Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಸಬ್ಸಿಡಿ ರದ್ದತಿ ಮಾಡಿದರೆ ಭಾರತೀಯ...

ಸಬ್ಸಿಡಿ ರದ್ದತಿ ಮಾಡಿದರೆ ಭಾರತೀಯ ಮೀನುಗಾರರಿಗೆ ಸಂಕಷ್ಟ: ವರದಿ

ವಾರ್ತಾಭಾರತಿವಾರ್ತಾಭಾರತಿ14 Jun 2022 12:03 AM IST
share
ಸಬ್ಸಿಡಿ ರದ್ದತಿ ಮಾಡಿದರೆ ಭಾರತೀಯ ಮೀನುಗಾರರಿಗೆ ಸಂಕಷ್ಟ: ವರದಿ

ಜಿನೆವಾ, ಜೂ.13: ಭಾರತದ ಮೀನುಗಾರರಿಗೆ ಸರಕಾರ ಒದಗಿಸುತ್ತಿದ್ದ ಸಬ್ಸಿಡಿಯು ಸಮುದಾಯಕ್ಕೆ ಮೀನುಗಾರಿಕೆ ವೃತ್ತಿ ನಡೆಸಲು ಹಾಗೂ ತಮ್ಮ ಕುಟುಂಬವನ್ನು ಸಲಹಲು ನೆರವಾಗುತ್ತಿತ್ತು. ಆದರೆ ಈಗ ವಿಶ್ವ ವ್ಯಾಪಾರ ಸಂಘಟನೆ(ಡಬ್ಲ್ಯೂಟಿಒ) ಒಪ್ಪಂದದ ಪ್ರಕಾರ ಸಬ್ಸಿಡಿ ನಿರ್ಬಂಧಿಸುವ ಕ್ರಮದಿಂದ ಕೋಟ್ಯಾಂತರ ಮೀನುಗಾರರ ಮೇಲೆ ಪರಿಣಾಮ ಉಂಟಾಗಲಿದ್ದು ಅವರ ಕುಟುಂಬ ಬಡತನದ ದವಡೆಗೆ ಸಿಲುಕುವ ಅಪಾಯವಿದೆ ಎಂದು ಮೂಲಗಳು ಹೇಳಿವೆ.

 ಜಿನೆವಾದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಪ್ರಸ್ತಾವಿತ ಮೀನುಗಾರಿಕೆ ಸಬ್ಸಿಡಿ ಒಪ್ಪಂದಕ್ಕೆ ಸಹಿಹಾಕುವ ಮೂಲಕ ಸಬ್ಸಿಡಿಯನ್ನು ನಿವಾರಿಸಲು ಡಬ್ಯ್ಲುಟಿಒ ಸಂಘಟನೆಯ ಅಭಿವೃದ್ಧಿ ಹೊಂದಿದ ದೇಶಗಳು ಒತ್ತಡ ಹೇರುತ್ತಿವೆ ಎಂದು ವರದಿಯಾಗಿದೆ. ಚೀನಾ, ಯುರೋಪಿಯನ್ ಯೂನಿಯನ್(ಇಯು), ಅಮೆರಿಕಗಳಿಗೆ ಹೋಲಿಸಿದರೆ ಭಾರತವು ಮೀನುಗಾರರಿಗೆ ಕಡಿಮೆ ಸಬ್ಸಿಡಿ ನೀಡುತ್ತಿದೆ. ಚೀನಾ ವಾರ್ಷಿಕ 7.3 ಬಿಲಿಯನ್ ಡಾಲರ್, ಯುರೋಪಿಯನ್ ಯೂನಿಯನ್ 3.8 ಬಿಲಿಯನ್ ಡಾಲರ್ ಮತ್ತು ಅಮೆರಿಕ 3.4 ಬಿಲಿಯನ್ ಡಾಲರ್ ಸಬ್ಸಿಡಿ ನೀಡುತ್ತಿದ್ದರೆ ಭಾರತವು ಸಣ್ಣ ಮೀನುಗಾರರಿಗೆ 2018ರಲ್ಲಿ ಕೇವಲ 277 ಮಿಲಿಯನ್ ಡಾಲರ್ ಮೊತ್ತದ ಸಬ್ಸಿಡಿ ನೀಡಿದೆ.

  ಸೆಂಟ್ರಲ್ ಮರೈನ್ ಫಿಶರೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್(ಸಿಎಂಎಫ್‌ಆರ್‌ಐ)ನ 2016ರ ಜನಗಣತಿ ಪ್ರಕಾರ ದೇಶದಲ್ಲಿ ಒಟ್ಟು ಸಮುದ್ರ ಮೀನುಗಾರರ ಸಂಖ್ಯೆ 3.77 ಮಿಲಿಯನ್(0.90 ಮಿಲಿಯನ್ ಮೀನುಗಾರರ ಕುಟುಂಬ) ಆಗಿದೆ. ಇದರಲ್ಲಿ ಸುಮಾರು 67.3%ದಷ್ಟು ಕುಟುಂಬಗಳು ಬಿಪಿಎಲ್ ವರ್ಗಕ್ಕೆ ಸೇರಿವೆ. ಸುಮಾರು 2 ಲಕ್ಷ ಮೀನುಗಾರಿಕೆ ವೃತ್ತಿಗಳಿದ್ದು ಕೇವಲ 59,000 ಮಾತ್ರ ಯಾಂತ್ರೀಕೃತವಾಗಿದೆ. ಅಂದಾಜು ಮೀನುಗಾರಿಕಾ ಸಾಮರ್ಥ್ಯ ಸುಮಾರು 4.4 ಮಿಲಿಯನ್ ಟನ್ ಆಗಿದ್ದರೆ 2019ರಲ್ಲಿ ಕೇವಲ 3.8 ಮಿಲಿಯನ್ ಟನ್ ಸಮುದ್ರ ಉತ್ಪನ್ನಗಳನ್ನು ಸೆರೆಹಿಡಿಯಲಾಗಿದೆ. ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ ಮೀನುಗಾರಿಕೆ ಕುಟುಂಬಗಳು ತುಲನಾತ್ಮಕವಾಗಿ ಸಣ್ಣಪ್ರಮಾಣದ ಬಂಡವಾಳ ಮತ್ತು ಸಣ್ಣ ಪ್ರಮಾಣದ ಮೀನುಗಾರಿಕೆ ಬೋಟ್‌ಗಳನ್ನು ಹೊಂದಿರುತ್ತವೆ ಮತ್ತು ಸಮುದ್ರದ ದಡದ ಸಮೀಪದಲ್ಲಿಯೇ ಮೀನುಗಾರಿಕೆ ನಡೆಸುತ್ತವೆ. ಅಲ್ಲದೆ ಭಾರತದಲ್ಲಿ ಸಮುದ್ರ ಮೀನುಗಾರಿಕೆ ಸಣ್ಣಪ್ರಮಾಣದಲ್ಲಿ ನಡೆಯುತ್ತಿದ್ದರೂ ಕೋಟ್ಯಾಂತರ ಜನರಿಗೆ ಆಹಾರ ಭದ್ರತೆಯನ್ನು ಒದಗಿಸಿದೆ. ಭಾರತದಲ್ಲಿ ಮೀನುಗಾರಿಕೆಯನ್ನು ಕೈಗಾರಿಕೆಯಂತೆ ನಡೆಸಲಾಗುತ್ತಿಲ್ಲ. ಆದರೆ ಅಭಿವೃದ್ಧಿ ಹೊಂದಿದ ದೇಶಗಳು ಬೃಹತ್ ಹಡಗುಗಳ ಮೂಲಕ ಆರ್ಥಿಕ ವಲಯವನ್ನೂ ಮೀರಿ ಆಳಸಮುದ್ರ ಮೀನುಗಾರಿಕೆಯನ್ನು ಕೈಗಾರಿಕೆಯಂತೆ ನಡೆಸುತ್ತಿದ್ದಾರೆ. ಇದು ಮೀನುಗಳ ಸಂತತಿಗೆ ಅಪಾಯಕಾರಿಯಾಗಿದೆ ಎಂದು ಮೂಲಗಳು ಹೇಳಿವೆ.

ಭಾರತದ ಸಮುದ್ರ ಮೀನುಗಾರರ ಜನಸಂಖ್ಯೆ 112 ದೇಶಗಳ ಜನಸಂಖ್ಯೆಗಿಂತ ಅಧಿಕವಾಗಿದೆ. ಮೀನುಗಾರ ಸಮುದಾಯದ ಹಿತಾಸಕ್ತಿಯ ರಕ್ಷಣೆಗೆ ಆಗ್ರಹಿಸಲು ಭಾರತದ ವಿವಿಧ ರಾಜ್ಯಗಳ 34 ಮೀನುಗಾರರ ತಂಡ ಜಿನೆವಾ ತಲುಪಿದೆ. ವಾಣಿಜ್ಯ ಮೀನುಗಾರಿಕೆಗೆ ಮಾತ್ರ ಸಬ್ಸಿಡಿ ರದ್ದುಗೊಳಿಸಬೇಕು, ಜೀವನಾಧಾರ ಮೀನುಗಾರಿಕೆಗೆ ಮುಂದುವರಿಸಬೇಕು ಎಂದವರು ಆಗ್ರಹಿಸಿದ್ದಾರೆ.

ಅಭಿವೃದ್ಧಿ ಹೊಂದಿದ ದೇಶಗಳ ಒತ್ತಡಕ್ಕೆ ಮಣಿದು ಯಾವುದೇ ಒಪ್ಪಂದಕ್ಕೆ ಸಹಿ ಹಾಕಲಾಗದು ಎಂದು ಭಾರತದ ನಿಯೋಗದ ನೇತೃತ್ವ ವಹಿಸಿರುವ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಸ್ಪಷ್ಟಪಡಿಸಿದ್ದಾರೆ.

 ಜೀವನಾಧಾರ ಮೀನುಗಾರಿಕೆ:

ಭಾರತೀಯ ಮೀನುಗಾರರು ಸಾಂಪ್ರಾಯಿಕ ಮತ್ತು ಸುಸ್ಥಿರ ಮೀನುಗಾರಿಕೆ ಪ್ರಕ್ರಿಯೆಯನ್ನು ಸಾವಿರಾರು ವರ್ಷಗಳಿಂದ ಮುನ್ನಡೆಸುತ್ತಾ ಬಂದಿದ್ದಾರೆ ಮತ್ತು ಇದು ಕೇವಲ ಜೀವನಾಧಾರ ಮೀನುಗಾರಿಕೆಯಾಗಿದೆ. ಭಾರತೀಯ ಮೀನುಗಾರಿಕಾ ಸಂಪನ್ಮೂಲಗಳನ್ನು ಮೀನುಗಾರರು ತಮ್ಮ ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ನಂಬಿಕೆಗಳಿಂದ ಉತ್ತಮವಾಗಿ ಸಂರಕ್ಷಿಸಿದ್ದಾರೆ. 61 ದಿನಗಳ ಅವಧಿಗೆ ಮೀನುಗಾರಿಕೆ ರಜಾದಿನಗಳ ಘೋಷಣೆ ಮತ್ತು ಸಂಬಂಧಪಟ್ಟ ರಾಜ್ಯಗಳಿಂದ ಮೀನುಗಾರಿಕೆ ನಿಯಂತ್ರಣ ಕಾಯಿದೆಯ ಅನುಷ್ಟಾನದ ಮೂಲಕ ಸಮರ್ಥನೀಯ ಮೀನುಗಾರಿಕೆಯನ್ನು ಸರಕಾರ ಬೆಂಬಲಿಸುತ್ತದೆ ಎಂದು ಮೂಲಗಳು ಹೇಳಿವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X