Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಕೆನಡಾ: ಚರ್ಚ್ ಶಾಲೆಗಳ ಭಯಾನಕತೆಯ ಬಗ್ಗೆ...

ಕೆನಡಾ: ಚರ್ಚ್ ಶಾಲೆಗಳ ಭಯಾನಕತೆಯ ಬಗ್ಗೆ ಪೋಪ್ ಗೆ ಮಾಹಿತಿ

ವಾರ್ತಾಭಾರತಿವಾರ್ತಾಭಾರತಿ28 July 2022 10:10 PM IST
share

ಒಟ್ಟಾವ, ಜು.28: ಕೆನಡಾದಲ್ಲಿ ಸ್ಥಳೀಯರಿಗಾಗಿ ಚರ್ಚ್ ನಡೆಸುತ್ತಿದ್ದ ಶಾಲೆಗಳ ಭಯಾನಕತೆಯ ಬಗ್ಗೆ ಕೆನಡಾದ ಮುಖಂಡರು ಬುಧವಾರ ಪೋಪ್ ಫ್ರಾನ್ಸಿಸ್ರಿಗೆ ಮಾಹಿತಿ ನೀಡಿದರು. ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲಿಯೂ ಜನರು ಇನ್ನೂ ಬಡತನದಲ್ಲಿ ಬದುಕುತ್ತಿದ್ದಾರೆ ಎಂದು ಪೋಪ್ ವಿಷಾದ ವ್ಯಕ್ತಪಡಿಸಿದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಪೋಪ್ ಫ್ರಾನ್ಸಿಸ್ ಕೆನಡಾದಲ್ಲಿ ಕ್ಷಮಾಯಾಚನೆಯ ಪ್ರವಾಸದಲ್ಲಿದ್ದಾರೆ.

ಸ್ಥಳೀಯರ ಸಂಸ್ಕೃತಿಯನ್ನು ಅಳಿಸಿಹಾಕುವ ಸರಕಾರದ ಕಾರ್ಯನೀತಿಯನ್ನು ಮುಂದುವರಿಸಿದ್ದ ವಸತಿ ಶಾಲೆಗಳಲ್ಲಿ ಚರ್ಚ್ಗಳ ಪಾತ್ರಕ್ಕಾಗಿ ಕ್ಷಮೆ ಯಾಚಿಸುವುದು ಪೋಪ್ ಅವರ ಭೇಟಿಯ ಪ್ರಮುಖ ಉದ್ದೇಶವಾಗಿದೆ. 1870ರಿಂದ 1996ರ ನಡುವಿನ ಅವಧಿಯಲ್ಲಿ ಕೆನಡಾದಲ್ಲಿ ಚರ್ಚ್ಗಳು ನಡೆಸುತ್ತಿದ್ದ ವಸತಿ ಶಾಲೆಗಳಲ್ಲಿ 1,50,000ಕ್ಕೂ ಅಧಿಕ ಸ್ಥಳೀಯ ಮಕ್ಕಳನ್ನು ಅವರ ಕುಟುಂಬದಿಂದ ಪ್ರತ್ಯೇಕಿಸಿ ದಾಖಲಿಸಿಕೊಳ್ಳಲಾಗಿತ್ತು. ತಮ್ಮ ಆಡುಭಾಷೆಯಲ್ಲಿ ಮಾತನಾಡಿದರೆ ಅವರನ್ನು ಥಳಿಸಲಾಗುತ್ತಿತ್ತು ಅಥವಾ ಉಪವಾಸ ಕೆಡವಲಾಗುತ್ತಿತ್ತು ಹಾಗೂ ಮಕ್ಕಳ ವಿರುದ್ಧ ಲೈಂಗಿಕ ದೌರ್ಜನ್ಯವನ್ನೂ ನಡೆಸಲಾಗಿದೆ.

ಈ ವ್ಯವಸ್ಥೆಯನ್ನು ‘ಸಾಂಸ್ಕೃತಿಕ ನರಮೇಧ’ ಎಂದು ಕೆನಡಾದ ಸತ್ಯ ಮತ್ತು ಸಮನ್ವಯ ಆಯೋಗ ಕರೆದಿದೆ.

ಉತ್ತರ ಅಮೆರಿಕದಲ್ಲಿ ನಿರ್ಮಿಸಲಾದ ಬೃಹತ್ ಬ್ರಿಟಿಷ್ ಕೋಟೆ ‘ಸಿಟಡೆಲ್ ಡಿ ಕ್ವಿಬೆಕ್’ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಹಾಗೂ ಸರಕಾರಿ ಸಿಬಂದಿಗಳಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪೋಪ್, ಸಂಪತ್ತಿನ ಅಸಾಮಾನ್ಯ ಹಂಚಿಕೆಯ ಅಮೂಲಾಗ್ರ ಅನ್ಯಾಯದ ಬಗ್ಗೆ ಮಾತನಾಡಿದರು.

ಆರ್ಥಿಕ ಅಭಿವೃದ್ಧಿಯಿಂದ ಉತ್ಪತ್ತಿಯಾಗುವ ಯೋಗಕ್ಷೇಮವು ಸಮಾಜದ ಎಲ್ಲಾ ಕ್ಷೇತ್ರಗಳಿಗೆ ಪ್ರಯೋಜನವನ್ನು ನೀಡುವುದಿಲ್ಲ ಎಂಬುದು ಅತ್ಯಂತ ಅವಮಾನದ ವಿಷಯವಾಗಿದೆ. ಹಲವು ನಿರ್ಗತಿಕರು ಅಥವಾ ನೆರವಿನ ಅಗತ್ಯ ಇರುವವರು ಬದುಕಲು ಚರ್ಚ್ಗಳು ಹಾಗೂ ಆಹಾರದ ಬ್ಯಾಂಕ್ಗಳನ್ನು ಅವಲಂಬಿಸಬೇಕಾಗಿದೆ.

 ಸ್ಥಳೀಯರಲ್ಲಿ ಬಡತನದ ಹಲವು ಸೂಚ್ಯಾಂಕಗಳನ್ನು ನಿಖರವಾಗಿ ಕಾಣಬಹುದಾಗಿದ್ದು ಇದರ ಜತೆಗೆ ಕಡಿಮೆ ಶೇಕಡಾವಾರು ಶಾಲಾಶಿಕ್ಷಣ, ಮನೆ ಹೊಂದಲು, ಆರೋಗ್ಯ ಸೇವೆ ಪಡೆಯಲು ಕಡಿಮೆ ಅವಕಾಶದ ಸಹಿತ ಹಲವು ಋಣಾತ್ಮಕ ಸೂಚಕಗಳಿವೆ ಎಂದರು. ಕೆನಡಾದ ಜನಸಂಖ್ಯೆಯ ಸುಮಾರು 5%ದಷ್ಟಿರುವ ಸ್ಥಳೀಯ ನಿವಾಸಿಗಳಲ್ಲಿ ಬಹುತೇಕರು ಬಡವರಾಗಿದ್ದು ಇತರ ನಿವಾಸಿಗಳಿಗೆ ಹೋಲಿಸಿದರೆ ಇವರ ಜೀವಿತಾವಧಿಯೂ ಕಡಿಮೆಯಾಗಿದೆ.

ಹಿಂಸಾತ್ಮಕ ಅಪರಾಧ ಪ್ರಕರಣದ ಬಲಿಪಶುಗಳಾಗುತ್ತಿದ್ದು ಹಲವು ವ್ಯಸನಗಳ ದಾಸರಾಗಿ ಸೆರೆವಾಸ ಅನುಭವಿಸುವ ಪ್ರಮಾಣವೂ ಸ್ಥಳೀಯರಲ್ಲಿ ಹೆಚ್ಚಾಗಿದೆ. ಬಳಿಕ ಪೋಪ್ರ ಜತೆ ಮಾತನಾಡಿದ ಪ್ರಧಾನಿ ಜಸ್ಟಿನ್ ಟ್ರೂಡೊ ಮತ್ತು ಗವರ್ನರ್ ಮೇರಿ ಸಿಮೋನ್ (ಬ್ರಿಟನ್ ರಾಣಿ ಎಲಿಝಬೆತ್ರ ಪ್ರತಿನಿಧಿ), ಫ್ರಾನ್ಸಿಸ್ ಅವರು ಪೋಪ್ ಪಟ್ಟಕ್ಕೇರುವುದಕ್ಕೂ 2 ದಶಕಗಳ ಮೊದಲು ಮುಚ್ಚಲ್ಪಟ್ಟ ವಸತಿ ಶಾಲೆಗಳಲ್ಲಿ ತೆರೆದುಕೊಂಡ ಭಯಾನಕ ದುರಂತದ ಬಗ್ಗೆ ಕಟುವಾಗಿ ಮತ್ತು ಸ್ಪಷ್ಟವಾಗಿ ಹೇಳಿದರು ಎಂದು ವರದಿಯಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X