ಸರಕಾರದಿಂದ ಬೀಡಿ ಕಾರ್ಮಿಕರ ನಿರ್ಲಕ್ಷ್ಯ: ಎಐಟಿಯುಸಿ ಆರೋಪ
![ಸರಕಾರದಿಂದ ಬೀಡಿ ಕಾರ್ಮಿಕರ ನಿರ್ಲಕ್ಷ್ಯ: ಎಐಟಿಯುಸಿ ಆರೋಪ ಸರಕಾರದಿಂದ ಬೀಡಿ ಕಾರ್ಮಿಕರ ನಿರ್ಲಕ್ಷ್ಯ: ಎಐಟಿಯುಸಿ ಆರೋಪ](https://www.varthabharati.in/sites/default/files/images/articles/2022/07/4/341201-1656936276.jpg)
ಉಡುಪಿ: ಕರಾವಳಿ ಜಿಲ್ಲೆಗಳ ಜೀವನಾಡಿ, ಮುಖ್ಯವಾಗಿ ಮಹಿಳಾ ಕಾರ್ಮಿಕರಿಗೆ ಮನೆಯಲ್ಲೇ ಉದ್ಯೋಗ ನೀಡುತ್ತಿರುವ ಬೀಡಿ ಕೈಗಾರಿಕೆಯ ಬಗ್ಗೆ ಸರಕಾರಗಳು ನಿರ್ಲಕ್ಷ್ಯ ವಹಿಸುತ್ತಿವೆ. ಸರಕಾರಗಳ ಕೈಗಾರಿಕೆ ವಿರೋಧಿ ನೀತಿ, ಕೋಟ್ಪಾ ಕಾಯ್ದೆ ಹಾಗೂ ಮಾಲಕರ ಬರೀ ಲಾಭಕೋರ ದೃಷ್ಠಿಯಿಂದ ಕೈಗಾರಿಕೆ ಅವನತಿಯತ್ತ ಸಾಗುತ್ತಿದೆ ಎಂದು ಎಐಟಿಯುಸಿ ನೇತೃತ್ವದ ಉಡುಪಿ ತಾಲೂಕು ಬೀಡಿ ಲೇಬರ್ ಯೂನಿಯನ್ ಆರೋಪಿಸಿದೆ.
ಉಡುಪಿ ಹಿಂದಿ ಪ್ರಚಾರ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿದ ಯೂನಿ ಯನ್ನ ೭೬ನೇ ವಾರ್ಷಿಕ ಮಹಾಸಭೆ ಯಲ್ಲಿ ಈ ಅಭಿಪ್ರಾಯ ವ್ಯಕ್ತವಾದವು. ಇತರ ಕೈಗಾರಿಕೆಗಳಿಗೆ ಹೋಲಿಸಿದರೆ ಅತ್ಯಂತ ಕನಿಷ್ಟ ಮಜೂರಿಯಲ್ಲಿ ಕಾರ್ಮಿಕರು ದುಡಿಯುತ್ತಿದ್ದಾರೆ. ಸರಕಾರ ಪ್ರಕಟಿಸಿದ ಕನಿಷ್ಟ ಕೂಲಿ, ತುಟ್ಟಿಭತ್ತೆ ಯನ್ನು ಕೂಡ ಮಾಲಕರಿಂದ ಪಾವತಿಸಲು ಸರಕಾರ ವಿಫಲವಾಗಿದೆ. ಸರಕಾರ ಈ ಕೈಗಾರಿಕೆಯ ಪುನಶ್ಚೇತನಕ್ಕಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಎಐಟಿಯುಸಿ ಒತ್ತಾಯಿಸಿದೆ.
ಅಧ್ಯಕ್ಷತೆಯನ್ನು ಶಾಂತಾ ನಾಯಕ್ ವಹಿಸಿದ್ದರು. ಯೂನಿಯನ್ ಕಾರ್ಯ ದರ್ಶಿ ಶಶಿಕಲಾ ಗಿರೀಶ್ ಮಂಡಿಸಿದ ಗತ ವರ್ಷದ ಲೆಕ್ಕಪತ್ರ ಮತ್ತು ಚಟುವಟಿಕಾ- ಸಂಘಟನಾ ವರದಿಯನ್ನು ಸಭೆ ಅಂಗೀಕರಿಸಿತು. ಯೂನಿಯನ್ ಸಹಾಯಕ ಕಾರ್ಯದರ್ಶಿ ಸುಚಿತ್ರಾ ಹಲವು ನಿರ್ಣಯಗಳನ್ನು ಮಂಡಿಸಿದರು.
ಮುಖ್ಯ ಅತಿಥಿಗಳಾಗಿ ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ವಿ.ಎಸ್.ಬೇರಿಂಜ, ಸಿಪಿಐ ಜಿಲ್ಲಾ ಜೊತೆ ಕಾರ್ಯದರ್ಶಿ ಬಿ.ಶೇಖರ್, ಎಐಟಿಯುಸಿ ಜಿಲ್ಲಾ ಸಹಾಯಕ ಕಾರ್ಯದರ್ಶಿಗಳಾದ ಸುರೇಶ್ ಕುಮಾರ್ ಬಂಟ್ವಾಳ್, ಎಂ.ಕರುಣಾಕರ್, ವಾರಿಜ ಆತ್ರಾಡಿ, ಶಿವಾನಂದ ಉಡುಪಿ, ಸಂಜೀವ ಶೇರಿಗಾರ್ ಮಾತನಾಡಿದರು. ಶಮೀಮಾ ಕಟಪಾಡಿ, ಅಪ್ಪಿ ಶೆಟ್ಟಿಗಾರ್ತಿ ಉದ್ಯಾವರ ಮೊದಲಾದವರು ಉಪಸ್ಥಿತರಿದ್ದರು.