Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಕೆನಡ: ‘ಕಾಳಿ’ ಪ್ರದರ್ಶನ ರದ್ದುಪಡಿಸಿದ...

ಕೆನಡ: ‘ಕಾಳಿ’ ಪ್ರದರ್ಶನ ರದ್ದುಪಡಿಸಿದ ಆಗಾ ಖಾನ್ ಮ್ಯೂಸಿಯಂ

ವಾರ್ತಾಭಾರತಿವಾರ್ತಾಭಾರತಿ6 July 2022 10:46 PM IST
share

 ಟೊರಾಂಟೊ,ಜು.6: ಕೆನಡದ ಚಲನಚಿತ್ರ ನಿರ್ದೇಶಕಿ ಲೀನಾ ಮಣಿಮೇಖಲೈ ಅವರ ಕಾಳಿ ಚಿತ್ರದ ಪೋಸ್ಟರ್ ವಿವಾದದ ಬಿರುಗಾಳಿಯೆಬ್ಬಿಸಿರುವಂತೆಯೇ, ಟೊರಾಂಟೊದಲ್ಲಿನ ಆಗಾ ಖಾನ್ ಮ್ಯೂಸಿಯಂ ಈ ವಿಡಿಯೋ ಚಿತ್ರದ ಪ್ರದರ್ಶನವನ್ನು ರದ್ದುಪಡಿಸಿದೆ.

 ಕಾಳಿ ಸೇರಿದಂತೆ ಟೊರಾಂಟೊ ಮೆಟ್ರೊಪಾಲಿಟನ್ ವಿವಿಯ ‘ಅಂಡರ್ ದಿ ಟೆಂಟ್’ ಪ್ರಾಜೆಕ್ಟ್‌ನಡಿ ಪ್ರದರ್ಶಿಸಲಾಗುವ ಸಾಕ್ಷಚಿತ್ರಗಳಿಗೆ ಆಗಾ ಖಾನ್ ಮ್ಯೂಸಿಯಂ ಆತಿಥ್ಯ ವಹಿಸಿತ್ತು.

 ಆಗಾ ಖಾನ್ ಮ್ಯೂಸಿಯಂ ಮಂಗಳವಾರ ಹೇಳಿಕೆಯೊಂದನ್ನು ನೀಡಿ ಹಿಂದೂ ಹಾಗೂ ಇತರ ಸಮುದಾಯಗಳ ಸದಸ್ಯರ ಭಾವನೆಗಳಿಗೆ ನೋವಾಗಿರುವುದಕ್ಕಾಗಿ ಕ್ಷಮೆಯಾಚಿಸಿದೆ ಹಾಗೂ ಕಾಳಿ ಚಿತ್ರದ ಪ್ರದರ್ಶನವನ್ನು ರದ್ದುಪಡಿಸಿರುವುದಾಗಿ ತಿಳಿಸಿದೆ. ಈ ವಿವಾದಾತ್ಮಕ ಚಿತ್ರಕ್ಕೆ ಸಂಬಂಧಿಸಿದ ಪ್ರಚೋದನಕಾರಿ ಪೋಸ್ಟರನ್ನು ತೆಗೆದುಹಾಕುವಂತೆ ಕೆನಡದ ರಾಜಧಾನಿ ಒಟ್ಟಾವದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಆಗ್ರಹಿಸಿದ ಬೆನ್ನಲ್ಲೇ ಆಗಾ ಖಾನ್ ಮ್ಯೂಸಿಯಂ ಈ ಕ್ರಮವನ್ನು ಕೈಗೊಂಡಿದೆ.

 ಭಾರತೀಯ ಮೂಲ ನಿರ್ದೇಶಕಿ ಮಣಿಮೇಖಲೈ ಅವರು ತನ್ನ ನಿರ್ದೇಶನದ ಕಾಳಿ ಟಿತ್ರದ ಪೋಸ್ಟರ್ ಒಂದನ್ನು ಶನಿವಾರ ಟ್ವಿಟ್ಟರ್‌ನಲ್ಲಿ ಪ್ರಸಾರ ಮಾಡಿದ್ದು ಅದರಲ್ಲಿ ಕಾಳಿದೇವಿಯು ಸಿಗರೇಟು ಸೇದುತ್ತಿರುವುದನ್ನು ಹಾಗೂ ಒಂದು ಕೈಯಲ್ಲಿ ಎಲ್‌ಜಿಬಿಟಿಕ್ಯೂ ಸಮುದಾಯದ ಧ್ವಜವನ್ನು ಹಿಡಿದಿರುವುದನ್ನು ತೋರಿಸಲಾಗಿತ್ತು.

ಈ ಪೋಸ್ಟರ್‌ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಭಾರತದಲ್ಲಿ ‘ಗೋಮಹಾಸಭಾ’ ಎಂಬ ಹೆಸರಿನ ಸಂಘಟನೆಯ ಸದಸ್ಯರೊಬ್ಬರು ಮಣಿಮೇಖಲೈ ವಿರುದ್ಧ ದೂರು ನೀಡಿದ್ದನು.

 ವಿವಾದಿತ ಕಾಳಿ ಪೋಸ್ಟರ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಉಂಟಾಗಿರುವ ಕೋಲಾಹಲದ ಬಗ್ಗೆ ಪ್ರತಿಕ್ರಿಯಿಸಿರುವ ಆಗಾ ಖಾನ್ ವಸ್ತುಸಂಗ್ರಹಾಯವು ಕಾಳಿ ಚಿತ್ರವು ಪ್ರಮಾದವಶಾತ್ ಆಗಿ ಹಿಂದೂ ಹಾಗೂ ಇತರ ಸಮುದಾಯಗಳ ಸದಸ್ಯ ಭಾವನೆಗಳಿಗೆ ಅಪಮಾನವುಂಟು ಮಾಡಿರುವುಕಾಗಿ ತಾನು ಗಾಢವಾಗಿ ಕ್ಷಮೆಯಾಚಿಸುವುದಾಗಿ ಹೇಳಿದೆ. ‘‘ ವೈವಿಧ್ಯಮಯ ಧಾರ್ಮಿಕ ಅಭಿವ್ಯಕ್ತಿಗಳು ಹಾಗೂ ಧರ್ಮಗಳಿಗೆ ಗೌರವವನ್ನು ನೀಡುವುದು , ಈ ಯೋಜನೆಯ ಅವಿಭಾಜ್ಯ ಅಂಗವಾಗಿದೆ. ಹೀಗಾಗಿ,ಮ್ಯೂಸಿಂಯನಲ್ಲಿ ಈ ಚಿತ್ರ (ಕಾಳಿ)ವನ್ನು ಪ್ರದರ್ಶಿಸಲಾಗುವುದಿಲ್ಲ ಎಂದು ಹೇಳಿಕೆ ತಿಳಿಸಿದೆ.

 ಕಾಳಿ ಚಿತ್ರವು ‘ಅಂಡರ್ ದಿ ಟೆಂಟ್’ ಪ್ರಾಜೆಕ್ಟ್‌ನಡಿ ಪ್ರದರ್ಶಿಸಲಾಗುವ 18 ಕಿರು ವಿಡಿಯೋಚಿತ್ರಗಳಲ್ಲೊಂದಾಗಿದೆ. ಕಲೆಗಳ ಮೂಲಕ ಅಂತರ್ ಸಂಸ್ಕೃತಿಯ ಅರಿವು ಹಾಗೂ ಸಂವಹನವನ್ನು ಬೆಳೆಸುವ ತನ್ನ ಚಿಂತನೆಗೆ ಅನುಗುಣವಾಗಿ ಆಗಾಖಾನ್ ಮ್ಯೂಸಿಯಂ ಈ ಸಾಕ್ಷಚಿತ್ರಗಳ ಪ್ರದರ್ಶನವನ್ನು ಹಮ್ಮಿಕೊಂಡಿತ್ತು.

    ಕಾಳಿ ಚಿತ್ರದ ವಿವಾದಿತ ಪೋಸ್ಟರ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಕೆನಡದಲ್ಲಿನ ಭಾರತೀಯ ರಾಯಭಾರಿ ಕಚೇರಿಯು ಹಿಂದೂ ದೇವತೆಗನ್ನು ಅವಮಾನಕಾರಿಯಾಗಿ ಬಿಂಬಿಸಿರುವುದರ ಕುರಿತು ಕೆನಡಾದಲ್ಲಿನ ಹಿಂದೂ ಸಮುದಾಯಗಳ ನಾಯಕರಿಂದ ತನಗೆ ದೂರುಗಳು ಬಂದಿರುವುದಾಗಿ ತಿಳಿಸಿತ್ತು. ಇಂತಹ ಎಲ್ಲಾ ಪ್ರಚೋದನಕಾರಿ ಸಾಮಾಗ್ರಿಗಳನ್ನು ತಕ್ಷಣವೇ ಹಿಂದೆಗೆದುಕೊಳ್ಳುವಂತೆ ಕಾರ್ಯಕ್ರಮದ ಆಯೋಜಕರು ಹಾಗೂ ಕೆನಡಾದ ಅಧಿಕಾರಿಗಳನ್ನು ತಾನು ಆಗ್ರಹಿಸುವುದಾಗಿ ಭಾರತೀಯ ರಾಯಭಾರಿ ಕಚೇರಿ ಹೇಳಿಕೆಯಲ್ಲಿ ತಿಳಿಸಿತ್ತು.

   ತನ್ನ ನಿರ್ದೇಶನದ ಕಾಳಿ ಚಿತ್ರದ ವಿವಾದಿತ ಪೋಸ್ಟರ್ ಬಗ್ಗೆ ಪ್ರತಿಕ್ರಿಯಿಸಿರುವ ಲೀನಾ ಮಣಿಮೇಖಲೈ ಅವರು ‘ನಾನು ಜೀವಂತವಿರುವವರೆಗೆ ನನ್ನ ಧ್ವನಿಯನ್ನು ನಿರ್ಭೀತವಾಗಿ ಬಳಸಿಕೊಳ್ಳುವುದನ್ನು ಮುಂದುವರಿಸುವೆ’ ಎಂದು ಹೇಳಿದ್ದಾರೆ.

ನಿರ್ಭೀತ ಧ್ವನಿಯೊಂದಿಗೆ ಬದುಕಲು ಬಯಸುತ್ತೇನೆ: ಮಣಿಮೇಖಲೈ

 ‘‘ನಾನು ಕಳೆದುಕೊಳ್ಳುವುದು ಏನೂ ಇಲ್ಲ. ನಾನು ನಂಬಿರುವುದನ್ನು ನಿರ್ಭೀತಿಯಿಂದ ಹೇಳುವ ಧ್ವನಿಯೊಂದಿಗೆ ನಾನು ಬದುಕಲು ಬಯಸುತ್ತೇನೆ. ಅದಕ್ಕೆ ನನ್ನ ಜೀವವೇ ಬೆಲೆ ಎಂದಾದರೆ ಅದನ್ನು ಕೂಡಾ ಕೊಡಲು ಸಿದ್ಧನಿದ್ದೇನೆ’’ ಎಂದು ಕಾಳಿ ಚಿತ್ರದ ನಿರ್ದೇಶಕಿ ಮಣಿ ಮೇಖಲೈ ಅವರು ಟ್ವಿಟ್ಟರ್‌ನಲ್ಲಿ ತಮಿಳುಭಾಷೆಯಲ್ಲಿ ಪೋಸ್ಟ್ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 ‘‘ ಟೊರಾಂಟೊ ನಗರದಲ್ಲಿ ಒಂದು ಸುಂದರ ಸಂಜೆ ಹೊತ್ತಲ್ಲಿ ಕಾಳಿ ದೇವಿ ತಿರುಗಾಡುವಾಗ ನಡೆಯುವ ಘಟನೆಗಳ ಕುರಿತಾದ ಕಾಲ್ಪನಿಕ ಚಿತ್ರ ಇದಾಗಿದೆ. ಈ ಚಿತ್ರವನ್ನು ನೀವು ನೋಡಿದಲ್ಲಿ, ನೀವು ‘ಲೀನಾ ಮಣಿಮೇಖಲೈಯನ್ನು ಬಂಧಿಸಿ’ ಎನ್ನುವ ಬದಲು ‘‘ಲೀನಾ ಮಣಿಮೇಖಲೈ ನಿಮಗೆ ನಮ್ಮ ಒಲುಮೆಗಳು’ ಎನ್ನುವಿರಿ’ ’ ಎಂದು ಮಣಿಮೇಖಲೈ ಪೋಸ್ಟ್ ಮಾಡಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X