ತೀವ್ರಗೊಂಡ 'ಅಗ್ನಿಪಥ್' ವಿರುದ್ಧ ಪ್ರತಿಭಟನೆ: ಬಿಹಾರ ಉಪ ಮುಖ್ಯಮಂತ್ರಿ ಮನೆ ಮೇಲೆ ದಾಳಿ
![ತೀವ್ರಗೊಂಡ ಅಗ್ನಿಪಥ್ ವಿರುದ್ಧ ಪ್ರತಿಭಟನೆ: ಬಿಹಾರ ಉಪ ಮುಖ್ಯಮಂತ್ರಿ ಮನೆ ಮೇಲೆ ದಾಳಿ ತೀವ್ರಗೊಂಡ ಅಗ್ನಿಪಥ್ ವಿರುದ್ಧ ಪ್ರತಿಭಟನೆ: ಬಿಹಾರ ಉಪ ಮುಖ್ಯಮಂತ್ರಿ ಮನೆ ಮೇಲೆ ದಾಳಿ](https://www.varthabharati.in/sites/default/files/images/articles/2022/06/17/339109-1655481425.jpg)
ರೇಣು ದೇವಿ, photo:PTI
ಪಾಟ್ನಾ,ಜೂ.17: ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಬೆಟ್ಟಿಯಾ ನಗರದಲ್ಲಿರುವ ಉಪಮುಖ್ಯಮಂತ್ರಿ ರೇಣುದೇವಿ ನಿವಾಸದ ಮೇಲೆ ಪ್ರತಿಭಟನಕಾರರ ಗುಂಪೊಂದು ದಾಳಿ ನಡೆಸಿದೆ. ಮನೆಯ ಮೇಲೆ ಕಲ್ಲುತೂರಾಟ ನಡೆಸಿದ ಪ್ರತಿಭಟನಕಾರರು ಕಟ್ಟಡಕ್ಕೆ ಭಾರೀ ಹಾನಿಯುಂಟು ಮಾಡಿದ್ದಾರೆ. ದಾಳಿ ನಡೆದ ಸಂದರ್ಭದಲ್ಲಿ ಉಪಮುಖ್ಯಮಂತ್ರಿಯವರು ಅಲ್ಲಿ ಇರಲಿಲ್ಲವೆಂದು ಮೂಲಗಳು ತಿಳಿಇವೆಪಟ್ನಾದಲ್ಲಿ ಘಟನೆಯ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ರೇಣುದೇವಿ ಅವರ, ‘‘ಇಂತಹ ಹಿಂಸಾಚಾರವು ಸಮಾಜಕ್ಕೆ ಅತ್ಯಂತ ಅಪಾಯಕಾರಿಯಾಗಿದೆ’’ ಎಂದು ಹೇಳಿದ್ದಾರೆ. ದಾಳಿಯ ಬಗ್ಗೆ ಪೊಲೀಸರು ತಮಗೆ ಮಾಹಿತಿ ನೀಡಿರುವುದಾಗಿ ರೇಣು ಅವರ ಪುತ್ರ ತಿಳಿಸಿದ್ದಾರೆ.
ಪ್ರತಿಭಟನಕಾರರ ಇನ್ನೊಂದು ಗುಂಪು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಹಾಗೂ ಬೆಟ್ಟಿಯಾ ಸಂಸದ ಡಾ. ಸಂಜಯ್ ಜೈಸ್ವಾಲ್ಗೆ ಸೇರಿದ ತೈಲ ಮಾರಾಟ ಘಟಕವೊಂದರ ಮೇಲೆ ದಾಳಿ ನಡೆಸಿದ್ದಾರೆ ಬೆಟ್ಟಿಯಾದಲ್ಲಿರುವ ಅವರ ನಿವಾಸದ ಮೇಲೆ ಪ್ರತಿಭಟನಕಾರರು ಗಾಳಿಯಲ್ಲಿ ಗುಂಡು ಹಾರಿಸಿರುವ ಬಗೆಯೂ ವರದಿಯಾಗಿದೆ. ಗುಂಡು ಹಾರಾಟದಲ್ಲಿ ಯಾರಿಗೂ ಗಾಯಗಳಾಗಿಲ್ಲವೆಂದು ತಿಳಿದುಬಂದಿದೆ.
ಪಾ ಟ್ನಾದಲ್ಲಿ ಹಿಂಸಾಚಾರ
ಪಾಟ್ನಾದಲ್ಲಿ ಪ್ರತಿಭಟನಕಾರರು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಸುಗುಣಾ ಮೊರ್ ಪ್ರದೇಶದಲ್ಲಿ ಹಲವಾರು ಅಂಗಡಿ, ಮುಂಗಟ್ಟೆಗಳನ್ನು ಕೊಳ್ಳೆಹೊಡೆದಿದ್ದಾರೆ. ಬೈಲಿ ರೋಡ್ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗಿನಿಂದ ಪ್ರತಿಟನಕಾರರು ರಸ್ತೆತಡೆ ಮಾಡಿದ್ದರಿಂದ, ವಾಹನ ಸಂಚಾರ ಅಸ್ತವ್ಯವಸ್ಥಗೊಂಡಿದೆ. ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಪ್ರತಿಭಟನಕಾರರನ್ನು ನಿಯಂತ್ರಿಲಾಗದೆ, ಪೊಲೀಸರು ಮೂಕಪ್ರೇಕ್ಷಕರಾಗಿದ್ದರು.ಲಾಖಿ ಸರಾಯ್ನಲ್ಲಿ ಅಮರನಾಥ್ ಎಕ್ಸ್ಪ್ರೆಸ್ಗೆ ಬೆಂಕಿ ಹಚ್ಚಲಾಗಿದೆ. ಸಮಸ್ಟಿಪುರದಲ್ಲಿ ಅಮರನಾಥ್ ಎಕ್ಸ್ಪ್ರೆಸ್ ರೈಲಿಗೆ ಬೆಂಕಿ ಹಚ್ಚಲಾಗಿದೆ. ಸಂಪೂರ್ಣ ಕ್ರಾಂತಿ ಎಕ್ಸ್ಪ್ರೆಸ್, ಜಮ್ಮುತಾಬಿ- ಗುವಾಹಟಿ ಲೋಹಿತ್ ಎಕ್ಸ್ಪ್ರೆಸ್ ರೈಲುಗಳಿಗೂ ಬೆಂಕಿ ಹಚ್ಚಲಾಗಿದೆ. ಔರಂಗಾಬಾದ್ನಲ್ಲಿ ಹಿಂಸಾತ್ಮಕ ಪ್ರತಿಭಟನೆಯ ಹಿನ್ನೆಲೆಯಲ್ಲಿ ದಿಲ್ಲಿ-ಹೌರಾ ರೈಲು ಮಾರ್ಗದಲ್ಲಿ ರೈಲು ಸಂಚಾರದಲ್ಲಿ ವ್ಯತ್ಯವುಂಟಾಗಿದೆ.