Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ತೆರಿಗೆಗಳ್ಳತನ ಆರೋಪ: ತಪ್ಪೊಪ್ಪಿಕೊಳ್ಳದ...

ತೆರಿಗೆಗಳ್ಳತನ ಆರೋಪ: ತಪ್ಪೊಪ್ಪಿಕೊಳ್ಳದ ಪಾಪ್‌ ಗಾಯಕಿ ಶಕೀರಾಗೆ ಜೈಲು ಶಿಕ್ಷೆ ಕೋರಿ ಮನವಿಗೆ ಸ್ಪೇನ್ ಸರಕಾರ ನಿರ್ಧಾರ

ವಾರ್ತಾಭಾರತಿವಾರ್ತಾಭಾರತಿ29 July 2022 9:32 PM IST
share

ಕೀವ್,ಜು.29: ತೆರಿಗೆಗಳ್ಳತನದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತಪ್ಪೊಪ್ಪಿಕೊಳ್ಳುವ ಕುರಿತ ಒಡಂಬಡಿಕೆಯನ್ನು ನಿರಾಕರಿಸಿರುವ ವಿಶ್ವವಿಖ್ಯಾತ ಪಾಪ್ ತಾರೆ ಶಕೀರಾ ಅವರಿಗೆ ಜೈಲು ಶಿಕ್ಷೆ ನೀಡುವಂತೆ ಕೋರಿ ನ್ಯಾಯಾಲಯಕ್ಕೆ ಮನವಿ ಮಾಡುವುದಾಗಿ ಸ್ಪೇನ್ನ ಸರಕಾರಿ ಪರ ವಕೀಲರು ತಿಳಿಸಿದ್ದಾರೆ.

  ತೆರಿಗೆಗಳ್ಳತನಕ್ಕಾಗಿ 45 ವರ್ಷ ವಯಸ್ಸಿನ ಪಾಪ್ ತಾರೆ ಶಕೀರಾಗೆ 24.5 ದಶಲಕ್ಷ ಡಾಲರ್ಗಳ ದಂಡವನ್ನು ವಿಧಿಸುವಂತೆಯೂ ಸ್ಪೇನ್ ಸರಕಾರದ ಪ್ರಾಸಿಕ್ಯೂಟರ್ಗಳು ನ್ಯಾಯಾಲಯದಲ್ಲಿ ದಾವೆ ಹೂಡಲಿದ್ದಾರೆ. 2012 ಹಾಗೂ 2014ರ ನಡುವೆ ತಾನು ಸಂಪಾದಿಸಿರುವ 14.5 ದಶಲಕ್ಷ ಯುರೋ ಮೊತ್ತದ ತೆರಿಗೆಯನ್ನು ಶಕೀರಾ ಅವರು ವಂಚಿಸಿದ್ದಾರೆಂದು ಪ್ರಾಸಿಕ್ಯೂಟರ್ಗಳು ಆರೋಪಿಸಿದ್ದಾರೆ.

 ಆದರೆ ತಪ್ಪೊಪ್ಪಿಕೊಳ್ಳುವಂತೆ ಪ್ರಾಸಿಕ್ಯೂಟರ್ಗಳು ನೀಡಿರುವ ಕೊಡುಗೆಯನ್ನು ಶಕೀರಾ ಅವರು ನಿರಾಕರಿಸಿದ್ದು, ತನ್ನ ವಕೀಲರುಗಳಿಗೆ ತನ್ನ ನಿರಪರಾಧಿತ್ವದ ಬಗ್ಗೆ ಸಂಪೂರ್ಣವಾಗಿ ಖಚಿತ ನಂಬಿಕೆಯಿದೆ. ಆದುದರಿಂದ ನ್ಯಾಯಾಲಯದ ಮೆಟ್ಟಲೇರಲು ನಿರ್ಧರಿಸಿರುವುದಾಗಿ ಶಕೀರಾ ಹೇಳಿದ್ದಾರೆ.

 ಆದಾಗ್ಯೂ ವಿಚಾರಣೆಯ ಆರಂಭವಾಗುವವರೆಗೆ ಈ ನಿಟ್ಟಿನಲ್ಲಿ ಒಪ್ಪಂದವೇರ್ಪಡುವ ಸಾಧ್ಯತೆಯನ್ನು ಅಲ್ಲಳೆಯಲು ಸಾಧ್ಯವಿಲ್ಲವೆಂದು ಶಕೀರಾ ಅವರ ನ್ಯಾಯವಾದಿಗಳು ತಿಳಿಸಿದ್ದಾರೆ.

    ತನ್ನ ಗೆಳೆಯ, ಬಾರ್ಸಿಲೋನಾದ ಫುಟ್ಬಾಲ್ ತಾರೆ ಜೆರಾರ್ಡ್ ಪಿಕ್ಯೂ ಜೊತೆಗಿನ ಸಂಬಂಧ ಮುರಿದುಬಿದ್ದ ಬಳಿಕ ಶಕೀರಾ 2011ರಲ್ಲಿ ಸ್ಪೇನ್ನಿಂದ ನಿರ್ಗಮಿಸಿದ್ದರು. ಆದರೆ ತನ್ನ ತೆರಿಗೆ ವಾಸ್ತವ್ಯವನ್ನು ಆಕೆ 2015ರವರೆಗೂ ಉಳಿಸಿಕೊಂಡಿದ್ದರು. ಶಕೀರಾ ಹಾಗೂ ಜೆರಾರ್ಡ್ಗೆ ಎರಡು ಮಕ್ಕಳಿದ್ದು, ಈ ವರ್ಷದ ಜೂನ್ನಲ್ಲಿ ಅವರು ಪ್ರತ್ಯೇಕಗೊಂಡಿದ್ದರು.

ತನ್ನ ವಿರುದ್ಧ ತೆರಿಗೆಗಳ್ಳತನದ ಆರೋಪ ಹೊರಿಸಿರುವುದನ್ನು ಶಕೀರಾ ಬಲವಾಗಿ ಖಂಡಿಸಿದ್ದು, ತನ್ನ ಹಕ್ಕುಗಳ ಉಲ್ಲಂಘನೆಯಾಗಿದೆಯೆಂದು ಅವರು ಆಪಾದಿಸಿದ್ದಾರೆ.

    ತನ್ನ ಅಂತಾರಾಷ್ಟ್ರೀಯ ಸಂಗೀತಗೋಷ್ಠಿ ಪ್ರವಾಸಗಳು ಹಾಗೂ ‘ದಿ ವಾಯ್ಸಿ’ ಎಂಬ ರಿಯಾಲಿಟಿ ಶೋದಲ್ಲಿ ತಾನು ತೀರ್ಪುಗಾರಳಾಗಿ ಸಂಪಾದಿಸಿದ ಹಣದಿಂದ ಮೇಲೆ ಸ್ಪೇನ್ನ ಪ್ರಾಸಿಕ್ಯೂಟರ್ಗಳು ಆಗ್ರಹಿಸುತ್ತಿದ್ದಾರೆಂದು ಶಕೀರಾ ಆಪಾದಿಸಿದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X