Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ತಂಜಾವೂರಿನಿಂದ ಕಳವುಗೈಯ್ಯಲಾಗಿದ್ದ...

ತಂಜಾವೂರಿನಿಂದ ಕಳವುಗೈಯ್ಯಲಾಗಿದ್ದ ʼಜಗತ್ತಿನ ಪ್ರಥಮ ತಮಿಳು ಬೈಬಲ್ʼ ಲಂಡನ್ ನಗರದ ಮ್ಯೂಸಿಯಂನಲ್ಲಿ ಪತ್ತೆ

ವಾರ್ತಾಭಾರತಿವಾರ್ತಾಭಾರತಿ1 July 2022 6:28 PM IST
share
ತಂಜಾವೂರಿನಿಂದ  ಕಳವುಗೈಯ್ಯಲಾಗಿದ್ದ ʼಜಗತ್ತಿನ ಪ್ರಥಮ ತಮಿಳು ಬೈಬಲ್ʼ ಲಂಡನ್ ನಗರದ ಮ್ಯೂಸಿಯಂನಲ್ಲಿ ಪತ್ತೆ

ಚೆನ್ನೈ: ತಂಜಾವೂರಿನ ಸರಸ್ವತಿ ಮಹಲ್ ಗ್ರಂಥಾಲಯದಿಂದ 17 ವರ್ಷಗಳ ಹಿಂದೆ ಕಳವುಗೈಯ್ಯಲಾಗಿದ್ದ ಜಗತ್ತಿನ ಪ್ರಥಮ ತಮಿಳು ಬೈಬಲ್ ಲಂಡನ್‍ನ ಮ್ಯೂಸಿಯಂ ಒಂದರಲ್ಲಿ ಪತ್ತೆಯಾಗಿದೆ. ಈ ತಮಿಳು ಬೈಬಲ್  ಸುಮಾರು 300 ವರ್ಷಗಳ ಹಿಂದೆ ಮುದ್ರಣಗೊಂಡಿತ್ತು ಎನ್ನಲಾಗಿದ್ದು 2005ರಲ್ಲಿ ತಂಜಾವೂರಿನ ಗ್ರಂಥಾಲಯಕ್ಕೆ ಭೇಟಿ ನೀಡಿದ್ದ ವಿದೇಶಿಗರ ಒಂದು ಗುಂಪು ಅದನ್ನು ಕಳವುಗೈದಿತ್ತು ಎಂದು ಶಂಕಿಸಲಾಗಿದೆ.

ಈ ತಮಿಳು ಬೈಬಲ್ ಅನ್ನು ಭಾರತಕ್ಕೆ  ವಾಪಸ್ ತರುವ ನಿಟ್ಟಿನಲ್ಲಿ ರಾಜ್ಯದ ಸಿಐಡಿ ಐಡಲ್ ವಿಂಗ್ ಶ್ರಮಿಸುತ್ತಿದೆ.

ಭಾರತಕ್ಕೆ ಆಗಮಿಸಿದ್ದ ಮೊದಲ ಪ್ರಾಟೆಸ್ಟೆಂಟ್ ಮಿಷನರಿ ಬಾರ್ಥಲೋಮಿಯೋಸ್ ಝೀಗೆನ್ಬಲ್ಗ್ ಈ ಬೈಬಲ್ ಅನ್ನು 1715-17 ನಡುವೆ ಅವರು ತಂಜಾವೂರಿನಲ್ಲಿ ಮುದ್ರಣಾಲಯವೊಂದನ್ನು ಸ್ಥಾಪಿಸಿದ ಬಳಿಕ ಮುದ್ರಿಸಿದ್ದರೆಂದು ತಿಳಿಯಲಾಗಿದೆ.

ಹಸ್ತಲಿಖಿತ ಬೈಬಲ್ ಅನ್ನು ಆಗಿನ ತಂಜಾವೂರ್ ಭೋಂಸ್ಲೆ ರಾಜವಂಶದ ಅರಸ ತುಲಾಜಿ ರಾಜಾಹ್ ಸೆರ್ಫೋಜಿ ಅವರಿಗೆ ಹಸ್ತಾಂತರಿಸಲಾಗಿತ್ತು.

ಅಕ್ಟೋಬರ್ 10, 2005ರಂದು  ತಂಜಾವೂರು ಜಿಲ್ಲೆಯ ಸೆರ್ಫೋಜಿ ಅರಮನೆಯ ಅಧಿಕಾರಿಗಳು  ಬೈಬಲ್ ಕಳವಾಗಿರುವ ಕುರಿತು ಪೊಲೀಸ್ ದೂರು ನೀಡಿದ್ದರೂ ಪೊಲೀಸರು ತನಿಖೆಯನ್ನು ಕೈಬಿಟ್ಟಿದ್ದರು. ಅಕ್ಟೋಬರ್ 17, 2017ರಂದು ಗ್ರಂಥಾಲಯದ ಪದಾಧಿಕಾರಿ  ಇ ರಾಜೇಂದ್ರನ್ ಅವರು ಸಿಐಡಿ ಐಡಲ್ ವಿಂಗ್‍ಗೆ ದೂರು ನೀಡಿದ ನಂತರ ಐಪಿಸಿ ಸೆಕ್ಷನ್ 380 ಅನ್ವಯ ಪ್ರಕರಣ ದಾಖಲಿಸಲಾಗಿತ್ತು.

ಎರಡು ವರ್ಷಗಳ ಹಿಂದೆ ಈ ಬೈಬಲ್ ಪತ್ತೆಹಚ್ಚಲು ವಿಶೇಷ ತಂಡ ಕೂಡ ರಚಿಸಲಾಗಿತ್ತು. ದಾಖಲೆಗಳನ್ನು ಪರಿಶೀಲಿಸಿದಾಗ ಬೈಬಲ್ ಕಳೆದುಹೋಗುವ ಕೆಲ ದಿನಗಳಿಗಿಂತ ಮುನ್ನ ವಿದೇಶಿ ತಂಡವೊಂದು ಆಗಮಿಸಿತ್ತು  ಹಾಗೂ ಬೈಬಲ್ ಮುದ್ರಿಸಿದ್ದ ಬಾರ್ಥೊಲೋಮಿಯೋಸ್ ಸಂಸ್ಮರಣಾ ಕಾರ್ಯಕ್ರಮಕ್ಕೆ ಅವರು ಆಗಮಿಸಿದ್ದರೆಂದು ತಿಳಿದು ಬಂದಿತ್ತು.

ಪೊಲೀಸ್ ಅಧಿಕಾರಿಗಳು ನಂತರ ಜಗತ್ತಿನ ಸಾವಿರಾರು ಮ್ಯೂಸಿಯಂಗಳ ವೆಬ್‍ಸೈಟ್‍ಗಳನ್ನು ಜಾಲಾಡಿದಾಗ ಕೊನೆಗೆ ಲಂಡನ್‍ನಲ್ಲಿನ  ಕಲೆಕ್ಷನ್ ಆಫ್ ಜಾರ್ಜ್ III ನಲ್ಲಿನ ನೂರಾರು ಪುಸ್ತಕಗಳು, ಹಸ್ತಪ್ರತಿಗಳು ಮುಂತಾದವುಗಳ ಜೊತೆಗೆ ತಮಿಳು ಬೈಬಲ್ ಇರುವುದೂ ಪತ್ತೆಯಾಗಿತ್ತು.

18ನೇ ಶತಮಾನದಲ್ಲಿ ತರಂಗಂಬಡಿಯ ಮುದ್ರಣಾಲಯದಲ್ಲಿ ಇದು ಮುದ್ರಣಗೊಂಡಿತ್ತಲ್ಲದೆ ಅದರಲ್ಲಿ ತಂಜಾವೂರಿನ ಅರಸ ರಾಜಾಹ್ ಸೆರ್ಫೋಜಿ ಅವರ ಸಹಿಯೂ ಇತ್ತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X