ಬೆಂಗಳೂರು: ಒಂದೇ ದಿನದಲ್ಲಿ ಪೊಲೀಸ್ ಠಾಣಾಧಿಕಾರಿಗಳಾದ ಇಬ್ಬರು ಬಾಲಕರು

photo credit- twitter@DCPSEBCP
ಬೆಂಗಳೂರು, ಜು.21: ಮಾರಣಾಂತಿಕ ಕಾಯಿಲೆಗಳಿಂದಾಗಿ ಜೀವನ್ಮರಣದ ಹೋರಾಟ ನಡೆಸುತ್ತಿರುವ ಇಬ್ಬರು ಬಾಲಕರ ಇಚ್ಛೆಯಂತೆ ಒಂದು ದಿನ ಅವರಿಗೆ ಪೊಲೀಸ್ ಠಾಣಾಧಿಕಾರಿ ಆಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಯಿತು.
ಮಿಥಿಲೇಶ್ ಹಾಗೂ ಮುಹಮ್ಮದ್ ಸಲ್ಮಾನ್ ಎಂಬ ಇಬ್ಬರು ಬಾಲಕರು ಮಾರಣಾಂತಿಕ ವ್ಯಾಧಿಗಳಿಂದಾಗಿ ಕಿದ್ವಾಯಿ ಹಾಗೂ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ.
ಹಾಗಾಗಿ, ಇಲ್ಲಿನ ಆಗ್ನೇಯ ವಿಭಾಗದ ಪೊಲೀಸರು ಬಾಲಕರ ಆಸೆಯನ್ನು ಈಡೇರಿಸಿದರು. ಬಾಲಕರಿಬ್ಬರ ಬಗ್ಗೆ ಮೇಕ್ ಎ ವಿಶ್ ಫೌಂಡೇಶನ್ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ. ಬಾಬಾ ಅವರ ಗಮನಕ್ಕೆ ತಂದಿದ್ದು, ಇಬ್ಬರಿಗೂ ಕೋರಮಂಗಲ ಠಾಣೆಗೆ ಕರೆಯಿಸಿ ಒಂದು ದಿನದ ಠಾಣಾಧಿಕಾರಿಗಳ ಗೌರವ ಸಮರ್ಪಿಸಲಾಯಿತು.
A humbling day as I stood in attention to DCPs for the day. Courageous children, who are fighting a difficult disease and we played a small part in making their wish come true, albeit for a few hours only. Happiness unlimited for them and satisfaction for us. pic.twitter.com/4oEFrDcPz9
— C K Baba. I.P.S (@DCPSEBCP) July 21, 2022







