ಮೊದಲೇ ಪ್ಯಾಕ್, ಲೇಬಲ್ ಮಾಡಲಾದ ಆಹಾರದ ಮೇಲಿನ ಜಿಎಸ್ಟಿ ಹಿಂದೆಗೆತಕ್ಕೆ ಕೇಜ್ರಿವಾಲ್ ಆಗ್ರಹ
![ಮೊದಲೇ ಪ್ಯಾಕ್, ಲೇಬಲ್ ಮಾಡಲಾದ ಆಹಾರದ ಮೇಲಿನ ಜಿಎಸ್ಟಿ ಹಿಂದೆಗೆತಕ್ಕೆ ಕೇಜ್ರಿವಾಲ್ ಆಗ್ರಹ ಮೊದಲೇ ಪ್ಯಾಕ್, ಲೇಬಲ್ ಮಾಡಲಾದ ಆಹಾರದ ಮೇಲಿನ ಜಿಎಸ್ಟಿ ಹಿಂದೆಗೆತಕ್ಕೆ ಕೇಜ್ರಿವಾಲ್ ಆಗ್ರಹ](https://www.varthabharati.in/sites/default/files/images/articles/2022/07/18/342831-1658160804.jpg)
ಹೊಸದಿಲ್ಲಿ,ಜು.18: ಮೊದಲೇ ಪ್ಯಾಕ್ ಮತ್ತು ಲೇಬಲ್ ಮಾಡಲಾದ ಆಹಾರ ಸಾಮಗ್ರಿಗಳ ಮೇಲೆ ಹೊಸದಾಗಿ ಹೇರಲಾಗಿರುವ ಜಿಎಸ್ಟಿಯನ್ನು ಹಿಂದೆಗೆದುಕೊಳ್ಳುವಂತೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸೋಮವಾರ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.
ಇಡೀ ದೇಶವೇ ತೀವ್ರ ಬೆಲೆ ಏರಿಕೆಯನ್ನು ಎದುರಿಸುತ್ತಿದೆ ಮತ್ತು ಕೇಂದ್ರವು ಆಹಾರ ಸಾಮಗ್ರಿಗಳ ಮೇಲೆ ಜಿಎಸ್ಟಿಯನ್ನು ಹೇರುವ ಮೂಲಕ ಅವುಗಳನ್ನು ಇನ್ನಷ್ಟು ದುಬಾರಿಯಾಗಿಸಿದೆ ಎಂದು ಕೇಜ್ರಿವಾಲ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
25 ಕೆ.ಜಿ.ಗಿಂತ ಕಡಿಮೆ ತೂಕದ, ಆಹಾರ ಧಾನ್ಯಗಳು,ಬೇಳೆಕಾಳುಗಳು ಮತ್ತು ಹಿಟ್ಟಿನಂತಹ ಮೊದಲೇ ಪ್ಯಾಕ್ ಮಾಡಲಾದ ಮತ್ತು ಲೇಬಲ್ ಹಚ್ಚಲಾದ ಆಹಾರ ಸಾಮಗ್ರಿಗಳ ಮೇಲೆ ಶೇ.5ರಷ್ಟು ಜಿಎಸ್ಟಿಯನ್ನು ವಿಧಿಸಲಾಗಿದ್ದು,ಇದು ಸೋಮವಾರದಿಂದ ಜಾರಿಗೊಂಡಿದೆ.
Next Story