Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ದಿಲ್ಲಿಯ ಆಪ್ ಸರಕಾರ ಜಾಹೀರಾತುಗಳಿಗೆ...

ದಿಲ್ಲಿಯ ಆಪ್ ಸರಕಾರ ಜಾಹೀರಾತುಗಳಿಗೆ ಮಾಡುವ ವೆಚ್ಚ 10 ವರ್ಷಗಳಲ್ಲಿ 44 ಪಟ್ಟು ಏರಿಕೆ: ಆರ್‌ಟಿಐಯಿಂದ ಬಹಿರಂಗ

ವಾರ್ತಾಭಾರತಿವಾರ್ತಾಭಾರತಿ8 July 2022 4:14 PM IST
share
ದಿಲ್ಲಿಯ ಆಪ್ ಸರಕಾರ ಜಾಹೀರಾತುಗಳಿಗೆ ಮಾಡುವ ವೆಚ್ಚ 10 ವರ್ಷಗಳಲ್ಲಿ 44 ಪಟ್ಟು ಏರಿಕೆ: ಆರ್‌ಟಿಐಯಿಂದ ಬಹಿರಂಗ

ಹೊಸದಿಲ್ಲಿ: ದಿಲ್ಲಿಯ ಆಪ್ ಸರಕಾರವು ಬಯೋ ಡೀಕಂಪೋಸರ್ ಯೋಜನೆ ಜಾರಿಗೊಳಿಸಲು ಮಾಡಿದ ಖರ್ಚಿಗಿಂತ ಅದರ ಜಾಹಿರಾತಿಗೆ ಮಾಡಿದ ಖರ್ಚು ಅಧಿಕವಾಗಿದೆ ಎಂಬ ವರದಿಗಳ ನಡುವೆ ಮಾಹಿತಿ ಹಕ್ಕುಗಳ ಕಾಯಿದೆಯಡಿ ದೊರತ ವಿವರಗಳನ್ನು ಗಮನಿಸಿದರೆ ದಿಲ್ಲಿ ಸರಕಾರವು ಕಳೆದ 10 ವರ್ಷಗಳಲ್ಲಿ ಜಾಹೀರಾತುಗಳಿಗೆ 44 ಪಟ್ಟು ಅಧಿಕ ವೆಚ್ಚ ಮಾಡಿದೆ ಎಂದು Scroll.in ವರದಿ ಮಾಡಿದೆ.

ಬಿಹಾರದ ವೈಶಾಲಿ ನಿವಾಸಿ ಕನ್ಹಯ್ಯಾ ಕುಮಾರ್ ಎಂಬವರು ಕಳೆದ 10 ವರ್ಷಗಳಲ್ಲಿ ಆಪ್ ಸರಕಾರ ಜಾಹೀರಾತುಗಳಿಗೆ ಮಾಡಿದ ಖರ್ಚುಗಳ ವಿವರ ಕೋರಿದ್ದರು.  ದಿಲ್ಲಿ ಸರಕಾರದ ಜಾಹೀರಾತು ಏಜನ್ಸಿಯಾಗಿರುವ ಶಬ್ದಾರ್ಥ್ ಇದರ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಈ ಅರ್ಜಿಯನ್ನು ಈ ವರ್ಷದ ಮೇ 2ರಂದು ಸಲ್ಲಿಸಲಾಗಿತ್ತು.

ಇದಕ್ಕೆ ದೊರೆತ ಉತ್ತದಲ್ಲಿ  ಕಳೆದ 10 ವರ್ಷಗಳಲ್ಲಿ, ಅಂದರೆ 2012-13 ಹಾಗೂ 2021-22 ನಡುವೆ ಆಪ್ ಸರಕಾರ ಜಾಹೀರಾತು, ಪ್ರಚಾರ ಮತ್ತಿತರ ವೆಚ್ಚಗಳಿಗೆ 44 ಪಟ್ಟು ಹೆಚ್ಚು ಖರ್ಚು ಮಾಡಿದೆ. 2012-13ರಲ್ಲಿ ಈ ನಿಟ್ಟಿನಲ್ಲಿ ಖರ್ಚು ರೂ 11.18 ಕೋಟಿ ಆಗಿದ್ದರೆ 2021-22ರಲ್ಲಿ ಖರ್ಚು ರೂ 488.97 ಕೋಟಿ ಆಗಿದೆ.

2013ರಲ್ಲಿ ದಿಲ್ಲಿಯಲ್ಲಿ ಹಿಂದಿನ ಶೀಲಾ ದೀಕ್ಷಿತ್ ನೇತೃತ್ವದ ಸರಕಾರದ ಅವಧಿ ಮುಗಿದಿತ್ತು ಹಾಗೂ 2015ರಲ್ಲಿ ಕೇಜ್ರಿವಾಲ್ ಸರಕಾರ ಅಧಿಕಾರಕ್ಕೆ ಬಂದಂದಿನಿಂದ ಜಾಹೀರಾತು ಮೇಲಿನ ವೆಚ್ಚಗಳು ಏರಿಕೆಯಾಗಿರುವುದು ಆರ್‍ಟಿಐ ಉತ್ತರದಿಂದ ಸ್ಪಷ್ಟವಿದೆ.

2­015-16ರಲ್ಲಿ ರೂ 81.23 ಕೋಟಿ ಖರ್ಚು ಮಾಡಲಾಗಿದ್ದರೆ 2016-17ರಲ್ಲಿ ರೂ 67.25 ಕೋಟಿ,  2017-18 ರಲ್ಲಿ ರೂ 117.76 ಕೋಟಿ, 2018-19 ರಲ್ಲಿ ರೂ 45.54 ಕೋಟಿ ಹಾಗೂ 2019-20ರಲ್ಲಿ ರೂ 199.99 ಕೋಟಿ ವೆಚ್ಚ ಮಾಡಿದೆ ಎಂದು ಆರ್‍ಟಿಐ ಮಾಹಿತಿ ತಿಳಿಸಿದೆ.

ರೈತರು ಕೃಷಿ ತ್ಯಾಜ್ಯ ಸುಟ್ಟು ಪರಿಸರ ಮಾಲಿನ್ಯ ಉಂಟು ಮಾಡುವುದನ್ನು ತಡೆಯುವ ಸಲುವಾಗಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯು ಅಭಿವೃದ್ಧಿ ಪಡಿಸಿದ ಬಯೋ ಡೀಕಂಪೋಸರ್ ಬಳಕೆಗೆ ಆಪ್ ಸರಕಾರ 2020-21 ಹಾಗೂ 2021-22 ರಲ್ಲಿ ಕೇವಲ ರೂ 68 ಲಕ್ಷ ವ್ಯಯಿಸಿದ್ದರೆ ಅದರ ಜಾಹೀರಾತಿಗಾಗಿ ರೂ. 23 ಕೋಟಿ ಖರ್ಚು ಮಾಡಿದೆ ಎಂದು ಇತ್ತೀಚೆಗೆ ಮಾಧ್ಯಮವೊಂದು ವರದಿ ಮಾಡಿತ್ತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X