Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಫೆಮಾ ಉಲ್ಲಂಘನೆ: ಟೈಮ್ಸ್ ಗ್ರೂಪ್ ನ...

ಫೆಮಾ ಉಲ್ಲಂಘನೆ: ಟೈಮ್ಸ್ ಗ್ರೂಪ್ ನ ಹಿರಿಯ ಅಧಿಕಾರಿಗಳನ್ನು ಹಲವು ಸುತ್ತು ವಿಚಾರಣೆಗೊಳಪಡಿಸಿದ ಇಡಿ

ವಾರ್ತಾಭಾರತಿವಾರ್ತಾಭಾರತಿ8 July 2022 6:55 PM IST
share
ಫೆಮಾ ಉಲ್ಲಂಘನೆ: ಟೈಮ್ಸ್ ಗ್ರೂಪ್ ನ ಹಿರಿಯ ಅಧಿಕಾರಿಗಳನ್ನು ಹಲವು ಸುತ್ತು ವಿಚಾರಣೆಗೊಳಪಡಿಸಿದ ಇಡಿ

ಹೊಸದಿಲ್ಲಿ,ಜು.8: ಟೈಮ್ಸ್ ಆಫ್ ಇಂಡಿಯಾ ಗ್ರೂಪ್  ಒಡೆತನವನ್ನು ಹೊಂದಿರುವ ಬೆನೆಟ್ ಕೋಲ್ಮನ್ ಆ್ಯಂಡ್ ಕಂಪನಿ ಲಿ.(ಬಿಸಿಸಿಎಲ್) ಜಾರಿ ನಿರ್ದೇಶನಾಲಯ (ಈ.ಡಿ.)ದ ನಿಗಾದಲ್ಲಿದೆ ಎಂದು Indianexpress.com ವರದಿ ಮಾಡಿವೆ. ಕಂಪನಿಯ ಉನ್ನತ ಅಧಿಕಾರಿಗಳನ್ನು ಹಲವಾರು ಸುತ್ತುಗಳ ವಿಚಾರಣೆಗೆ ಒಳಪಡಿಸಿರುವ ಈ.ಡಿ.ಮಾಹಿತಿಗಳನ್ನು ನೀಡಿ ಸಹಕರಿಸುವಂತೆ ವಿದೇಶಿ ತಾಣಗಳಿಗೆ ಔಪಚಾರಿಕ ವಿನಂತಿಗಳನ್ನು ಕಳುಹಿಸುತ್ತಿದೆ ಎಂದು ಮೂಲಗಳು ದೃಢಪಡಿಸಿರುವುದನ್ನು ವರದಿಯುಉಲ್ಲೇಖಿಸಿದೆ. 

ಬಿಸಿಸಿಎಲ್ ಡಿಜಿಟಲ್,ಟಿವಿ ಮತ್ತು ರೇಡಿಯೊ ಸೇರಿದಂತೆ ವಿವಿಧ ಭಾಷೆಗಳು ಮತ್ತು ಪ್ಲಾಟ್ ಫಾರ್ಮ್ ಗಳಲ್ಲಿ ಹಲವಾರು ಮಾಧ್ಯಮ ಮತ್ತು ಮನೋರಂಜನೆ ಬ್ರಾಂಡ್‌ಗಳನ್ನು ಹೊಂದಿದೆ.
ಬಿಸಿಸಿಎಲ್ ಮತ್ತು ಜಾಗತಿಕ ತೆರಿಗೆ ಸ್ವರ್ಗವಾಗಿರುವ ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್ (ಬಿವಿಐ)ನಲ್ಲಿಯ ಸಂಸ್ಥೆಗಳ ನಡುವಿನ 900 ಕೋ.ರೂ.ಅಧಿಕ ಮೊತ್ತದ ವಹಿವಾಟುಗಳನ್ನು ಈ.ಡಿ.ಪರಿಶೀಲಿಸುತ್ತಿದೆ.

ಪ್ರಸ್ತುತ ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ (ಫೆಮಾ)ಯ ಉಲ್ಲಂಘನೆ ಆರೋಪಗಳ ಕುರಿತು ಈ.ಡಿ.ವಿಚಾರಣೆಯನ್ನು ನಡೆಸುತ್ತಿದೆಯೇ ಹೊರತು ಹೆಚ್ಚು ಕಟ್ಟುನಿಟ್ಟಿನ ಅಕ್ರಮ ಹಣ ವರ್ಗಾವಣೆ (ತಡೆ) ಕಾಯ್ದೆ (ಪಿಎಂಎಲ್ಎ)ಯಡಿ ಅಲ್ಲ ಎನ್ನುವುದನ್ನು ವರದಿಯು ದೃಢಪಡಿಸಿದೆ. ತನಿಖೆಯ ಕುರಿತು ಪ್ರತಿಕ್ರಿಯಿಸಲು ಈ.ಡಿ.ಅಧಿಕಾರಿಗಳು ನಿರಾಕರಿಸಿದ್ದಾರೆ.

 ಕಂಪನಿಯ ಆಯವ್ಯಯ ಪತ್ರದಲ್ಲಿ ತೋರಿಸಿರುವಂತೆ ಬಿವಿಐನಲ್ಲಿ ಸ್ಥಾಪನೆಗೊಂಡ ಎಂಎಕ್ಸ್ ಮೀಡಿಯಾ ಕಂ.ಲಿ.ಟೈಮ್ಸ್ ಗ್ರೂಪ್‌ನ ವಿವಿಧ ಕಂಪನಿಗಳಲ್ಲಿ ಒಂದಾಗಿದೆ. 2017-18 ಮತ್ತು 2018-19ರಲ್ಲಿ ಇದನ್ನು ಮಾತೃಸಂಸ್ಥೆಯ ಶೇ.52.35ರಷ್ಟು ಪಾಲು ಬಂಡವಾಳವನ್ನು ಹೊಂದಿರುವ ‘ಅಧೀನ’ ಕಂಪನಿಯಾಗಿ ತೋರಿಸಲಾಗಿತ್ತು. 2019-20 ಮತ್ತು 2020-21ರಲ್ಲಿ ಮಾತೃಸಂಸ್ಥೆಯ ಪಾಲು ಬಂಡವಾಳವನ್ನು ಶೇ.40.36ಕ್ಕೆ ತಗ್ಗಿಸುವ ಮೂಲಕ ‘ಸಹವರ್ತಿ’ ಕಂಪನಿಯಾಗಿ ಬದಲಿಸಲಾಗಿದೆ.
2019ನೇ ಸಾಲಿಗಾಗಿ ವಿದೇಶಿ ನೇರ ಹೂಡಿಕೆಯ ಹೊರಹರಿವಿನ ಕುರಿತು ಆರ್ಬಿಐಗೆ ಸಲ್ಲಿಸಲಾಗಿರುವ ವರದಿಯಲ್ಲಿ ಎಂಎಕ್ಸ್ ಮೀಡಿಯಾ ಕಂ.ಲಿ.ಅನ್ನು ‘ಹಣಕಾಸು ವಿಮೆ ಮತ್ತು ಉದ್ಯಮ ಸೇವೆಗಳಲ್ಲಿ ’ ವ್ಯವಹರಿಸುವ ಜಂಟಿ ಉದ್ಯಮವನ್ನಾಗಿ ಪಟ್ಟಿ ಮಾಡಲಾಗಿದ್ದು,ಅದು 35.8 ಮಿಲಿಯನ್ ಡಾಲರ್ಗಳ ಶೇರು ಬಂಡವಾಳವನ್ನು ಹೊಂದಿದೆ.
ದಕ್ಷಿಣ ಕೊರಿಯಾ,ಚೀನಾ ಮತ್ತು ಸಿಂಗಾಪುರಗಳಲ್ಲಿ ಸ್ಥಾಪನೆಗೊಂಡಿರುವ ಇತರ ‘ಸಹವರ್ತಿ’ ಕಂಪನಿಗಳನ್ನೂ ಬಿಸಿಸಿಎಲ್ನ ಆಯವ್ಯಯ ಪತ್ರದಲ್ಲಿ ಪಟ್ಟಿ ಮಾಡಲಾಗಿದೆ.
ಕಂಪನಿಗಳ ರಿಜಿಸ್ಟ್ರಾರ್ (ಆರ್ಒಸಿ)ರ ದಾಖಲೆಗಳಂತೆ 2019-20ರಲ್ಲಿ ತನ್ನ ಕಾರ್ಯಾಚರಣೆಗಳಿಂದ ಬಿಸಿಸಿಎಲ್ 9,611 ಕೋ.ರೂ.ಗಳ ಆದಾಯವನ್ನು ಗಳಿಸಿದ್ದರೆ ಕೋವಿಡ್ ವರ್ಷವಾದ 2020-21ರಲ್ಲಿ ಅದು ಶೇ.44ರಷ್ಟು ತೀವ್ರ ಕುಸಿದಿದ್ದು,5,337 ಕೋ.ರೂ.ಗಳಷ್ಟಾಗಿತ್ತು. ಕಂಪನಿಯ ನಷ್ಟವೂ ವಿತ್ತವರ್ಷ 2019-20ರಲ್ಲಿಯ 451 ಕೋ.ರೂ.ಗೆ ಹೋಲಿಸಿದರೆ ವಿತ್ತವರ್ಷ 2020-21ರಲ್ಲಿ ದುಪ್ಪಟ್ಟುಗೊಂಡು 997 ಕೋ.ರೂ.ಗಳಷ್ಟಾಗಿದೆ. ಬಿಸಿಸಿಎಲ್ 2018-19ನೇ ವಿತ್ತವರ್ಷದಲ್ಲಿ 484 ಕೋ.ರೂ.ಗಳ ನಿವ್ವಳ ಲಾಭವನ್ನು ದಾಖಲಿಸಿತ್ತು

share
ವಾರ್ತಾಭಾರತಿ
ವಾರ್ತಾಭಾರತಿ
Next Story
X