ಸಹರಾನ್ಪುರ ಗಲಭೆ: ಪೊಲೀಸರಿಂದ ಥಳಿತಕ್ಕೊಳಗಾಗಿದ್ದ ಎಂಟು ಮಂದಿಯನ್ನು ಆರೋಪ ಮುಕ್ತಗೊಳಿಸಿದ ನ್ಯಾಯಾಲಯ
![ಸಹರಾನ್ಪುರ ಗಲಭೆ: ಪೊಲೀಸರಿಂದ ಥಳಿತಕ್ಕೊಳಗಾಗಿದ್ದ ಎಂಟು ಮಂದಿಯನ್ನು ಆರೋಪ ಮುಕ್ತಗೊಳಿಸಿದ ನ್ಯಾಯಾಲಯ ಸಹರಾನ್ಪುರ ಗಲಭೆ: ಪೊಲೀಸರಿಂದ ಥಳಿತಕ್ಕೊಳಗಾಗಿದ್ದ ಎಂಟು ಮಂದಿಯನ್ನು ಆರೋಪ ಮುಕ್ತಗೊಳಿಸಿದ ನ್ಯಾಯಾಲಯ](https://www.varthabharati.in/sites/default/files/images/articles/2022/07/4/341236-1656959125.jpg)
Photo: Twitter
ಹೊಸದಿಲ್ಲಿ, ಜು. 4: ಕಳೆದ ತಿಂಗಳು ಉತ್ತರಪ್ರದೇಶದ ಸಹಾರನಪುರದಲ್ಲಿ ಪ್ರತಿಭಟನೆ ನಡೆದ ಬಳಿಕ ವೈರಲ್ ಆದ ವೀಡಿಯೊದಲ್ಲಿ ಕಸ್ಟಡಿಯಲ್ಲಿ ಪೊಲೀಸರಿಂದ ಹಲ್ಲೆಗೊಳಗಾಗಿದ್ದ 10 ಮಂದಿ ದೋಷ ಮುಕ್ತರಾಗಿದ್ದಾರೆ.
ಅವರ ವಿರುದ್ಧ ಯಾವುದೇ ಪುರಾವೆ ಇಲ್ಲ ಎಂದು ಪೊಲೀಸರು ತಿಳಿಸಿದ ಬಳಿಕ ಸ್ಥಳೀಯ ನ್ಯಾಯಾಲಯ ಅವರನ್ನು ದೋಷಮುಕ್ತಗೊಳಿಸಿದೆ. ಅವರು ನಿನ್ನೆ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ.
ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಅಮಾನತುಗೊಂಡ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಆರೋಪದಲ್ಲಿ ದಾಖಲಿಸಲಾಗಿರುವ ಎಫ್ಐಆರ್ನಲ್ಲಿ ಇನ್ನು ಮುಂದೆ ಈ 8 ಮಂದಿಯ ಹೆಸರು ಇರಲಾರದು.
ಇಬ್ಬರು ಪೊಲೀಸರು ಕನಿಷ್ಠ 9 ಮಂದಿಗೆ ಬೆತ್ತದಿಂದ ಥಳಿಸುವ, ಅವರು ಹೊಡೆಯದಂತೆ ಮನವಿ ಮಾಡುವ ಹಾಗೂ ಹೊಡೆತವನ್ನು ತಡೆಯುವ ವೀಡಿಯೊದ ಅಧಿಕೃತತೆ ಬಗ್ಗೆ ಪೊಲೀಸರು ಮೊದಲು ಪ್ರಶ್ನಿಸಿದ್ದರು. ಉತ್ತರಪ್ರದೇಶದ ಬಿಜೆಪಿ ಶಾಸಕ ಶಲಭ್ ಮಣಿ ತ್ರಿಪಾಠಿ ಅವರು ಈ ವೀಡಿಯೊವನ್ನು ‘‘ಗಲಭೆಕೋರರಿಗೆ ಕೊಡುಗೆ’’ ಎಂಬ ಶೀರ್ಷಿಕೆಯೊಂದಿಗೆ ಟ್ವೀಟರ್ನಲ್ಲಿ ಶೇರ್ ಮಾಡಿದ್ದರು.
ಪ್ರತಿಭಟನಕಾರರ ವಿರುದ್ಧ ನ್ಯಾಯಾಂಗದಿಂದ ಹೊರತುಪಡಿಸಿದ ಕ್ರಮದ ಕುರಿತು ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರ ತೀವ್ರ ಟೀಕೆಗೆ ಗುರಿಯಾಗಿತ್ತು.
#Muslims who were protesting for the derogatory remarks against #ProphetMuhammad ﷺ were beaten in Police custody in #Saharanpur (UP), BJP MLA quotes the #Videos as a return gift, where as 54 #people were sent to #jail after punishing in #custody.
— Abdul Hafeez Blr (@AbdulHafeezBlr) June 11, 2022
Vide : @ZakirAliTyagi pic.twitter.com/TlWALqScAs