ಮುಂಬೈ-ಮಂಗಳೂರು ಜಂಕ್ಷನ್ ಮಧ್ಯೆ ಮತ್ತೊಂದು ಸಾಪ್ತಾಹಿಕ ವಿಶೇಷ ರೈಲು

ಫೈಲ್ ಫೋಟೊ
ಉಡುಪಿ: ಗಣೇಶ ಚತುರ್ಥಿ ಸಂದರ್ಭ ಜನರ ವಿಶೇಷ ಬೇಡಿಕೆಯ ಹಿನ್ನೆಲೆಯಲ್ಲಿ ಕೊಂಕಣ ರೈಲ್ವೆಯು ಸೆಂಟ್ರಲ್ ರೈಲ್ವೆಯ ಸಹಯೋಗ ದೊಂದಿಗೆ ಮುಂಬೈಯ ಲೋಕಮಾನ್ಯ ತಿಲಕ್ ಹಾಗೂ ಮಂಗಳೂರು ಜಂಕ್ಷನ್ ನಡುವೆ ಇನ್ನೊಂದು ಸಾವ್ತಾಹಿಕ ಗಣಪತಿ ವಿಶೇಷ ರೈಲು ಓಡಿಸಲು ನಿರ್ಧರಿಸಿದೆ.
ರೈಲು ನಂ.೦೧೧೬೫ ಲೋಕಮಾನ್ಯ ತಿಲಕ್- ಮಂಗಳೂರು ಜಂಕ್ಷನ್ ಎಸಿ ವಿಶೇಷ ಸಾಪ್ತಾಹಿಕ ರೈಲು ಆ.೧೬, ೨೩, ೩೦, ಸೆ.೬ರ ಪ್ರತಿ ಮಂಗಳವಾರ ಮಧ್ಯರಾತ್ರಿ ೧೨.೪೫ಕ್ಕೆ ಮುಂಬೈಯಿಂದ ಪ್ರಯಾಣ ಬೆಳೆಸಲಿದ್ದು, ಅದೇ ದಿನ ಸಂಜೆ ೭:೩೦ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.
ರೈಲು ನಂ.೦೧೧೬೬ ಮಂಗಳೂರು ಜಂಕ್ಷನ್- ಲೋಕಮಾನ್ಯ ತಿಲಕ್ ಎಸಿ ವಿಶೇಷ ಸಾಪ್ತಾಹಿಕ ರೈಲು ಆ.೧೬, ೨೩, ೩೦ ಹಾಗೂ ಸೆ.೬ರಂದು ಪ್ರತಿ ಮಂಗಳವಾರ ರಾತ್ರಿ ೧೦:೨೦ಕ್ಕೆ ಮಂಗಳೂರು ಜಂಕ್ಷನ್ನಿಂದ ಪ್ರಯಾಣ ಬೆಳೆಸಲಿದ್ದು, ಮರುದಿನ ಸಂಜೆ ೬:೩೦ಕ್ಕೆ ಮುಂಬೈ ತಲುಪಲಿದೆ.
ಈ ರೈಲಿಗೆ ಥಾಣೆ, ಪನ್ವೇಲ್,ರೋಹಾ, ವೀರ್, ಖೇಡ್, ಚಿಪ್ಳುಣ್, ಸಂಗಮೇಶ್ವರ ರೋಡ್, ರತ್ನಗಿರಿ, ರಾಜಪುರ್ ರೋಡ್, ವೈಭವವಾಡಿ ರೋಡ್, ಕಂಕವೇಲಿ, ಸಿಂಧುದುರ್ಗ, ಕುಡಾಲ್, ಸಾವಂತವಾಡಿ ರೋಡ್, ತೀವಿಂ, ಕರ್ಮಾಲಿ, ಮಡಗಾಂವ್ ಜಂಕ್ಷನ್, ಕಾರವಾರ, ಅಂಕೋಲ, ಗೋಕರ್ಣ ರೋಡ್, ಕುಮಟ, ಹೊನ್ನಾವರ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್ ಬೈಂದೂರು, ಕುಂದಾಪುರ, ಉಡುಪಿ, ಮುಲ್ಕಿ ಹಾಗೂ ಸುರತ್ಕಲ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ.
ಈ ರೈಲು ಒಟ್ಟು 22 ಕೋಚ್ಗಳೊಂದಿಗೆ ಓಡಲಿದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.







