ಹಾಸನ; ಹಾಡಹಗಲೇ ಮಹಿಳೆಯ ಹತ್ಯೆ: ಮನೆಯಲ್ಲಿದ್ದ ಚಿನ್ನಾಭರಣ ದರೋಡೆ
(ಮಂಜುಳಾ- ಹತ್ಯೆಗೀಡಾದ ಮಹಿಳೆ)
ಹಾಸನ, ಜು.29: ಹಾಡುಹಗಲೆ ಮನೆಗೆ ನುಗ್ಗಿ ಮಹಿಳೆಯನ್ನು ಹತ್ಯೆಗೈದು ಮನೆಯಲ್ಲಿದ್ದ ಒಡವೆ ಹಾಗೂ ಆಕೆಯ ಮೈಮೇಲೆ ಇದ್ದ ಚಿನ್ನಾಭರಣವನ್ನು ದೋಚಿ ಪರಾರಿಯಾಗಿರುವ ಘಟನೆ ಹಾಸನ ನಗರದ ಪೆನ್ ಷನ್ ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ನಡೆದಿದೆ.
ಹಾಸನ ನಗರದಲ್ಲಿ ಚಿನ್ನದ ಅಂಗಡಿ ನಡೆಸುತ್ತಿರುವ ಕುಮಾರ್ ಎಂಬುವವರ ಪತ್ನಿ ಮಂಜುಳಾ (42) ಎಂಬುವರೇ ಕೊಲೆಗೀಡಾದ ಮಹಿಳೆ ಎಂದು ತಿಳಿದು ಬಂದಿದೆ.
ಇಂದು (ಶುಕ್ರವಾರ) ಬೆಳಿಗ್ಗೆ ಎಂದಿನಂತೆ ಕುಮಾರ್ ಅಂಗಡಿಗೆ ಹೋಗಿದ್ದರು, ಮನೆಯಲ್ಲಿ ಒಂಟಿಯಾಗಿರುವುದನ್ನು ಗಮನಿಸಿರುವ ಆರೋಪಿಗಳು ಮನೆಗೆ ನುಗ್ಗಿ ಹಣ ದೋಚಿದ ಬಳಿಕ ಮಂಜುಳಾ ಅವರನ್ನು ಕತ್ತು ಹಿಸುಕಿ ಕೊಲೆಗೈದು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಚಿನ್ನದ ಅಂಗಡಿಯಿಂದ ಮಧ್ಯಾಹ್ನದ ಊಟಕ್ಕಾಗಿ ಮನೆಗೆ ಬಂದ ಕುಮಾರ್ಗೆ ಕೊಲೆ ನಡೆದಿರುವ ವಿಷಯ ತಿಳಿದು ಬಂದಿದ್ದು, ನಂತರ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ.
ವಿಷಯ ತಿಳಿದ ಹೆಚ್ಚುವರಿ ಪೊಲೀಸ್ ಅಧೀಕ್ಷರಾದ ತಮ್ಮಯ್ಯ, ಹಾಗೂ ಡಿವೈಎಸ್ಪಿ ಉದಯಭಾಸ್ಕರ್ ಜೊತೆಯಲ್ಲಿ ಪೊಲೀಸ್ ಶ್ವಾನಧಳ, ಬೆರಳ್ಚುಗಾರರು ಆಗಮಿಸಿ ಪರಿಶೀಲಿಸಿದರು.