ಲಂಕಾ ಅಧ್ಯಕ್ಷರು ಮಾಲ್ಡೀವ್ಸ್ ಗೆ ಪಲಾಯನ ಮಾಡಲು ನೆರವು ನೀಡಿದ್ದೇವೆ ಎಂಬ ವರದಿ ಆಧಾರರಹಿತ: ಭಾರತ
![ಲಂಕಾ ಅಧ್ಯಕ್ಷರು ಮಾಲ್ಡೀವ್ಸ್ ಗೆ ಪಲಾಯನ ಮಾಡಲು ನೆರವು ನೀಡಿದ್ದೇವೆ ಎಂಬ ವರದಿ ಆಧಾರರಹಿತ: ಭಾರತ ಲಂಕಾ ಅಧ್ಯಕ್ಷರು ಮಾಲ್ಡೀವ್ಸ್ ಗೆ ಪಲಾಯನ ಮಾಡಲು ನೆರವು ನೀಡಿದ್ದೇವೆ ಎಂಬ ವರದಿ ಆಧಾರರಹಿತ: ಭಾರತ](https://www.varthabharati.in/sites/default/files/images/articles/2022/07/13/342191-1657725923.jpg)
Photo:twitter
ಕೊಲಂಬೊ,ಜು.13: ಅಧ್ಯಕ್ಷ ಗೊತಬಯ ರಾಜಪಕ್ಸ ಅವರು ದೇಶವನ್ನು ತೊರೆಯಲು ಭಾರತವು ನೆರವಾಗಿತ್ತು ಎಂಬ ಮಾಧ್ಯಮ ವರದಿಗಳನ್ನು ಬುಧವಾರ ತಳ್ಳಿಹಾಕಿರುವ ಶ್ರೀಲಂಕಾದಲ್ಲಿಯ ಭಾರತೀಯ ರಾಯಭಾರಿ ಕಚೇರಿಯು, ಅವುಗಳು ನಿರಾಧಾರ ಮತ್ತು ಊಹಾಪೋಹಗಳಾಗಿವೆ ಎಂದು ಸ್ಪಷ್ಟಪಡಿಸಿದೆ.
‘ಪ್ರಜಾಸತ್ತಾತ್ಮಕ ವಿಧಾನಗಳು ಮತ್ತು ವೌಲ್ಯಗಳು, ಸ್ಥಾಪಿತ ಪ್ರಜಾಸತ್ತಾತ್ಮಕ ಸಂಸ್ಥೆಗಳು ಮತ್ತು ಸಾಂವಿಧಾನಿಕ ಚೌಕಟ್ಟಿನ ಮೂಲಕ ಸಮೃದ್ಧಿ ಮತ್ತು ಪ್ರಗತಿಗಾಗಿ ತಮ್ಮ ಆಕಾಂಕ್ಷೆಗಳನ್ನು ಸಾಕಾರಗೊಳಿಸಿಕೊಳ್ಳಲು ಬಯಸಿರುವ ಶ್ರೀಲಂಕಾದ ಪ್ರಜೆಗಳಿಗೆ ಬೆಂಬಲದ ಮುಂದುವರಿಕೆಯನ್ನು ಭಾರತವು ಪುನರುಚ್ಚರಿಸುತ್ತಿದೆ’ಎಂದೂ ಅದು ಟ್ವೀಟಿಸಿದೆ.
High Commission categorically denies baseless and speculative media reports that India facilitated the recent reported travel of @gotabayar @Realbrajapaksa out of Sri Lanka. It is reiterated that India will continue to support the people of Sri Lanka (1/2)
— India in Sri Lanka (@IndiainSL) July 13, 2022
Next Story