ಬಿಹಾರ ಉರಿಯುತ್ತಿದೆ, ಆದರೆ ಬಿಜೆಪಿ, ನಿತೀಶ್ ಕುಮಾರ್ ಪಕ್ಷ ಕಿತ್ತಾಟದಲ್ಲಿ ತೊಡಗಿವೆ: ಪ್ರಶಾಂತ್ ಕಿಶೋರ್
![ಬಿಹಾರ ಉರಿಯುತ್ತಿದೆ, ಆದರೆ ಬಿಜೆಪಿ, ನಿತೀಶ್ ಕುಮಾರ್ ಪಕ್ಷ ಕಿತ್ತಾಟದಲ್ಲಿ ತೊಡಗಿವೆ: ಪ್ರಶಾಂತ್ ಕಿಶೋರ್ ಬಿಹಾರ ಉರಿಯುತ್ತಿದೆ, ಆದರೆ ಬಿಜೆಪಿ, ನಿತೀಶ್ ಕುಮಾರ್ ಪಕ್ಷ ಕಿತ್ತಾಟದಲ್ಲಿ ತೊಡಗಿವೆ: ಪ್ರಶಾಂತ್ ಕಿಶೋರ್](https://www.varthabharati.in/sites/default/files/images/articles/2022/06/19/339354-1655624561.jpg)
ಹೊಸದಿಲ್ಲಿ: "ಅಗ್ನಿಪಥ್ಗಾಗಿ ಆಂದೋಲನ ನಡೆಯಬೇಕೇ ಹೊರತು ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯವಲ್ಲ. ಜೆಡಿಯು (ಜನತಾ ದಳ ಸಂಯುಕ್ತ) ಹಾಗೂ ಬಿಜೆಪಿ ನಡುವಿನ ಸಂಘರ್ಷದ ಭಾರವನ್ನು ಬಿಹಾರದ ಜನರು ಹೊತ್ತಿದ್ದಾರೆ. ಬಿಹಾರ ಹೊತ್ತಿ ಉರಿಯುತ್ತಿದೆ. ಎರಡೂ ಪಕ್ಷಗಳ ನಾಯಕರು ಕಿತ್ತಾಟ ಹಾಗೂ ಪ್ರತಿತಂತ್ರದಲ್ಲಿ ನಿರತರಾಗಿದ್ದಾರೆ. ಸಮಸ್ಯೆಯನ್ನು ಪರಿಹರಿಸುವ ಬದಲು ಪರಸ್ಪರ ಆರೋಪ ಮಾಡುತ್ತಿದ್ದಾರೆ" ಎಂದು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಟ್ವೀಟ್ ಮಾಡಿದ್ದಾರೆ.
ರಾಜ್ಯದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳನ್ನು ತಡೆಯಲು ನಿತೀಶ್ ಕುಮಾರ್ ಸರಕಾರದ ಅಸಮರ್ಪಕ ಪ್ರಯತ್ಯವನ್ನು 'ಅಗ್ನಿಪಥ' ಪ್ರತಿಭಟನಾಕಾರರಿಂದ ಮನೆ ಧ್ವಂಸಗೊಂಡ ಬಿಹಾರದ ಬಿಜೆಪಿ ಮುಖ್ಯಸ್ಥ ಟೀಕಿಸಿದ್ದಾರೆ. ಬಿಹಾರದ ಉಪಮುಖ್ಯಮಂತ್ರಿ ರೇಣುದೇವಿ ಅವರ ಮನೆ ಹಾಗೂ ಬಿಜೆಪಿಯ ಹಲವು ಕಚೇರಿಗಳನ್ನು ಪ್ರತಿಭಟನಾಕಾರರು ಧ್ವಂಸಗೊಳಿಸಿದ್ದಾರೆ.
ಜೆಡಿಯು ಸಂಸದ ರಾಜೀವ್ ರಂಜನ್ ಅವರು ಪ್ರತಿಭಟನೆಗಳ ಬಗ್ಗೆ ಜೆಡಿಯು ಅನ್ನು ಅನಗತ್ಯವಾಗಿ ದೂಷಿಸಿದ್ದಾರೆ ಎಂದು ಮೈತ್ರಿ ಪಾಲುದಾರ ಬಿಜೆಪಿ ವಿರುದ್ಧ ಕಿಡಿಕಾರಿದರು.
“ಕೇಂದ್ರ ಸರಕಾರ ನಿರ್ಧಾರ ಕೈಗೊಂಡಿದೆ. ಬೇರೆ ರಾಜ್ಯಗಳಲ್ಲೂ ಪ್ರತಿಭಟನೆಗಳು ನಡೆಯುತ್ತಿವೆ. ಯುವಕರು ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. , ಆದ್ದರಿಂದ ಅವರು ಪ್ರತಿಭಟನೆಗೆ ಇಳಿದಿದ್ದಾರೆ. ಖಂಡಿತ ಹಿಂಸೆಯೇ ದಾರಿಯಲ್ಲ. ನಾವು ಹಿಂಸೆಯನ್ನು ಒಪ್ಪಲು ಸಾಧ್ಯವಿಲ್ಲ. ಆದರೆ ಈ ಯುವಜನರನ್ನು ಚಿಂತೆಗೀಡು ಮಾಡುತ್ತಿರುವ ವಿಚಾರವನ್ನು ಅವರ ಕಳವಳಗಳನ್ನು ಬಿಜೆಪಿಯೂ ಕೇಳಬೇಕು. ಬದಲಾಗಿ ಬಿಜೆಪಿ ಆಡಳಿತದ ಮೇಲೆ ಆರೋಪ ಮಾಡುತ್ತಿದೆ. ಆಡಳಿತ ಏನು ಮಾಡುತ್ತದೆ?. ಹತಾಶೆಗೊಂಡ ಬಿಜೆಪಿ ಪಕ್ಷವು ಪ್ರತಿಭಟನಾಕಾರರ ಕೋಪವನ್ನು ನಿಯಂತ್ರಿಸಲಾಗದೆ ಆಡಳಿತವನ್ನು ದೂಷಿಸುತ್ತಿದೆ’’ ಎಂದು ರಾಜೀವ್ ರಂಜನ್ ಹೇಳಿದ್ದಾರೆ.