ಉಡುಪಿ; ಸಾಲ ಯೋಜನೆ ನಂಬಿ ಲಕ್ಷಾಂತರ ರೂ. ಕಳೆದುಕೊಂಡ ಕೃಷಿಕ!

ಉಡುಪಿ: ಪ್ರಧಾನ ಮಂತ್ರಿ ಬ್ಯುಸಿನೆಸ್ ಸಾಲ ಯೋಜನೆಯಡಿ ಸಾಲ ನೀಡುವ ಕುರಿತ ಮೊಬೈಲ್ ಸಂದೇಶವನ್ನು ನಂಬಿದ ಕೃಷಿಕರೊಬ್ಬರು, ಲಕ್ಷಾಂತರ ರೂ. ಹಣ ಕಳೆದುಕೊಂಡ ಘಟನೆ ಕಾಪು ಸಮೀಪ ಬೆಳಪು ಪ್ರಸಾದ್ ನಗರ ಎಂಬಲ್ಲಿ ನಡೆದಿದೆ.
ಬೆಳಪು ಜವನರ ಕಟ್ಟೆಯ ವಿರೇಶ್(55) ಎಂಬವರ ಮೊಬೈಲ್ಗೆ ಜೂ.8ರಂದು ಪ್ರಧಾನ ಮಂತ್ರಿ ಬ್ಯುಸಿನೆಸ್ ಸಾಲ ಯೋಜನೆ ಅಡಿಯಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಬಗ್ಗೆ ಸಂದೇಶ ಬಂದಿತ್ತು. ಇದನ್ನು ನಂಬಿದ ಅವರು ಸಂದೇಶದಲ್ಲಿದ್ದ ಮೊಬೈಲ್ ನಂಬ್ರಕ್ಕೆ ಕರೆ ಮಾಡಿದರು. ಹೀಗೆ ಅಪರಿಚಿತ ವ್ಯಕ್ತಿಗಳು ಕ್ಲಿಯರೆನ್ಸ್ ಹಾಗೂ ಇತರೆ ಕಾರಣಗಳಿಗಾಗಿ ವಿರೇಶ್ ಅವರಿಂದ 2,62,700ರೂ. ಹಣವನ್ನು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಆನ್ಲೈನ್ ಮೂಲಕ ವರ್ಗಾವಣೆ ಮಾಡಿಸಿಕೊಂಡು, ಮೋಸ ಮಾಡಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





