ಸರಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟ: ಉಡುಪಿ ಜಿಲ್ಲಾ ತಂಡಕ್ಕೆ ರನ್ನರ್ಅಪ್ ಪ್ರಶಸ್ತಿ

ಉಡುಪಿ: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಸರಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಫರ್ಧೆಯಲ್ಲಿ ಜಿಲ್ಲೆಯಿಂದ ಒಟ್ಟು ೭೬ ನೌಕರರು ಭಾಗವಹಿಸಿ, ೧೪ ಚಿನ್ನ, ೮ ಬೆಳ್ಳಿ ಹಾಗೂ ೮ ಕಂಚಿನ ಪದಕಗಳೊಂದಿಗೆ ಸಮಗ್ರ ತಂಡ ವಿಭಾಗದಲ್ಲಿ ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ.
ವಿಜೇತ ಕ್ರೀಡಾಪಟುಗಳ ವಿವರ: ನ್ಯಾಯಾಂಗ ಇಲಾಖೆಯ ವಾಣಿಗೆ ಈಜು ಸ್ಪರ್ಧೆಯಲ್ಲಿ ೩ ಚಿನ್ನ, ಮಂಜುಳಾ-೨ ಕಂಚು, ಲಿನಿ ಅವರಿಗೆ ಉದ್ದ ಜಿಗಿತದಲ್ಲಿ ೧ ಕಂಚು. ವಾಣಿಜ್ಯ ತೆರಿಗೆ ಇಲಾಖೆಯ ಸಾರಿಕಾಗೆ ಈಜು ಸ್ಪರ್ದೆಯಲ್ಲಿ ೩ ಚಿನ್ನ, ಶ್ರೀಕಾಂತ್ಗೆ ಭಾರ ಎತ್ತುವ ಸ್ಪರ್ಧೆಯಲ್ಲಿ ೧ ಬೆಳ್ಳಿ ಪದಕ.
ಶಿಕ್ಷಣ ಇಲಾಖೆಯ ವಿಜಯಲಕ್ಷ್ಮಿ ಕಾರ್ಕಳಗೆ ಈಜು ಸ್ಪರ್ಧೆಯಲ್ಲಿ ೧ ಚಿನ್ನ, ೨ ಬೆಳ್ಳಿ, ಮಂಜುನಾಥ್ ಐತಾಳ್ಗೆಈಜು ಸ್ಪರ್ದೆಯಲ್ಲಿ ೨ ಕಂಚು, ಗಣೇಶ್ ಶೆಟ್ಟಿಗೆ ಉದ್ದ ಜಿಗಿತದಲ್ಲಿ ೧ ಕಂಚು, ಗೀತಾಗೆ ೧೦೦ಮೀ. ಓಟದಲ್ಲಿ ೧ ಬೆಳ್ಳಿ, ೨೦೦ಮೀ. ಓಟದಲ್ಲಿ ೧ ಕಂಚು, ಶ್ರೀದೇವಿಗೆ ಭಾರ ಎತ್ತುವಿಕೆಯಲ್ಲಿ ೨ ಚಿನ್ನ, ವಸಂತಿಗೆ ಭಾರ ಎತ್ತುವಲ್ಲಿ ೧ ಬೆಳ್ಳಿ, ನಾಗರತ್ನಗೆ ೧೦೦ಮಿ. ಓಟದಲ್ಲಿ ೧ ಕಂಚು.
ಅಗ್ನಿ ಶಾಮಕ ಇಲಾಖೆಯ ಅಶ್ವಿನ್ ಸನಿಲ್ಗೆ ಭಾರ ಎತ್ತುವ ಸ್ಪರ್ಧೆಯಲ್ಲಿ ೨ ಚಿನ್ನ, ೧೦೦ ಮೀ. ಓಟದಲ್ಲಿ ೧ ಬೆಳ್ಳಿ. ತಾಂತ್ರಿಕ ಶಿಕ್ಷಣ ಇಲಾಖೆಯ ನಯನ ಪಿ.ಬಿ.ಗೆ ಭರತನಾಟ್ಯದಲ್ಲಿ ಚಿನ್ನ. ಆರೋಗ್ಯ ಇಲಾಖೆಯ ಉದಯ್ ಕುಮಾರ್ ಶೆಟ್ಟಿ ೪೦೦ಮೀ.ಓಟದಲ್ಲಿ ಚಿನ್ನ, ಪಲ್ಲವಿಗೆ ಭಾರ ಎತ್ತುಕೆಯಲ್ಲಿ ೨ ಬೆಳ್ಳಿ.
ಕಿರು ನಾಟಕ ಸ್ಪರ್ಧೆಯಲ್ಲಿ ಶಿಕ್ಷಣ ಇಲಾಖೆಯ ರವಿ ಎಸ್. ಪೂಜಾರಿ ನೇತೃತ್ವದ ತಂಡವು ಬರ್ಬರೀಕ ನಾಟಕ ಪ್ರದರ್ಶಿಸಿ ಪ್ರಥಮ ಸ್ಥಾನ ಪಡೆದಿದೆ. ಪ್ರಥಮ ಸ್ಥಾನ ಪಡೆದ ಎಲ್ಲಾ ಕ್ರೀಡಾಪಟುಗಳು ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಚಿತ್ರದಲ್ಲಿ ವಿಜೇತ ಕ್ರೀಡಾಪಟುಗಳೊಂದಿಗೆ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಮಣ್ಯ ಶೇರಿಗಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ ರೋಶನ್ ಕುಮಾರ್ ಶೆಟ್ಟಿ ಹಾಗೂ ಸಂಘದ ಪದಾಧಿಕಾರಿಗಳಿದ್ದಾರೆ.