ಬೇಕಲ: 6 ಲಕ್ಷ ರೂ. ಕಳ್ಳತನ, ಚಿತ್ರದುರ್ಗದ ದಂಪತಿ ಬಂಧನ
![ಬೇಕಲ: 6 ಲಕ್ಷ ರೂ. ಕಳ್ಳತನ, ಚಿತ್ರದುರ್ಗದ ದಂಪತಿ ಬಂಧನ ಬೇಕಲ: 6 ಲಕ್ಷ ರೂ. ಕಳ್ಳತನ, ಚಿತ್ರದುರ್ಗದ ದಂಪತಿ ಬಂಧನ](https://www.varthabharati.in/sites/default/files/images/articles/2022/07/10/341897-1657429892.jpg)
ಕಾಸರಗೋಡು : ಬೇಕಲ ರೆಸಾರ್ಟ್ ನಿಂದ ಸುಮಾರು ಆರು ಲಕ್ಷ ರೂ . ಕಳವುಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ರೆಸಾರ್ಟ್ ನ ಸಿಬಂದಿಗಳಾಗಿದ್ದ ಚಿತ್ರದುರ್ಗ ನಿವಾಸಿಗಳಾದ ದಂಪತಿಯನ್ನು ಬೇಕಲ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗದ ಪ್ರದೀಪ್ ( 25) ಮತ್ತು ಪತ್ನಿ ನಿವೇದಿತಾ ( 25) ಬಂಧಿತರು.
ಬೇಕಲ ಕಾಫಿಲ್ ಬೀಚ್ ರಸ್ತೆಯ ಬೇಕಲ ಹೋಂ ಸ್ಟೇ ರೆಸಾರ್ಟ್ ನಿಂದ ನಗದು ಕಳವುಗೈದಿದ್ದರು. ರೆಸಾರ್ಟ್ ನ ರಿಶಿಪ್ಸನ್ ಕೊಠಡಿಯ ಕಪಾಟಿನಲ್ಲಿರಿಸಲಾಗಿದ್ದ ನಗದು ಮೊತ್ತ ದಿನಗಳ ಹಿಂದೆ ಕಳವಾಗಿತ್ತು. ಈ ಬಗ್ಗೆ ಬೇಕಲ ಠಾಣಾ ಪೊಲೀಸರಿಗೆ ರೆಸಾರ್ಟ್ ಮಾಲಕ ಕೆ . ಕೆ ಪ್ರದೀಪ್ ದೂರು ನೀಡಿದ್ದರು. ಸಿಬಂದಿಗಳೇ ಈ ಕಳವು ನಡೆಸಿರಬಹುದು ಎಂದು ಸಂಶಯಿಸಲಾಗಿತ್ತು . ಈ ನಡುವೆ ಈ ಇಬ್ಬರು ರೆಸಾರ್ಟ್ ನಿಂದ ತಲೆ ಮರೆಸಿಕೊಂಡಿದ್ದರು . ಬೇಕಲ ಠಾಣಾ ಸಬ್ ಇನ್ಸ್ ಪೆಕ್ಟರ್ ಎಂ . ರಜನೀಶ್ ಹಾಗೂ ಎ. ಎಸ್ . ರಾಜನ್ ನೇತೃತ್ವದಲ್ಲಿ ನಡೆಸಿದ ತನಿಖೆಯಿಂದ ಚಿತ್ರದುರ್ಗದಿಂದ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳವು ಬಳಿಕ ಊರಿಗೆ ಪರಾರಿಯಾಗಿದ್ದ ಇವರನ್ನು ಮೊಬೈಲ್ ಲೊಕೇಶನ್ ಮೂಲಕ ಪತ್ತೆ ಹಚ್ಚಿ ಬಂಧಿಸಲಾಯಿತು.
ಕಳವುಗೈದ ಆರು ಲಕ್ಷ ರೂ . ಗಳಲ್ಲಿ 2.10 ಲಕ್ಷ ರೂ . ನಿಂದ ಒಂದು ಹೊಸ ಬೈಕ್ ಹಾಗೂ ಎರಡು ಮೊಬೈಲ್ ಫೋನ್ ನ್ನು ಖರೀದಿಸಿದ್ದರು. ತನಿಖಾ ತಂಡ ವಶಪಡಿಸಿಕೊಂಡ ಬೈಕ್ ನ್ನು ಚಿತ್ರದುರ್ಗ ಪೊಲೀಸ್ ಠಾಣೆ ಯ ಕಸ್ಟಡಿ ಯಲ್ಲಿರಿಸಲಾಗಿದೆ.
ಇಬ್ಬರನ್ನು ಬೇಕಲ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ