Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ತಿರುಚಿದ ವೀಡಿಯೋವನ್ನು ನಂಬಿ ಕತರ್‌...

ತಿರುಚಿದ ವೀಡಿಯೋವನ್ನು ನಂಬಿ ಕತರ್‌ ಏರ್‌ವೇಸ್‌ ಮುಖ್ಯಸ್ಥರನ್ನು ʻಈಡಿಯಟ್‌ʼ ಎಂದು ಹೀಗಳೆದು ಪೇಚಿಗೀಡಾದ ಕಂಗನಾ

ವಾರ್ತಾಭಾರತಿವಾರ್ತಾಭಾರತಿ8 Jun 2022 3:16 PM IST
share
ತಿರುಚಿದ ವೀಡಿಯೋವನ್ನು ನಂಬಿ ಕತರ್‌ ಏರ್‌ವೇಸ್‌ ಮುಖ್ಯಸ್ಥರನ್ನು ʻಈಡಿಯಟ್‌ʼ ಎಂದು ಹೀಗಳೆದು ಪೇಚಿಗೀಡಾದ ಕಂಗನಾ

ಹೊಸದಿಲ್ಲಿ: ಒಂದು ವಿಡಂಬನಾತ್ಮಕ ವೀಡಿಯೋ ಕ್ಲಿಪ್ ನೋಡಿ ಮೋಸ ಹೋದ ಬಾಲಿವುಡ್ ನಟಿ ಕಂಗನಾ ರಣೌತ್, ಕತರ್ ಏರ್‌ವೇಸ್‌ ಸಿಇಒ ಅಕ್ಬರ್‌ ಅಲ್‌ ಬಕರ್‌ ಅವರನ್ನು ʻಈಡಿಯಟ್‌ ಆಫ್‌ ಎ ಮ್ಯಾನ್‌ʼ ಎಂದು ಹೇಳುವ ಮೂಲಕ ಮತ್ತೆ ವಿವಾದವನ್ನು ಮೈಗೆಳೆದುಕೊಂಡಿದ್ದಾರೆ.

ಈ ನಿರ್ದಿಷ್ಟ ತಿರುಚಿದ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಪ್ರವಾದಿ ಮುಹಮ್ಮದ್‌ ರ ವಿರುದ್ಧ ನಿಂದನಾತ್ಮಕ ಹೇಳಿಕೆಯನ್ನು ಇಬ್ಬರು ಬಿಜೆಪಿ ನಾಯಕರು ನೀಡಿದ ಬೆನ್ನಲ್ಲಿ ವಿವಿಧ ರಾಷ್ಟ್ರಗಳು ಭಾರತವನ್ನು ಖಂಡಿಸಿದ ಹಿನ್ನೆಲೆಯಲ್ಲಿ ಕತರ್‌ ಏರ್‌ವೇಸ್‌ ಬಹಿಷ್ಕರಿಸುವಂತೆ ವಶುದೇವ್‌ ಎಂಬಾತ ವೀಡಿಯೋದಲ್ಲಿ ಕರೆ ನೀಡಿದ್ದ.

ʻʻಭಾರತೀಯ ದೇವರುಗಳ ನಗ್ನ ಚಿತ್ರಗಳನ್ನು ರಚಿಸಿದ ಕಲಾವಿದ ಎಂ ಎಫ್‌ ಹುಸೈನ್‌ ಅವರಿಗೆ ಕತರ್‌ ಆಶ್ರಯ ನೀಡಿತ್ತು. ಅದೇ ಕತರ್‌ ನಮಗೆ ಉಪದೇಶ ನೀಡುತ್ತಿದೆ ಆದುದರಿಂದ ಕತರ್‌ ಉತ್ಪನ್ನಗಳನ್ನು ಮತ್ತು ಕತರ್‌ ಏರ್‌ವೇಸ್‌ ಅನ್ನು ಬಹಿಷ್ಕರಿಸಬೇಕು,ʼʼಎಂದು ವಿವಾದದ ಹಿನ್ನೆಲೆಯಲ್ಲಿ ಕತರ್‌ನಲ್ಲಿ ಭಾರತೀಯ ಉದ್ಯೋಗಿಗಳನ್ನು ಕೈಬಿಡಲಾಗಿದೆ ಎಂಬ ಸುದ್ದಿಗಳನ್ನು ನಂಬಿ ಹೀಗೆ ಹೇಳಲಾಗಿದೆ ಎನ್ನಲಾಗಿದೆ.

ಇದರ ಬೆನ್ನಲ್ಲೇ ಇನ್ನೊಬ್ಬ ಟ್ವಿಟ್ಟರ್‌ ಬಳಕೆದಾರ ಇದಕ್ಕೆ ಪ್ರತಿಕ್ರಿಯೆಯಾಗಿ ಸ್ಪೂಫ್‌ ವೀಡಿಯೋ ಮಾಡಿ ಕತರ್‌ ಏರ್‌ವೇಸ್‌ ಮುಖ್ಯಸ್ಥರು ಅಲ್‌ ಜಝೀರಾಗೆ ನೀಡಿದ ಸಂದರ್ಶನದ ಡಬ್ಬಿಂಗ್‌ ಮಾಡಿದ್ದೇ ಅಲ್ಲದೆ ಏರ್‌ವೇಸ್‌ ಮುಖ್ಯಸ್ಥರು ಬಹಿಷ್ಕಾರ ಕರೆ ವಾಪಸ್‌ ಪಡೆಯುವಂತೆ ವೈಯಕ್ತಿಕವಾಗಿ ವಶುದೇವ್‌ಗೆ ಅಪೀಲು  ಸಲ್ಲಿಸಿದ್ದಾರೆಂಬರ್ಥ ಬರುವಂತೆ ಬಿಂಬಿಸಲಾಗಿತ್ತು.

ʻʻವಶುದೇವ್‌ ರೂ 634.50 ಹೂಡಿಕೆಯೊಂದಿಗೆ ನಮ್ಮ ಕಂಪೆನಿಯ ದೊಡ್ಡ ಷೇರುದಾರರಾಗಿದ್ದಾರೆ. ನಮಗೆ ಹೇಗೆ ಕಾರ್ಯಾಚರಿಸುವುದೆಂದು ತಿಳಿದಿಲ್ಲ. ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಿದ್ದೇವೆ,ʼʼಎಂದು ತಿರುಚಿದ ವೀಡಿಯೋದಲ್ಲಿ ಕತರ್‌ ಏರ್‌ವೇಸ್‌ ಮುಖ್ಯಸ್ಥರು ಹೇಳುತ್ತಿರುವಂತೆ ಬಿಂಬಿಸಲಾಗಿದೆ.

ಆದರೆ ಈ ತಿರುಚಿದ ವೀಡಿಯೋವನ್ನು ನಿಜವೆಂದೇ ನಂಬಿದ ಕಂಗನಾ ʻʻಈ ಈಡಿಯಟ್‌ಗೆ ಬಡ ವ್ಯಕ್ತಿಯನ್ನು ಹೀಗಳೆಯುವಲ್ಲಿ ಯಾವುದೇ ನಾಚಿಕೆಯಿಲ್ಲ. ವಶುದೇವ್‌ ಬಡವನಾಗಿರಬಹುದು ಹಾಗೂ ನಿಮ್ಮಂತಹ ಶ್ರೀಮಂತ ವ್ಯಕ್ತಿಗೆ ಆತ ಮುಖ್ಯವಲ್ಲದೇ ಇರಬಹುದು, ಆದರೆ ಆತನಿಗೆ ತನ್ನ ನೋವು,ನಿರಾಸೆಯನ್ನು ವ್ಯಕ್ತಪಡಿಸುವ  ಹಕ್ಕಿದೆ. ನಾವೆಲ್ಲರೂ ಸಮಾನರಾಗಿರುವ ಈ ಜಗತ್ತಿನಾಚೆಗಿನ  ಜಗತ್ತೊಂದಿದೆ ಎಂಬುದನ್ನು ಮರೆಯಬೇಡಿ,ʼʼ ಎಂದು ಕಂಗನಾ ಬರೆದಿದ್ದಾರೆ.

The CEO of Qatar airways now gives an interview to Aljazeera on the call for #BycottQatarAirwaysQatar by Vashudev
Watch till the end! https://t.co/ezBC8wYcv6 pic.twitter.com/8dkRZsCPHp

— Ahad (@AhadunAhad11111) June 7, 2022
share
ವಾರ್ತಾಭಾರತಿ
ವಾರ್ತಾಭಾರತಿ
Next Story
X