‘ಅಂತರಾತ್ಮ’ ಪುಸ್ತಕ ಬಿಡುಗಡೆ
ಮಂಗಳೂರು : ವೈದ್ಯ ಡಾ. ಧನಂಜಯ ಭಟ್ ಅವರ ಮೊದಲ ಪುಸ್ತಕ ‘ಅಂತರಾತ್ಮ’ ಬಿಡುಗಡೆ ಸಮಾರಂಭ ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆಯಿತು.
ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ರವಿ ರಾವ್ ಅವರು ಪುಸ್ತಕ ಬಿಡುಗಡೆ ಗೊಳಿಸಿದರು. ಇದೇ ವೇಳೆ ಲೇಖಕ ಡಾ. ಧನಂಜಯ ಭಟ್, ಶ್ರೀನಾಥ್ ರಾವ್, ಶಿಕ್ಷಕಿ ಸಾವಿತ್ರಿ ಮತ್ತು ಕರ್ನಾಟಕ ಆಯುರ್ವೇದ ವೈದ್ಯಕೀಯ ಕಾಲೇಜಿನ ಉಪನ್ಯಾಸಕಿ ಡಾ. ಶೃತಿ ಭಟ್ ಇದ್ದರು.
ಹತ್ತು ವರ್ಷದ ವೈದ್ಯಕೀಯ ಅನುಭವದ ಜೊತೆಗೆ ಮನೋ ದೈಹಿಕ ಕಾಯಿಲೆಗಳ ಬಗ್ಗೆ ಮತ್ತು ಅವುಗಳಿಗೆ ಇರುವ ಸಾಮಾನ್ಯ ಪರಿಹಾರದ ಬಗ್ಗೆ ಚುಟುಕಾಗಿ ಈ ಪುಸ್ತಕದಲ್ಲಿ ಉಲ್ಲೇಖ ಮಾಡಲಾಗಿದೆ. ಇವತ್ತಿನ ದಿನಮಾನದಲ್ಲಿ ಮಕ್ಕಳಿಗೆ, ಹಿರಿಯರಿಗೆ, ಕಾಯಿಲೆ ಪೀಡಿತರಿಗೆ ಯಾವ ರೀತಿ ಆಪ್ತಸಲಹೆ ಉಪಯುಕ್ತವಾಗಿದೆ ಎಂಬ ಚರ್ಚೆ ಈ ಪುಸ್ತಕದಲ್ಲಿದೆ ಎಂದು ಲೇಖಕರು ತಿಳಿಸಿದ್ದಾರೆ.
Next Story