Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ನಾಝಿ ಸರ್ವಾಧಿಕಾರಿ ಹಿಟ್ಲರ್ ನ ವಾಚ್ 1.1...

ನಾಝಿ ಸರ್ವಾಧಿಕಾರಿ ಹಿಟ್ಲರ್ ನ ವಾಚ್ 1.1 ಮಿಲಿಯ ಡಾಲರ್ ಗೆ ಹರಾಜು

ವಾರ್ತಾಭಾರತಿವಾರ್ತಾಭಾರತಿ30 July 2022 9:33 PM IST
share

    ವಾಶಿಂಗ್ಟನ್,ಜು.30: ಅಮೆರಿಕದಲ್ಲಿ ನಡೆದ ಹರಾಜೊಂದಲ್ಲಿ ನಾಝಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ಗೆ ಸೇರಿದ್ದೆನ್ನಲಾದ ವಾಚೊಂದು ಬರೋಬ್ಬರಿ 1.1 ದಶಲಕ್ಷ ಡಾಲರ್ (ಅಂದಾಜು 8.71 ಕೋಟಿ ರೂ.)ಗೆ ಮಾರಾಟವಾಗಿದೆ. ಸಾವಿರಾರು ಯಹೂದಿಗಳ ನರಮೇಧಕ್ಕೆ ಕಾರಣನಾದ ಹಿಟ್ಲರ್ ಗೆ ಸೇರಿದ ವಸ್ತುಗಳನ್ನು ಹರಾಜಿಗಿಡುವ ಬಗ್ಗೆ ಯಹೂದಿ ಸಮುದಾಯ ತೀವ್ರ ವಿರೋದ ವ್ಯಕ್ತಪಡಿಸಿದ್ದ ಹೊರತಾಗಿಯೂ, ನಾಝಿ ನಾಯಕನ ವಾಚು ದಾಖಲೆ ಬೆಲೆಗೆ ಮಾರಾಟವಾಗಿದೆ.

   

ಈ ವಾಚನ್ನು ಜರ್ಮನಿಯ ವಾಚ್ ತಯಾರಿಕಾ ಸಂಸ್ತೆ ಹುಬೆರ್ ನಿರ್ಮಿಸಿತ್ತು, ಅದರಲ್ಲಿ ನಾಝಿ ಲಾಂಛನವಾದ ಸ್ವಸ್ತಿಕಾ ಹಾಗೂ ಹಿಟ್ಲರ್ನ ಎ.ಎಚ್. ಎಂಬ ಇನಿಶಿಯಲ್ಗಳನ್ನು ಕೆತ್ತಲಾಗಿದೆ. ಮೇರಿಲ್ಯಾಂಡ್ನ ಅಲೆಕ್ಸಾಂಡರ್ ಐತಿಹಾಸಿಕ ವಸ್ತುಗಳ ಹರಾಜು ಕೇಂದ್ರದಲ್ಲಿ ನಡೆದ ಏಲಂನಲ್ಲಿ ಅನಾಮಿಕರೊಬ್ಬರು ಈ ಮೊತ್ತವನ್ನು ಖರೀದಿಸಿದ್ದಾರೆಂದು ಬಿಬಿಸಿ ಸುದ್ದಿಸಂಸ್ಥೆ ವರದಿಮಾಡಿದೆ.

ಮೇರಿಲ್ಯಾಂಡ್ನ ಅಲೆಕ್ಸಾಂಡರ್ ಹರಾಜು ಮಳಿಗೆಯು, ಐತಿಹಾಸಿಕ ವ್ಯಕ್ತಿಗಳ ಅಟೋಗ್ರಾಫ್ಗಳು, ದಾಖಲೆಪತ್ರಗಳು , ಛಾಯಾಚಿತ್ರಗಲು, ಸೇನಾ ಸಂಘರ್ಷದ ದಾಖಲೆಗಳು ಹಾಗೂ ಮಹತ್ವದ ಪ್ರಾಕ್ತನ ಅವಶೇಷಗಳು ಇತಾದಿಗಳನ್ನು ಹರಾಜಿಗಿಡುತ್ತದೆ.

   

ಈ ವಾಚನ್ನು ಅಡಾಲ್ಫ್ ಹಿಟ್ಲರ್ಗೆ ಆತನ 44ನೇ ಜನ್ಮದಿನವಾದ 1933ರ ಎಪ್ರಿಲ್ 20ರಂದು, ಆತ ಜರ್ಮನಿಯ ಚಾನ್ಸಲರ್ (ಅಧ್ಯಕ್ಷ )ಆದಾಗ ನೀಡಿರುವ ಸಾಧ್ಯತೆ ಅಧಿಕವಾಗಿದೆಯೆಂದು, ಹರಾಜು ವಸ್ತುವಿನ ಪರಿಚಯ ಪತ್ರ ( ಕ್ಯಾಟಲಾಗ್)ನಲ್ಲಿ ಮಾಹಿತಿ ನೀಡಲಾಗಿದೆ.

1945ರ ಮೇ 4ರಂದು ಹಿಟ್ಲರ್ನ ಪರ್ವತ ವಿಶ್ರಾಂತಿಧಾಮವಾದ ಬರ್ಗಾಫ್ಗೆ 30 ಫ್ರೆಂಚ್ ಸೈನಿಕರ ತಂಡವೊಂದು ದಾಳಿ ನಡೆಸಿದ ಈ ವಾಚನ್ನು ಯುದ್ಧ ಸ್ಮರಣಿಕೆಯಾಗಿ ಕೊಂಡೊಯ್ದರೆಂದು ಕ್ಯಾಟಲಾಗ್ನಲ್ಲಿ ವಿವರಿಸಲಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X