ಮಂಗಳೂರಿನಲ್ಲಿ ಫಾಝಿಲ್ ಹತ್ಯೆಯ ಸುದ್ದಿ ಭಯ ಹುಟ್ಟಿಸುವಂತಿದೆ: ಬಿ.ಕೆ ಹರಿಪ್ರಸಾದ್ ಆತಂಕ
ಬೆಂಗಳೂರು: ಮಂಗಳೂರು ನಗರದ ಹೊರ ವಲಯ ಸುರತ್ಕಲ್ ನಲ್ಲಿ ದುಷ್ಕರ್ಮಿಗಳ ತಂಡದಿಂದ ಫಾಝಿಲ್ ಎಂಬ ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ವಿಧಾನಸಭೆ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ಮಂಗಳೂರಿನಲ್ಲಿ ಫಾಝಿಲ್ ಹತ್ಯೆಯ ಸುದ್ದಿ ಭಯ ಹುಟ್ಟಿಸುವಂತಿದೆ' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
'ಇದು ಬಿಜೆಪಿ ಕೋಮುಗಲಭೆಗಳನ್ನು ಅಪಾಯಕಾರಿ ಮಟ್ಟಕ್ಕೆ ಎಬ್ಬಿಸುತ್ತಿರುವ ಪರಿಣಾಮ. ರಾಜ್ಯವು ಹಿಂದೂ-ಮುಸ್ಲಿಮರ ರೇಖೆಗಳಲ್ಲಿ ಹಿಂದೆಂದಿಗಿಂತಲೂ ಹೆಚ್ಚು ವಿಭಜನೆಯಾಗಿದೆ. ಬಿಜೆಪಿ ಧಾರ್ಮಿಕವಾಗಿ ವಿಭಜಿಸುವ ಕಾರ್ಯಸೂಚಿಯನ್ನು ನೋಡಿಕೊಳ್ಳುತ್ತಿದೆ ಮತ್ತು ಈ ಪರಿಸ್ಥಿತಿಗೆ ಬಿಜೆಪಿಯೇ ನೇರ ಹೊಣೆಯಾಗಿದೆ' ಎಂದು ಹೇಳಿದ್ದಾರೆ.
ಇದನ್ನೂ ಓದಿ... ಸುರತ್ಕಲ್; ದುಷ್ಕರ್ಮಿಗಳ ತಂಡದಿಂದ ದಾಳಿ: ಗಾಯಾಳು ಯುವಕ ಮೃತ್ಯು
News of murder of Faazil in Mangalore is petrifying.This is result of BJP stirring up communal tensions to dangerous levels
— Hariprasad.B.K. (@HariprasadBK2) July 28, 2022
State appears more divided than ever along Hindu-Muslim lines
BJP is overseeing a religiously divisive agenda & are responsible for current situation