ಫಾ.ಸ್ಟಾನ್ ಸ್ವಾಮಿ ಪುಣ್ಯತಿಥಿ:ಎಲ್ಗಾರ್ ಪರಿಷದ್ ಕಾರ್ಯಕರ್ತರಿಂದ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ
![ಫಾ.ಸ್ಟಾನ್ ಸ್ವಾಮಿ ಪುಣ್ಯತಿಥಿ:ಎಲ್ಗಾರ್ ಪರಿಷದ್ ಕಾರ್ಯಕರ್ತರಿಂದ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಫಾ.ಸ್ಟಾನ್ ಸ್ವಾಮಿ ಪುಣ್ಯತಿಥಿ:ಎಲ್ಗಾರ್ ಪರಿಷದ್ ಕಾರ್ಯಕರ್ತರಿಂದ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ](https://www.varthabharati.in/sites/default/files/images/articles/2022/07/5/341345-1657026988.jpg)
ಮುಂಬೈ,ಜು.5: ಜಾರ್ಖಂಡ್ನ ಆದಿವಾಸಿ ಹಕ್ಕುಗಳ ಹೋರಾಟಗಾರ ಫಾ.ಸ್ಟಾನ್ ಸ್ವಾಮಿ (84) ಅವರು ಮುಂಬೈ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾಗಲೇ ನಿಧನರಾಗಿ ಇಂದಿಗೆ ಒಂದು ವರ್ಷವಾಗಿದೆ. ಈ ಸಂದರ್ಭದಲ್ಲಿ ಜೈಲಿನಲ್ಲಿ ಅವರ ಸಹಕೈದಿಗಳಾಗಿದ್ದ ಎಲ್ಗಾರ್ ಪರಿಷದ್ನ ಕಾರ್ಯಕರ್ತರು ಅವರ ಸಾವಿನ ಕುರಿತು ಸರಕಾರದ ನಿರ್ಲಕ್ಷ ಮತ್ತು ಉತ್ತರದಾಯಿತ್ವದ ಕೊರತೆಯ ವಿರುದ್ಧ ಮಂಗಳವಾರ ಜೈಲಿನಲ್ಲಿ ಉಪವಾಸ ಸತ್ಯಾಗ್ರಹವನ್ನು ಆಚರಿಸಿದರು.
ಸ್ವಾಮಿ ತೀವ್ರ ವಿವಾದಾತ್ಮಕ ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ 16ನೇ ಮತ್ತು ಕೊನೆಯ ವ್ಯಕ್ತಿಯಾಗಿದ್ದರು. ಪ್ರಕರಣದಲ್ಲಿಯ ತನ್ನ ಇತರ ಸಹ ಆರೋಪಿಗಳಂತೆ ಅವರೂ ಜೈಲಿನಲ್ಲಿ ದೀರ್ಘಕಾಲದಿಂದ ಗಂಭೀರ ಅನಾರೋಗ್ಯದಿಂದ ನರಳಿದ್ದರು. ಕೋವಿಡ್ ಸೋಂಕಿಗೆ ತುತ್ತಾದ ಬಳಿಕ ಅವರು ಕೊನೆಯುಸಿರೆಳೆದಿದ್ದರು.
ಅವರಿಗೆ ಸಕಾಲದಲ್ಲಿ ವೈದ್ಯಕೀಯ ನೆರವು ತಲುಪಲು ಸರಕಾರವು ಅವಕಾಶ ನೀಡಿರಲಿಲ್ಲ ಎಂದು ಸಹಕೈದಿಗಳು ಮತ್ತು ವಕೀಲರು ಆರೋಪಿಸಿದ್ದಾರೆ.
ಆರೋಪಿಗಳ ಪೈಕಿ ಓರ್ವರಾಗಿರುವ ಖ್ಯಾತ ರಾಜಕೀಯ ಕಾರ್ಯಕರ್ತ ಹಾಗೂ ‘ವಿದ್ರೋಹಿ’ ದ್ವೈಮಾಸಿಕದ ಸಂಪಾದಕ ಸುಧೀರ ಧವಳೆಯವರು ತಮ್ಮ ಪ್ರತಿಭಟನಾ ಉಪವಾಸಕ್ಕೆ ಕಾರಣಗಳನ್ನು ವಿವರಿಸಿ ತನ್ನ ವಕೀಲರಿಗೆ ಪತ್ರ ಬರೆದಿದ್ದಾರೆ.
‘ಒಂದು ವರ್ಷದ ಹಿಂದೆ ಇದೇ ದಿನದಂದು ಸ್ವಾಮಿ ಅವರನ್ನು ಸರಕಾರವು ಕೊಂದಿತ್ತು, ಇಂದಿಗೂ ಜೈಲಿನಲ್ಲಿ ಅದೇ ಸ್ಥಿತಿ ಮುಂದುವರಿದಿದೆ’ ಎಂದು ಧವಳೆ ಪತ್ರದಲ್ಲಿ ತಿಳಿಸಿದ್ದಾರೆ.
ಜೈಲು ಅಧಿಕಾರಿಗಳು ಅದೇ ನಿರ್ಲಜ್ಜೆಯ ವರ್ತನೆಯನ್ನು ಮುಂದುವರಿಸಿದ್ದಾರೆ ಮತ್ತು ಕೈದಿಗಳು ಅವರ ಕೋಪವನ್ನು ಎದುರಿಸುತ್ತಲೇ ಇದ್ದಾರೆ ಎಂದಿದ್ದಾರೆ.
ವಕೀಲರಾದ ಸುರೇಂದ್ರ ಗಡ್ಲಿಂಗ್ ಮತ್ತು ಅರುಣ ಫೆರೀರಾ,ಮಾನವ ಹಕ್ಕುಗಳ ಕಾರ್ಯಕರ್ತರಾದ ಮಹೇಶ ರಾವುತ್,ರೋನಾ ವಿಲ್ಸನ್,ವೆರ್ನನ್ ಗೊನ್ಸಾಲ್ವಿಸ್,ಸಾಗರ ಗೋರ್ಖೆ ಮತ್ತು ರಮೇಶ ಗೈಚೋರ್,ವಿದ್ವಾಂಸರಾದ ಹನಿ ಬಾಬು ಮತ್ತು ಆನಂದ ತೇಲ್ತುಂಬ್ಡೆ ಹಾಗೂ ಪತ್ರಕರ್ತ ಗೌತಮ ನವ್ಲಾಖಾ ಅವರು ಧವಳೆಯವರೊಂದಿಗೆ ಉಪವಾಸವನ್ನು ಆಚರಿಸಿದ ಇತರ ಕೈದಿಗಳಾಗಿದ್ದಾರೆ.
ಮುಂಬೈ ಹೊರವಲಯದ ತಲೋಜಾ ಸೆಂಟ್ರಲ್ ಜೈಲಿನಲ್ಲಿ ಸ್ವಾಮಿಯವರ ಕೊನೆಯ ದಿನಗಳನ್ನು ನೆನಪಿಸಿಕೊಂಡಿರುವ ಧವಳೆ,ಅವರು ಜೈಲಿನಲ್ಲಿ ಸಣ್ಣ ಸಣ್ಣ ವಿಷಯಗಳಿಗೂ ಕಷ್ಟ ಪಡಬೇಕಾಗಿತ್ತು.
ಚಹಾ ಸೇವಿಸಲು ಸಿಪರ್ ಅಥವಾ ಊರುಗೋಲು ಆಗಿರಲಿ,ಪ್ರತಿಯೊಂದಕ್ಕೂ ಅವರು ಅರ್ಜಿ ಸಲ್ಲಿಸಬೇಕಾಗಿತ್ತು. ಅವರು ಗಂಭೀರ ಅನಾರೋಗ್ಯಕ್ಕೆ ತುತ್ತಾಗಿದ್ದಾಗ ಜೈಲಿನ ಅಧಿಕಾರಿಗಳು ಅವರಿಗೆ ವೈದ್ಯಕೀಯ ನೆರವು ಒದಗಿಸುವ ಬದಲು ಜೈಲಿನಲ್ಲಿ ದಿಗ್ಬಂಧನದಲ್ಲಿ ಇರಿಸಿದ್ದರು ಎಂದು ವಿವರಿಸಿದ್ದಾರೆ.
ಸ್ವಾಮಿಯವರ ವಕೀಲ ಮಿಹಿರ ದೇಸಾಯಿಯವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಬಳಿವಷ್ಟೇ ಅವರನ್ನು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಹಲವಾರು ವಾರಗಳನ್ನು ಕಳೆದ ಬಳಿಕ 2021,ಜು.5ರಂದು ಕೊನೆಯುಸಿರೆಳೆದಿದ್ದರು.
ಸ್ವಾಮಿಯವರನ್ನು ಜೈಲಿನಲ್ಲಿ ಅಮಾನವೀಯವಾಗಿ ನಡೆಸಿಕೊಂಡಿದ್ದರಿಂದಲೇ ಅವರ ಆರೋಗ್ಯ ಹದಗೆಟ್ಟಿತ್ತು ಎಂದು ಬಾಂಬೆ ಉಚ್ಚ ನ್ಯಾಯಾಲದ ಹಿರಿಯ ವಕೀಲ ದೇಸಾಯಿ ಅವರು ಕೋರ್ಟ್ನ ಗಮನಕ್ಕೆ ತಂದಿದ್ದರು. ತಲೋಜಾ ಜೈಲಿನ ಆಗಿನ ಅಧೀಕ್ಷಕ ಕೌಸ್ತುಭ ಕುರ್ಲೆಕರ್ ಮತ್ತು ಜೈಲು ನಿರ್ದೇಶಕ ಸುನಿಲ ಕಾಳೆ ಅವರು ಸ್ವಾಮಿಯವರಿಗೆ ಯಾವುದೇ ವೈದ್ಯಕೀಯ ನೆರವು ಒದಗಿಸಿರಲಿಲ್ಲ ಎಂದು ಆರೋಪಿಸಿದ್ದರು.
ಸ್ವಾಮಿಯವರ ನಿಧನದ ಬಳಿಕ ಜಮ್ಷೆಡ್ಪುರ ಜೆಸ್ಯೂಟ್ ಪ್ರಾವಿನ್ಸ್ ಪ್ರಕರಣದಿಂದ ಅವರ ಹೆಸರನ್ನು ತೆಗೆದುಹಾಕುವಂತೆ ಮತ್ತು ಅವರ ಸಾವಿಗಾಗಿ ಸರಕಾರದ ಉತ್ತರದಾಯಿತ್ವವನ್ನು ಕೋರಿ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.
ಅರ್ಜಿಯ ವಿಷಯದಲ್ಲಿ ಯಾವುದೇ ಬೆಳವಣಿಗೆಯಾಗಿಲ್ಲ,ಆದರೆ ಪ್ರಕರಣದ ಅಂತ್ಯದವರೆಗೂ ನ್ಯಾಯಾಲಯದಲ್ಲಿ ಹೋರಾಡಲು ತಾನು ಮತ್ತು ಸ್ವಾಮಿಯವರ ಸ್ನೇಹಿತರು ದೃಢನಿರ್ಣಯ ಮಾಡಿದ್ದೇವೆ ಎಂದು ದೇಸಾಯಿ ತಿಳಿಸಿದರು.
ಮುಂಬೈ,ಜು.5: ಜಾರ್ಖಂಡ್ನ ಆದಿವಾಸಿ ಹಕ್ಕುಗಳ ಹೋರಾಟಗಾರ ಫಾ.ಸ್ಟಾನ್ ಸ್ವಾಮಿ (84) ಅವರು ಮುಂಬೈ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾಗಲೇ ನಿಧನರಾಗಿ ಇಂದಿಗೆ ಒಂದು ವರ್ಷವಾಗಿದೆ. ಈ ಸಂದರ್ಭದಲ್ಲಿ ಜೈಲಿನಲ್ಲಿ ಅವರ ಸಹಕೈದಿಗಳಾಗಿದ್ದ ಎಲ್ಗಾರ್ ಪರಿಷದ್ನ ಕಾರ್ಯಕರ್ತರು ಅವರ ಸಾವಿನ ಕುರಿತು ಸರಕಾರದ ನಿರ್ಲಕ್ಷ ಮತ್ತು ಉತ್ತರದಾಯಿತ್ವದ ಕೊರತೆಯ ವಿರುದ್ಧ ಮಂಗಳವಾರ ಜೈಲಿನಲ್ಲಿ ಉಪವಾಸ ಸತ್ಯಾಗ್ರಹವನ್ನು ಆಚರಿಸಿದರು.
ಸ್ವಾಮಿ ತೀವ್ರ ವಿವಾದಾತ್ಮಕ ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ 16ನೇ ಮತ್ತು ಕೊನೆಯ ವ್ಯಕ್ತಿಯಾಗಿದ್ದರು. ಪ್ರಕರಣದಲ್ಲಿಯ ತನ್ನ ಇತರ ಸಹ ಆರೋಪಿಗಳಂತೆ ಅವರೂ ಜೈಲಿನಲ್ಲಿ ದೀರ್ಘಕಾಲದಿಂದ ಗಂಭೀರ ಅನಾರೋಗ್ಯದಿಂದ ನರಳಿದ್ದರು. ಕೋವಿಡ್ ಸೋಂಕಿಗೆ ತುತ್ತಾದ ಬಳಿಕ ಅವರು ಕೊನೆಯುಸಿರೆಳೆದಿದ್ದರು.
ಅವರಿಗೆ ಸಕಾಲದಲ್ಲಿ ವೈದ್ಯಕೀಯ ನೆರವು ತಲುಪಲು ಸರಕಾರವು ಅವಕಾಶ ನೀಡಿರಲಿಲ್ಲ ಎಂದು ಸಹಕೈದಿಗಳು ಮತ್ತು ವಕೀಲರು ಆರೋಪಿಸಿದ್ದಾರೆ.
ಆರೋಪಿಗಳ ಪೈಕಿ ಓರ್ವರಾಗಿರುವ ಖ್ಯಾತ ರಾಜಕೀಯ ಕಾರ್ಯಕರ್ತ ಹಾಗೂ ‘ವಿದ್ರೋಹಿ’ ದ್ವೈಮಾಸಿಕದ ಸಂಪಾದಕ ಸುಧೀರ ಧವಳೆಯವರು ತಮ್ಮ ಪ್ರತಿಭಟನಾ ಉಪವಾಸಕ್ಕೆ ಕಾರಣಗಳನ್ನು ವಿವರಿಸಿ ತನ್ನ ವಕೀಲರಿಗೆ ಪತ್ರ ಬರೆದಿದ್ದಾರೆ.
‘ಒಂದು ವರ್ಷದ ಹಿಂದೆ ಇದೇ ದಿನದಂದು ಸ್ವಾಮಿ ಅವರನ್ನು ಸರಕಾರವು ಕೊಂದಿತ್ತು, ಇಂದಿಗೂ ಜೈಲಿನಲ್ಲಿ ಅದೇ ಸ್ಥಿತಿ ಮುಂದುವರಿದಿದೆ’ ಎಂದು ಧವಳೆ ಪತ್ರದಲ್ಲಿ ತಿಳಿಸಿದ್ದಾರೆ.
ಜೈಲು ಅಧಿಕಾರಿಗಳು ಅದೇ ನಿರ್ಲಜ್ಜೆಯ ವರ್ತನೆಯನ್ನು ಮುಂದುವರಿಸಿದ್ದಾರೆ ಮತ್ತು ಕೈದಿಗಳು ಅವರ ಕೋಪವನ್ನು ಎದುರಿಸುತ್ತಲೇ ಇದ್ದಾರೆ ಎಂದಿದ್ದಾರೆ.
ವಕೀಲರಾದ ಸುರೇಂದ್ರ ಗಡ್ಲಿಂಗ್ ಮತ್ತು ಅರುಣ ಫೆರೀರಾ,ಮಾನವ ಹಕ್ಕುಗಳ ಕಾರ್ಯಕರ್ತರಾದ ಮಹೇಶ ರಾವುತ್,ರೋನಾ ವಿಲ್ಸನ್,ವೆರ್ನನ್ ಗೊನ್ಸಾಲ್ವಿಸ್,ಸಾಗರ ಗೋರ್ಖೆ ಮತ್ತು ರಮೇಶ ಗೈಚೋರ್,ವಿದ್ವಾಂಸರಾದ ಹನಿ ಬಾಬು ಮತ್ತು ಆನಂದ ತೇಲ್ತುಂಬ್ಡೆ ಹಾಗೂ ಪತ್ರಕರ್ತ ಗೌತಮ ನವ್ಲಾಖಾ ಅವರು ಧವಳೆಯವರೊಂದಿಗೆ ಉಪವಾಸವನ್ನು ಆಚರಿಸಿದ ಇತರ ಕೈದಿಗಳಾಗಿದ್ದಾರೆ.
ಮುಂಬೈ ಹೊರವಲಯದ ತಲೋಜಾ ಸೆಂಟ್ರಲ್ ಜೈಲಿನಲ್ಲಿ ಸ್ವಾಮಿಯವರ ಕೊನೆಯ ದಿನಗಳನ್ನು ನೆನಪಿಸಿಕೊಂಡಿರುವ ಧವಳೆ,ಅವರು ಜೈಲಿನಲ್ಲಿ ಸಣ್ಣ ಸಣ್ಣ ವಿಷಯಗಳಿಗೂ ಕಷ್ಟ ಪಡಬೇಕಾಗಿತ್ತು.
ಚಹಾ ಸೇವಿಸಲು ಸಿಪರ್ ಅಥವಾ ಊರುಗೋಲು ಆಗಿರಲಿ,ಪ್ರತಿಯೊಂದಕ್ಕೂ ಅವರು ಅರ್ಜಿ ಸಲ್ಲಿಸಬೇಕಾಗಿತ್ತು. ಅವರು ಗಂಭೀರ ಅನಾರೋಗ್ಯಕ್ಕೆ ತುತ್ತಾಗಿದ್ದಾಗ ಜೈಲಿನ ಅಧಿಕಾರಿಗಳು ಅವರಿಗೆ ವೈದ್ಯಕೀಯ ನೆರವು ಒದಗಿಸುವ ಬದಲು ಜೈಲಿನಲ್ಲಿ ದಿಗ್ಬಂಧನದಲ್ಲಿ ಇರಿಸಿದ್ದರು ಎಂದು ವಿವರಿಸಿದ್ದಾರೆ.
ಸ್ವಾಮಿಯವರ ವಕೀಲ ಮಿಹಿರ ದೇಸಾಯಿಯವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಬಳಿವಷ್ಟೇ ಅವರನ್ನು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಹಲವಾರು ವಾರಗಳನ್ನು ಕಳೆದ ಬಳಿಕ 2021,ಜು.5ರಂದು ಕೊನೆಯುಸಿರೆಳೆದಿದ್ದರು.
ಸ್ವಾಮಿಯವರನ್ನು ಜೈಲಿನಲ್ಲಿ ಅಮಾನವೀಯವಾಗಿ ನಡೆಸಿಕೊಂಡಿದ್ದರಿಂದಲೇ ಅವರ ಆರೋಗ್ಯ ಹದಗೆಟ್ಟಿತ್ತು ಎಂದು ಬಾಂಬೆ ಉಚ್ಚ ನ್ಯಾಯಾಲದ ಹಿರಿಯ ವಕೀಲ ದೇಸಾಯಿ ಅವರು ಕೋರ್ಟ್ನ ಗಮನಕ್ಕೆ ತಂದಿದ್ದರು. ತಲೋಜಾ ಜೈಲಿನ ಆಗಿನ ಅಧೀಕ್ಷಕ ಕೌಸ್ತುಭ ಕುರ್ಲೆಕರ್ ಮತ್ತು ಜೈಲು ನಿರ್ದೇಶಕ ಸುನಿಲ ಕಾಳೆ ಅವರು ಸ್ವಾಮಿಯವರಿಗೆ ಯಾವುದೇ ವೈದ್ಯಕೀಯ ನೆರವು ಒದಗಿಸಿರಲಿಲ್ಲ ಎಂದು ಆರೋಪಿಸಿದ್ದರು.
ಸ್ವಾಮಿಯವರ ನಿಧನದ ಬಳಿಕ ಜಮ್ಷೆಡ್ಪುರ ಜೆಸ್ಯೂಟ್ ಪ್ರಾವಿನ್ಸ್ ಪ್ರಕರಣದಿಂದ ಅವರ ಹೆಸರನ್ನು ತೆಗೆದುಹಾಕುವಂತೆ ಮತ್ತು ಅವರ ಸಾವಿಗಾಗಿ ಸರಕಾರದ ಉತ್ತರದಾಯಿತ್ವವನ್ನು ಕೋರಿ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.
ಅರ್ಜಿಯ ವಿಷಯದಲ್ಲಿ ಯಾವುದೇ ಬೆಳವಣಿಗೆಯಾಗಿಲ್ಲ,ಆದರೆ ಪ್ರಕರಣದ ಅಂತ್ಯದವರೆಗೂ ನ್ಯಾಯಾಲಯದಲ್ಲಿ ಹೋರಾಡಲು ತಾನು ಮತ್ತು ಸ್ವಾಮಿಯವರ ಸ್ನೇಹಿತರು ದೃಢನಿರ್ಣಯ ಮಾಡಿದ್ದೇವೆ ಎಂದು ದೇಸಾಯಿ ತಿಳಿಸಿದರು.