PSI ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ: ಮತ್ತಿಬ್ಬರು ಆರೋಪಿಗಳ ಬಂಧನ
ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷ ಅಕ್ರಮಕ್ಕೆ ಸಂಬಂಧಿಸಿದಂತ ಸಿಐಡಿ ಅಧಿಕಾರಿಗಳು ಮತ್ತೆ ಇಬ್ಬರನ್ನು ಬಂಧಿಸಿ ಕಲಬುರಗಿ ಸಿಐಡಿ ಕಚೇರಿಕೆ ಕರೆತರಲಾಗಿದೆ.
ಅಫಜಲಪುರ ತಾಲ್ಲೂಕಿನ ಕರ್ಜಗಿ ಮೂಲದ ಮಹೇಶ ಹಿರೊಳ್ಳಿ, ಸೈಫನ್ ಕರ್ಜಗಿ ಬಂದಿತರು. ಪಿಎಸ್ಐ ಪರೀಕ್ಷೆ ಬರೆದಿದ್ದ ಇಸ್ಮಾಯಿಲ್ ಖಾದರ್. ಪರಾರಿಯಾಗಿದ್ದು, ಅತನ ಬಂಧನಕ್ಕೂ ಜಾಲ ಬಿಸಲಾಗಿದೆ ಎಂದು ತಿಳಿದುಬಂದಿದೆ.
ಇಸ್ಮಾಯಿಲ್ ಖಾದರ್ ಇಲಾಖೆಯಲ್ಲಿದ್ದು, ಪಿಐಸ್ಐ ಪರೀಕ್ಷೆ ಬರೆದಿದ್ದ, ಆರ್.ಡಿ ಪಾಟೀಲ್ ಸಹಾಯದಿಂದ ಪರೀಕ್ಷೆಯ ಅಕ್ರಮ ಏಸಗಿದ್ದ ಎನ್ನಲಾಗಿದೆ.
ಬಂಧಿತ ಅರೋಪಿಗಳ ವಿರುದ್ಧ ಕಲಬುರಗಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆಕ್ರಮದಲ್ಲಿ ಬಂಧಿತರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ.
Next Story