ಮುಖ್ಯಮಂತ್ರಿಯಾದ ಬೆನ್ನಿಗೇ ಉದ್ಧವ್ ಠಾಕ್ರೆ ಸರಕಾರದ ಪ್ರಮುಖ ನಿರ್ಧಾರ ಬದಲಾಯಿಸಿದ ಶಿಂಧೆ:ವರದಿ
![ಮುಖ್ಯಮಂತ್ರಿಯಾದ ಬೆನ್ನಿಗೇ ಉದ್ಧವ್ ಠಾಕ್ರೆ ಸರಕಾರದ ಪ್ರಮುಖ ನಿರ್ಧಾರ ಬದಲಾಯಿಸಿದ ಶಿಂಧೆ:ವರದಿ ಮುಖ್ಯಮಂತ್ರಿಯಾದ ಬೆನ್ನಿಗೇ ಉದ್ಧವ್ ಠಾಕ್ರೆ ಸರಕಾರದ ಪ್ರಮುಖ ನಿರ್ಧಾರ ಬದಲಾಯಿಸಿದ ಶಿಂಧೆ:ವರದಿ](https://www.varthabharati.in/sites/default/files/images/articles/2022/07/1/340835-1656656150.jpg)
ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳ ನಂತರ ಏಕನಾಥ್ ಶಿಂಧೆ ಅವರು ಮುಂಬೈನಲ್ಲಿ ವಿವಾದಾತ್ಮಕ ಮೆಟ್ರೋ ಕಾರ್ ಶೆಡ್ ಯೋಜನೆಗೆ ಸಂಬಂಧಿಸಿದಂತೆ ಉದ್ಧವ್ ಠಾಕ್ರೆ ಸರಕಾರ ತೆಗೆದುಕೊಂಡ ನಿಲುವನ್ನು ಬದಲಾಯಿಸಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
2019 ರಲ್ಲಿ ದೇವೇಂದ್ರ ಫಡ್ನವಿಸ್ ಸರಕಾರದ ಅಡಿಯಲ್ಲಿ ಯೋಜಿಸಿದಂತೆಯೇ ಆರೆ ಕಾಲೋನಿಯಲ್ಲಿ ಮೆಟ್ರೋ ಕಾರ್ ಶೆಡ್ ನಿರ್ಮಿಸಲಾಗುವುದು ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡುವಂತೆ ಶಿಂಧೆ ಅವರು ಅಡ್ವೊಕೇಟ್ ಜನರಲ್ ಅಶುತೋಷ್ ಕುಂಭಕೋಣಿ ಅವರಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
Next Story