕೆ ಇವೆಲ್ಲಾ ಶೋಭೆ ತರಲ್ಲ ಎಂದರು.
ಕಾಂಗ್ರೆಸ್ ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಸುಳ್ಳಿನ ಮೇಲೆ ಕುಳಿತು ಸವಾರಿ ಮಾಡುತ್ತಿದೆ. ಪರಿಷ್ಕರಣೆ ಮತ್ತು ಬದಲಾವಣೆಯ ಬಗ್ಗೆ ಚರ್ಚೆ ಮಾಡಲು ಬರಲಿ. ಪಠ್ಯದ ಮೂಲಕ ರಾಷ್ಟ್ರಪ್ರೇಮವನ್ನು ತುಂಬಿಸುವ ವಾತಾವರಣ ವನ್ನು ನಿರ್ಮಾಣ ಮಾಡಲಾಗಿತ್ತು. ಈ ಹಂತದಲ್ಲೇ ಕಾಂಗ್ರೆಸ್ ಅಪಪ್ರಚಾರವನ್ನು ಶುರುಮಾಡಿದೆ ಎಂದು ಅವರು ತಿಳಿಸಿದರು.
ಈ ಹಿಂದೆ ಪ್ರಶಸ್ತಿ ವಾಪಾಸ್ಸಿ ಎಂಬ ಅಭಿಯಾನವನ್ನು ಶುರು ಮಾಡಿದರು. ಯಾರು ಕೂಡ ಪ್ರಶಸ್ತಿ ವಾಪಸ್ ಕೊಟ್ಟಿಲ್ಲ. ಪಠ್ಯವೇ ಇಲ್ಲದವರು ನಮ್ಮ ಪಠ್ಯ ವನ್ನು ವಾಪಾಸ್ ತೆಗೆಯಿರಿ ಎನ್ನುತ್ತಿದ್ದಾರೆ. ದೇವನೂರು ಮಹಾದೇವ ಒಳ್ಳೆಯ ಸಾಹಿತಿಯಾಗಿದ್ದು, ಅವರ ಬಳಿ ಶಿಕ್ಷಣ ಸಚಿವರು ಹೋಗಿ ಮಾತುಕತೆ ಮಾಡಿ ಮನವರಿಕೆ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಹಿತಿ ಬಳಿ ಒಬ್ಬ ಸಚಿವ ಹೋಗಿರುವುದು ಇದೇ ಮೊದಲು ಎಂದು ಅವರು ಹೇಳಿದರು.
ಬರಗೂರು, ಚಕ್ರತೀರ್ಥ ಸಮಿತಿ ಪಠ್ಯಗಳ ಸೇರ್ಪಡೆ ಹಾಗೂ ಬದಲಾವಣೆ ಪಟ್ಟಿಗಳನ್ನು ಮಾಡುತ್ತಿದ್ದೇವೆ ರಾಷ್ಟ್ರಪ್ರೇಮ ಹೆಚ್ಚಿಸಲು ಪಠ್ಯಪುಸ್ತಕ ಪರಿಷ್ಕರಣೆ ಮಾಡಲಾಗಿದೆ. ಇದನ್ನು ರಾಜ್ಯದ ಆರೂವರೆ ಕೋಟಿ ಜನಕ್ಕೆ ಮನವರಿಕೆ ಮಾಡುತ್ತೇವೆ ಎಂದು ಅವರು ತಿಳಿಸಿದರು.