VIDEO- ಸಿದ್ದರಾಮಯ್ಯರ ಬೆಂಗಾವಲು ವಾಹನದ ಕಡೆಗೆ ಪರಿಹಾರದ ಹಣವನ್ನೇ ಎಸೆದು ಆಕ್ರೋಶ
ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ ಪರಿಹಾರ ಧನದ ಹಣವನ್ನೇ ಮಹಿಳೆಯೊಬ್ಬರು ವಾಪಸ್ಸು ಎಸೆದಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಇತ್ತೀಚೆಗೆ ಬಾದಾಮಿಯ ಕೆರೂರು ಪಟ್ಟಣದಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ ಗಾಯಗೊಂಡಿದ್ದ ಗಾಯಾಳುಗಳನ್ನು ಭೇಟಿಯಾಗಲು ಸಿದ್ದರಾಮಯ್ಯ ಆಗಮಿಸಿದ್ದಾಗ ಗಾಯಾಳುಗಳ ಸಂಬಂಧಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಗಾಯಾಳುಗಳಿಗೆ ನೀಡಿದ್ದ 2 ಲಕ್ಷ ರೂ. ಹಣವನ್ನು ಮರಳಿ ಸಿದ್ದರಾಮಯ್ಯ ಅವರ ಪೊಲೀಸ್ ಬೆಂಗಾವಲು ವಾಹನಕ್ಕೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಮತ ಕೇಳಲು ಬರುತ್ತಾರೆ.ನಂತರ ಯಾವುದೇ ಸಮಸ್ಯೆ ಬಗ್ಗೆ ಗಮನ ಹರಿಸುತ್ತಿಲ್ಲ.ಹಿಂದೂ ಮುಸ್ಲಿಮ್ ಎನ್ನದೇ ಎಲ್ಲರಿಗೂ ಸಮಾನರಾಗಿ ಕಾಣಬೇಕು.ಆದರೆ ನಾವು ಏನು ತಪ್ಪು ಮಾಡದೆ ಇದ್ದರೂ,ವಿನಾಕಾರಣ ನಮ್ಮ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಹಣ ಎಸೆದು ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Next Story