ಕರ್ನಾಟಕ ಸಂಸ್ಕೃತಿಯು ಎಲ್ಲಾ ಸಂಸ್ಕೃತಿಯನ್ನು ಒಳಗೊಂಡ ಸಂಸ್ಕೃತಿ: ಡಾ. ಪುರುಷೋತ್ತಮ ಬಿಳಿಮಲೆ
ಮಂಗಳೂರು: ಸಮುದಾಯ ಮಂಗಳೂರು ಮತ್ತು ಜಿಲ್ಲೆಯ ಪ್ರಗತಿಪರ ಕಲಾವಿದರು ಉಪಸ್ಥಿತಿಯಲ್ಲಿ ಸಾಂಸ್ಕೃತಿಕ ಅಭಿವ್ಯಕ್ತಿಯ ಮೇಲಿನ ಹಲ್ಲೆಯನ್ನು ಖಂಡಿಸಿ ಶಿವಮೊಗ್ಗದ ಸೊರಬ ತಾಲೂಕಿನ ಅನವಟ್ಟಿಯಲ್ಲಿ ನಡೆದ ಜಯಂತ್ ಕಾಯ್ಕಿಣಿ ಇವರು ಬರೆದ ಜೊತೆಗಿರುವನು ಚಂದಿರ ನಾಟಕದ ಪ್ರದರ್ಶನದ ವೇಳೆ ಸಂಘ ಪರಿವಾರದ ದಾಳಿಯನ್ನು ಖಂಡಿಸಿ ನಗರದ ಕ್ಲಾಕ್ ಟವರ್ ಬಳಿಯಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು
ಈ ಪ್ರತಿಭಟನೆಯನ್ನು ಉದ್ದೇಶಿಸಿ ಜೆ.ಎನ್.ಯು ನ ನಿವೃತ್ತ ಉಪನ್ಯಾಸಕರಾದ ಡಾ. ಪುರುಷೋತ್ತಮ ಬಿಳಿಮಲೆ ಮಾತನಾಡುತ್ತಾ ಶಿವಮೊಗ್ಗದ ಅನವಟ್ಟಿಯಲ್ಲಿ ಜೊತೆಗಿರುವನು ಚಂದಿರ ನಾಟಕ ನಿಲ್ಲಿಸಿದ ಸಂಸ್ಕೃತಿಯ ಹೆಸರಿನಲ್ಲಿ ದಾಳಿ ಮಾಡುತ್ತಿರುವ ಸಂಘ ಪರಿವಾರ ಮತ್ತು ಬಜರಂಗದಳದ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಸಂಸ್ಕೃತಿಯ ಲವಲೇಶ ಕೂಡ ಗೊತ್ತಿಲ್ಲ ಕರ್ನಾಟಕದ ಸಂಸ್ಕೃತಿಯನ್ನು ಆರಂಭಿಕ ಹಂತದಲ್ಲಿ ಕಟ್ಟಿದವರು ಬೌದ್ದರು. ಕೊಪ್ಪಳದ ಗವಿಮಠ ಚಿತ್ರದುರ್ಗದ ಬ್ರಹ್ಮಗಿರಿ, ಮಂಗಳೂರಿನ ಕದ್ರಿ ಎಲ್ಲವೂ ಕೂಡ ಬೌದ್ಧ ಕೇಂದ್ರಗಳಾಗಿದ್ದವು. ನಂತರದಲ್ಲಿ ಶ್ರವಣಬೆಳಗೊಳವನ್ನು ಕೇಂದ್ರವಾಗಿಟ್ಟುಕೊಂಡು ಕರ್ನಾಟಕದಲ್ಲಿ ಜೈನರು ಜೈನ ಧರ್ಮವನ್ನು ಸ್ಥಾಪಿಸಿದರು. ಕನ್ನಡದ ಸಾಹಿತ್ಯಕ್ಕೆ ಅತ್ಯುತ್ತಮ ಸಾಹಿತ್ಯವನ್ನು ಕೊಟ್ಟವರು ಜೈನರೇ ಹೊರತು ವೈದಿಕರಲ್ಲ. ಕನ್ನಡದ ಪಂಪ, ರನ್ನ, ಪೊನ್ನ, ನಾಗಚಂದ್ರ ಕನ್ನಡಕೊಂದು ವ್ಯಾಕರಣವನ್ನು ಕೊಟ್ಟ ಕೆಶೀರಾಜ, ಕವಿ ರತ್ನಾಕರವರ್ಣಿ ಎಲ್ಲರೂ ಜೈನರಾಗಿದ್ದರು. ವೈದಿಕ ಧರ್ಮ ಕರ್ನಾಟಕಕ್ಕೆ ಕಾಲಿಟ್ಟದ್ದು 14ನೇ ಶತಮಾನದಲ್ಲಿ. ಶೃಂಗೇರಿಯಲ್ಲಿ ಶಂಕರಾಚಾರ್ಯರು ಮಠ ಸ್ಥಾಪಿಸಿ ವೈದಿಕ ಧರ್ಮದ ಪ್ರಚಾರಕ್ಕಿಳಿದರು ಮೈಸೂರಿನ ಹತ್ತಿರದ ಮೇಲುಕೋಟೆಯಲ್ಲಿ ತಮಿಳುನಾಡಿನಿಂದ ಓಡಿಸಿದಾಗ ಬಂದ ರಾಮಾನುಜಾಚಾರು ವಿಶಿಷ್ಟಾದ್ವೈತವನ್ನು ಸ್ಥಾಪಿಸಿದರು. ಏಳನೇ ಶತಮಾನದಲ್ಲಿ ಕರ್ನಾಟಕಕ್ಕೆ ಮುಸಲ್ಮಾನರ ಆಗಮನವಾಗಿದೆ. ಮಂಗಳೂರಿನಲ್ಲಿ ಹಿಂದೂ ಮತ್ತು ಮುಸಲ್ಮಾನರು ಅತ್ಯುತ್ತಮ ವ್ಯಾಪಾರವನ್ನು ನಡೆಸುತ್ತಿದ್ದಾರೆ ಎಂದು ಆಗಿನ ಕಾಲದ ವಿದ್ವಾಂಸರು ತಿಳಿಸಿರುತ್ತಾರೆ. ಆದಿಲ್ ಶಾಹಿಗಳು ಕರ್ನಾಟಕವನ್ನು 300 ವರ್ಷ ಆಳಿದ್ದರು ಅದ್ಭುತ ಕಟ್ಟಡಗಳು ಆ ಸಂದರ್ಭದಲ್ಲಿ ರಚನೆಯಾದವು.ಹಂಪಿಯ ವಾಸ್ತುಶಿಲ್ಪಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದವರು ಮುಸಲ್ಮಾನರು ಹಂಪಿಯ ಆನೆಲಾಯ, ಕಮಲ ಮಹಲ್ ಕೋಟೆಗಳು ಎಲ್ಲವೂ ಮುಸಲ್ಮಾನರ ಕೊಡುಗೆ ಹಂಪಿಯ ವಾಸ್ತು ಶಿಲ್ಪವೇ ಇಂಡೋ ಇಸ್ಲಾಮಿಕ್ ವಾಸ್ತು ಶಿಲ್ಪವಾಗಿದೆ.ಮುಸಲ್ಮಾನರು ಕರ್ನಾಟಕಕ್ಕೆ ಬರದೇ ಇರುತ್ತಿದ್ದರೆ ಹಂಪಿಯ ವಾಸ್ತು ಶಿಲ್ಪವೇ ಬೆಳೆಯುತ್ತಿರಲಿಲ್ಲ. ಜನಪದದ ಪ್ರಕಾರ ಉಡುಪಿಯ ಹತ್ತಿರದ ಬಬ್ಬರಿಯ ಹಿಂದುಗಳ ದೈವ ವಾಗಿದ್ದಾನೆ. ಹಾಗಾಗಿ ಭಾಷಾ ದೃಷ್ಟಿಯಿಂದ ಜಾನಪದ ದೃಷ್ಟಿಯಿಂದ ಇತಿಹಾಸದ ದೃಷ್ಟಿಯಿಂದ ಕರ್ನಾಟಕವು ಎಲ್ಲವನ್ನು ತನ್ನೊಳಗೆ ಸೇರಿಸಿಕೊಂಡು ಬೆಳೆದ ರಾಜ್ಯ . ಇಲ್ಲಿ ಹಿಂದೂ ಧರ್ಮ ಮತ್ತು ಇಸ್ಲಾಂ ಧರ್ಮದ ಒಳಗಡೆ ಎರಡು ಇಲ್ಲದ ಸಂಗಮ ಧರ್ಮ ಇರುವುದು ಇಲ್ಲಿನ ಸೌಂದರ್ಯವಾಗಿದೆ. ಆದರೆ ಇಂದಿನ ಸರಕಾರವು ಇಂತಹ ಶ್ರೀಮಂತ ಸಂಸ್ಕೃತಿಯನ್ನು ಬಿಟ್ಟು ಬರೀ ವೈದಿಕ ಸಂಸ್ಕೃತಿಯನ್ನು ಪೋಷಿಸುತ್ತಿರುವುದು ಸೋಚನೀಯ ಎಂದರು.
ಪ್ರತಿಭಟನೆಯನ್ನು ಉದ್ದೇಶಿಸಿ ಪ್ರೊಫೆಸರ್ ನರೇಂದ್ರ ನಾಯಕ್ ಇವರು ಮಾತನಾಡುತ್ತಾ ಭಾರತವು ಬಹುತ್ವದ ದೇಶ ಹಿಂದಿನಿಂದಲೂ ಇಲ್ಲಿ ಸಾಂಸ್ಕೃತಿಕ ಕೊಡುಕೊಳ್ಳುವಿಕೆಗಳು ಸಾಂಸ್ಕೃತಿಕತೆಗೆ ಯಾವತ್ತು ಕೋಮುವಾದ ಅಡ್ಡಿಯಾಗಿರಲಿಲ್ಲ ಹಿಂದೆ ಇಲ್ಲಿನ ಭಜನೆಗಳನ್ನು ಕೂಡ ಮುಸಲ್ಮಾನ ಹಾಡುಗಾರರು ಹಾಡಿದಾಗಲೂ ದೇಶದಲ್ಲಿ ಸಮಸ್ಯೆ ಇರಲಿಲ್ಲ. ಲತಾ ಮಂಗೇಶ್ಕರ್ ಅವರು "ಅಲ್ಲಾ ತೇರಾ ನಾಮ್ ಈಶ್ವರ್ ತೇರಾ ನಾಮ್" ಎಂದು ಅಂದು ಹಾಡಿದ್ದರು ಆದರೆ ಇಂದು ಆ ಹಾಡನ್ನು ಹಾಡಿದರೆ ದೇಶದಲ್ಲಿ ಹಿಂದೂ ಕೋಮುವಾದಿಗಳೂ ಮುಸ್ಲಿಂ ಮೂಲಭೂತವಾದಿಗಳೂ ಹಾಡುಗಾರರ ಮೇಲೆ ಮುಗಿಬೀಳಬಹುದಾದ ಪರಿಸ್ಥಿತಿ ಇರುವುದು ಪ್ರಜಾಪ್ರಭುತ್ವ ಭಾರತದ ದುರಂತ. ಇದು ನಡೆಯುತ್ತಿರುವುದು ರಾಜಕೀಯ ದುರುದ್ದೇಶ ಭಾಗವಾಗಿದೆ ಎಂದರು.
ನಿವೃತ್ತ ಉಪನ್ಯಾಸಕರಾದಂತಹ ಪ್ರೊ. ಪಟ್ಟಾಭಿರಾಮ ಸಮಯೋಜಿ ಇವರು ಮಾತನಾಡುತ್ತಾ ಭಾರತದಲ್ಲಿ ಅಭಿವ್ಯಕ್ತಿಯ ಮೇಲಿನ ದಾಳಿಗಳು ಹೆಚ್ಚಾಗುತ್ತಿದೆ ಇಲ್ಲಿನ ಸರ್ಕಾರಗಳು ಕೂಡ ಅವನು ಪೋಷಿಸುತ್ತೇವೆ ಎಂದರು.
ಸಮುದಾಯ ಮಂಗಳೂರು ಮತ್ತು ಜಿಲ್ಲೆಯ ಪ್ರಗತಿಪರ ಕಲಾವಿದರು ಉಪಸ್ಥಿತಿಯಲ್ಲಿ ಸಾಂಸ್ಕೃತಿಕ ಅಭಿವ್ಯಕ್ತಿಯ ಮೇಲಿನ ಹಲ್ಲೆಯನ್ನು ಖಂಡಿಸಿ ಶಿವಮೊಗ್ಗದ ಸೊರಬ ತಾಲೂಕಿನ ಅನವಟ್ಟಿಯಲ್ಲಿ ನಡೆದ ಜಯಂತ್ ಕಾಯ್ಕಿಣಿ ಇವರು ಬರೆದ ಜೊತೆಗಿರುವನು ಚಂದಿರ ನಾಟಕದ ಪ್ರದರ್ಶನದ ವೇಳೆ ಸಂಘ ಪರಿವಾರದ ದಾಳಿಯನ್ನು ಖಂಡಿಸಿ ಕ್ಲಾಕ್ ಟವರ್ ಬಳಿಯಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು.
ಈ ಪ್ರತಿಭಟನೆಯನ್ನು ಉದ್ದೇಶಿಸಿ ಜೆ.ಎನ್.ಯು ನ ನಿವೃತ್ತ ಉಪನ್ಯಾಸಕರಾದ ಡಾ. ಪುರುಷೋತ್ತಮ ಬಿಳಿಮಲೆ ಮಾತನಾಡುತ್ತಾ ಶಿವಮೊಗ್ಗದ ಅನವಟ್ಟಿಯಲ್ಲಿ ಜೊತೆಗಿರುವನು ಚಂದಿರ ನಾಟಕ ನಿಲ್ಲಿಸಿದ ಸಂಸ್ಕೃತಿಯ ಹೆಸರಿನಲ್ಲಿ ದಾಳಿ ಮಾಡುತ್ತಿರುವ ಸಂಘ ಪರಿವಾರ ಮತ್ತು ಬಜರಂಗದಳದ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಸಂಸ್ಕೃತಿಯ ಲವಲೇಶ ಕೂಡ ಗೊತ್ತಿಲ್ಲ ಕರ್ನಾಟಕದ ಸಂಸ್ಕೃತಿಯನ್ನು ಆರಂಭಿಕ ಹಂತದಲ್ಲಿ ಕಟ್ಟಿದವರು ಬೌದ್ದರು. ಕೊಪ್ಪಳದ ಗವಿಮಠ ಚಿತ್ರದುರ್ಗದ ಬ್ರಹ್ಮಗಿರಿ, ಮಂಗಳೂರಿನ ಕದ್ರಿ ಎಲ್ಲವೂ ಕೂಡ ಬೌದ್ಧ ಕೇಂದ್ರಗಳಾಗಿದ್ದವು. ನಂತರದಲ್ಲಿ ಶ್ರವಣಬೆಳಗೊಳವನ್ನು ಕೇಂದ್ರವಾಗಿಟ್ಟುಕೊಂಡು ಕರ್ನಾಟಕದಲ್ಲಿ ಜೈನರು ಜೈನ ಧರ್ಮವನ್ನು ಸ್ಥಾಪಿಸಿದರು. ಕನ್ನಡದ ಸಾಹಿತ್ಯಕ್ಕೆ ಅತ್ಯುತ್ತಮ ಸಾಹಿತ್ಯವನ್ನು ಕೊಟ್ಟವರು ಜೈನರೇ ಹೊರತು ವೈದಿಕರಲ್ಲ. ಕನ್ನಡದ ಪಂಪ, ರನ್ನ ,ಪೊನ್ನ, ನಾಗಚಂದ್ರ ಕನ್ನಡಕೊಂದು ವ್ಯಾಕರಣವನ್ನು ಕೊಟ್ಟ ಕೆಶೀರಾಜ, ಕವಿ ರತ್ನಾಕರವರ್ಣಿ ಎಲ್ಲರೂ ಜೈನರಾಗಿದ್ದರು. ವೈದಿಕ ಧರ್ಮ ಕರ್ನಾಟಕಕ್ಕೆ ಕಾಲಿಟ್ಟದ್ದು 14ನೇ ಶತಮಾನದಲ್ಲಿ. ಶೃಂಗೇರಿಯಲ್ಲಿ ಶಂಕರಾಚಾರ್ಯರು ಮಠ ಸ್ಥಾಪಿಸಿ ವೈದಿಕ ಧರ್ಮದ ಪ್ರಚಾರಕ್ಕಿಳಿದರು ಮೈಸೂರಿನ ಹತ್ತಿರದ ಮೇಲುಕೋಟೆಯಲ್ಲಿ ತಮಿಳುನಾಡಿನಿಂದ ಓಡಿಸಿದಾಗ ಬಂದ ರಾಮಾನುಜಾಚಾರು ವಿಶಿಷ್ಟಾದ್ವೈತವನ್ನು ಸ್ಥಾಪಿಸಿದರು. ಏಳನೇ ಶತಮಾನದಲ್ಲಿ ಕರ್ನಾಟಕಕ್ಕೆ ಮುಸಲ್ಮಾನರ ಆಗಮನವಾಗಿದೆ. ಮಂಗಳೂರಿನಲ್ಲಿ ಹಿಂದೂ ಮತ್ತು ಮುಸಲ್ಮಾನರು ಅತ್ಯುತ್ತಮ ವ್ಯಾಪಾರವನ್ನು ನಡೆಸುತ್ತಿದ್ದಾರೆ ಎಂದು ಆಗಿನ ಕಾಲದ ವಿದ್ವಾಂಸರು ತಿಳಿಸಿರುತ್ತಾರೆ. ಆದಿಲ್ ಶಾಹಿಗಳು ಕರ್ನಾಟಕವನ್ನು 300 ವರ್ಷ ಆಳಿದ್ದರು ಅದ್ಭುತ ಕಟ್ಟಡಗಳು ಆ ಸಂದರ್ಭದಲ್ಲಿ ರಚನೆಯಾದವು. ಹಂಪಿಯ ವಾಸ್ತುಶಿಲ್ಪಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದವರು ಮುಸಲ್ಮಾನರು ಹಂಪಿಯ ಆನೆಲಾಯ, ಕಮಲ ಮಹಲ್ ಕೋಟೆಗಳು ಎಲ್ಲವೂ ಮುಸಲ್ಮಾನರ ಕೊಡುಗೆ ಹಂಪಿಯ ವಾಸ್ತು ಶಿಲ್ಪವೇ ಇಂಡೋ ಇಸ್ಲಾಮಿಕ್ ವಾಸ್ತು ಶಿಲ್ಪವಾಗಿದೆ. ಮುಸಲ್ಮಾನರು ಕರ್ನಾಟಕಕ್ಕೆ ಬರದೇ ಇರುತ್ತಿದ್ದರೆ ಹಂಪಿಯ ವಾಸ್ತು ಶಿಲ್ಪವೇ ಬೆಳೆಯುತ್ತಿರಲಿಲ್ಲ. ಜನಪದದ ಪ್ರಕಾರ ಉಡುಪಿಯ ಹತ್ತಿರದ ಬಬ್ಬರಿಯ ಹಿಂದುಗಳ ದೈವ ವಾಗಿದ್ದಾನೆ. ಹಾಗಾಗಿ ಭಾಷಾ ದೃಷ್ಟಿಯಿಂದ ಜಾನಪದ ದೃಷ್ಟಿಯಿಂದ ಇತಿಹಾಸದ ದೃಷ್ಟಿಯಿಂದ ಕರ್ನಾಟಕವು ಎಲ್ಲವನ್ನು ತನ್ನೊಳಗೆ ಸೇರಿಸಿಕೊಂಡು ಬೆಳೆದ ರಾಜ್ಯ . ಇಲ್ಲಿ ಹಿಂದೂ ಧರ್ಮ ಮತ್ತು ಇಸ್ಲಾಂ ಧರ್ಮದ ಒಳಗಡೆ ಎರಡು ಇಲ್ಲದ ಸಂಗಮ ಧರ್ಮ ಇರುವುದು ಇಲ್ಲಿನ ಸೌಂದರ್ಯವಾಗಿದೆ. ಆದರೆ ಇಂದಿನ ಸರಕಾರವು ಇಂತಹ ಶ್ರೀಮಂತ ಸಂಸ್ಕೃತಿಯನ್ನು ಬಿಟ್ಟು ಬರೀ ವೈದಿಕ ಸಂಸ್ಕೃತಿಯನ್ನು ಪೋಷಿಸುತ್ತಿರುವುದು ಸೋಚನೀಯ ಎಂದರು.
ಪ್ರತಿಭಟನೆಯನ್ನು ಉದ್ದೇಶಿಸಿ ಪ್ರೊ. ನರೇಂದ್ರ ನಾಯಕ್ ಇವರು ಮಾತನಾಡುತ್ತಾ ಭಾರತವು ಬಹುತ್ವದ ದೇಶ ಹಿಂದಿನಿಂದಲೂ ಇಲ್ಲಿ ಸಾಂಸ್ಕೃತಿಕ ಕೊಡುಕೊಳ್ಳುವಿಕೆಗಳು ಸಾಂಸ್ಕೃತಿಕತೆಗೆ ಯಾವತ್ತು ಕೋಮುವಾದ ಅಡ್ಡಿಯಾಗಿರಲಿಲ್ಲ ಹಿಂದೆ ಇಲ್ಲಿನ ಭಜನೆಗಳನ್ನು ಕೂಡ ಮುಸಲ್ಮಾನ ಹಾಡುಗಾರರು ಹಾಡಿದಾಗಲೂ ದೇಶದಲ್ಲಿ ಸಮಸ್ಯೆ ಇರಲಿಲ್ಲ. ಲತಾ ಮಂಗೇಶ್ಕರ್ ಅವರು "ಅಲ್ಲಾ ತೇರಾ ನಾಮ್ ಈಶ್ವರ್ ತೇರಾ ನಾಮ್" ಎಂದು ಅಂದು ಹಾಡಿದ್ದರು ಆದರೆ ಇಂದು ಆ ಹಾಡನ್ನು ಹಾಡಿದರೆ ದೇಶದಲ್ಲಿ ಹಿಂದೂ ಕೋಮುವಾದಿಗಳೂ ಮುಸ್ಲಿಂ ಮೂಲಭೂತವಾದಿಗಳೂ ಹಾಡುಗಾರರ ಮೇಲೆ ಮುಗಿಬೀಳಬಹುದಾದ ಪರಿಸ್ಥಿತಿ ಇರುವುದು ಪ್ರಜಾಪ್ರಭುತ್ವ ಭಾರತದ ದುರಂತ. ಇದು ನಡೆಯುತ್ತಿರುವುದು ರಾಜಕೀಯ ದುರುದ್ದೇಶ ಭಾಗವಾಗಿದೆ ಎಂದರು.
ನಿವೃತ್ತ ಉಪನ್ಯಾಸಕರಾದಂತಹ ಪ್ರೊ. ಪಟ್ಟಾಭಿರಾಮ ಸಮಯೋಜಿ ಇವರು ಮಾತನಾಡುತ್ತಾ ಭಾರತದಲ್ಲಿ ಅಭಿವ್ಯಕ್ತಿಯ ಮೇಲಿನ ದಾಳಿಗಳು ಹೆಚ್ಚಾಗುತ್ತಿದೆ ಇಲ್ಲಿನ ಸರ್ಕಾರಗಳು ಕೂಡ ಅವನು ಪೋಷಿಸುತ್ತೇವೆ ಎಂದರು.
ಈ ಪ್ರತಿಭಟನೆಯಲ್ಲಿ ಪ್ರಗತಿಪರ ಚಿಂತಕರಾದ ಪ್ರಭಾಕರ ಕಾಪಿಕಾಡ್,ಶ್ಯಾಮಸುಂದರ ರಾವ್, ಡಾ.ಕೃಷ್ಣಪ್ಪ ಕೊಂಚಾಡಿ, ಗುಲಾಬಿ ಬಿಳಿಮಲೆ, ಸಮುದಾಯ ಮಂಗಳೂರು ಕೋಶಾಧಿಕಾರಿಯಾದ ವಾಸುದೇವ ಉಚ್ಚಿಲ್. ರಂಗ ನಿರ್ದೇಶಕರಾದ ವಿದ್ದು ಉಚ್ಚಿಲ್,ಕ್ರಿಸ್ಟೋಫರ್,ದಲಿತ ಚಳುವಳಿಯ ಎಂ.ದೇವದಾಸ್, ವಿದ್ಯಾರ್ಥಿ ನಾಯಕರಾದ ಮಾಧುರಿ ಬೋಳಾರ, ರೇವಂತ್, ವಿನಿತ್ ದೇವಾಡಿಗ, ಯುವಜನ ನಾಯಕರಾದ ಸಂತೋಷ್ ಬಜಾಲ್, ನಿತಿನ್ ಕುತ್ತಾರ್, ಪ್ರದೀಪ್, ರಂಗ ಕಲಾವಿದರಾದ ಮೇಘನಾ ಕುಂದಾಪುರ, ರಿಯಾಝ್ ಬೆಂಗರೆ, ಕಿಶೋರ್ ಉರ್ವಾಸ್ಟೋರ್, ಶರತ್ ಮೈಸೂರು, ಕೀರ್ತನ್ ಮಡಿಕೇರಿ, ಮನೀಶ್ ಪಿಂಟೋ, ಸಾಯಿಕಿರಣ್, ಕಮಲಾಕ್ಷ ಜಲ್ಲಿಗುಡ್ಡೆ, ಸಮುದಾಯ ಮಂಗಳೂರು ಕಾರ್ಯದರ್ಶಿ ಮನೋಜ್ ವಾಮಂಜೂರು ಮುಂತಾದವರು ಉಪಸ್ಥಿತರಿದ್ದರು.