Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮರವಾಗಿ ಬಗ್ಗದು

ಮರವಾಗಿ ಬಗ್ಗದು

ಯೋಗೇಶ್ ಮಾಸ್ಟರ್ಯೋಗೇಶ್ ಮಾಸ್ಟರ್31 July 2022 10:53 AM IST
share
ಮರವಾಗಿ ಬಗ್ಗದು

ಮನೆಯ ಕಾಂಪೌಂಡಿಗೆ ತೀರಾ ಸನಿಹವಾಗಿ ಬೆಳೆಯುತ್ತಿರುವ ಒಂದು ಅರಳೀಮರವನ್ನು ನೋಡಿದರು ಮನೆಯ ಯಜಮಾನ. ಅದನ್ನು ಅವರೇನೂ ಹಾಕಿದ್ದಲ್ಲ. ಹಕ್ಕಿಯ ಹಿಕ್ಕೆಯಲ್ಲಿ ಬಿದ್ದು ಹುಟ್ಟನ್ನು ಪಡೆದುಕೊಂಡಿರುವಂತಹ ಸಸಿ. ಮಗನೆಂದ, ‘‘ಅದು ತುಂಬಾ ಪುಟ್ಟದು. ಕಾಂಪೌಂಡಿಗೆ ಒಂದು ಸೌಂದರ್ಯ ಕೂಡಾ ಸಿಗುತ್ತದೆ.

‘‘ಅದು ಈಗ ಸಣ್ಣದು. ಅದು ಬೆಳೆಯುತ್ತದೆ. ಆ ಬೆಳವಣಿಗೆಯಲ್ಲಿ ನಮಗೆ ಹರಡಿಕೊಳ್ಳುತ್ತಿರುವ ಬೇರುಗಳು ಕಾಣುವುದೇ ಇಲ್ಲ. ಒಳಗೊಳಗೇ ಬಲಶಾಲಿಯಾಗುವುದು ಮಾತ್ರವಲ್ಲದೇ ಗಟ್ಟಿಯಾಗಿ, ಅಗಲವಾಗಿ ಕಾಂಡ, ರೆಂಬೆ, ಕೊಂಬೆಗಳು ಹರಡಿಕೊಳ್ಳುತ್ತಾ ನಿನ್ನ ಮನೆಯ ಕಾಂಪೌಂಡನ್ನೇ ಬೀಳಿಸುತ್ತದೆ. ಅದರ ಕೆಳಗೆ ಬೇರೆ ಗಿಡ ಮರಗಳು ಬೆಳೆಯಲು ಸಾಧ್ಯವಾಗದು. ಈಗ ಹೇಗೋ ಬೀಜ ಬಿದ್ದು ಬೆಳೆದಿರುವಂತೆ ಅದು ಮನೆಯ ಮೇಲೂ, ಮನೆಯ ಗೋಡೆಗಳ ಬದಿಗೂ ಬಿದ್ದು, ಅಲ್ಲೂ ಹೊಸ ಹೊಸ ಸಸಿಗಳು ಮೊಳೆತು ಬೆಳೆಯುತ್ತವೆ. ಹಾಗಾಗಿ, ಸಸಿಯಾಗಿರುವಾಗಲೇ ಕಿತ್ತು ಬಿಸಾಡಬೇಕು. ಅಥವಾ ಬೇರೆ ಕಡೆ ಸ್ಥಳಾಂತರ ಮಾಡಬೇಕು. ಮರವಾದ ಮೇಲೆ ಬಗ್ಗದು.’’

ತಂದೆ ಸರಿಯಾಗಿಯೇ ಹೇಳಿದ್ದಾರೆ. ಸಸಿಯಿರುವಾಗಲೇ ಬಗ್ಗದ್ದು, ಮರವಾದ ಮೇಲೆ ಬಗ್ಗದು. ಇದೇ ವಿಷಯವನ್ನು ವ್ಯಕ್ತಿಯ ಮನಸ್ಸಿನ ಬಗ್ಗೆ ಅನ್ವಯಿಸಿ ನೋಡಲೇಬೇಕಿದೆ. ವ್ಯಕ್ತಿಯು ಸಣ್ಣವನಿರುವಾಗ ಅವನ ಆಲೋಚನೆಗಳು, ವರ್ತನೆಗಳು, ಧೋರಣೆಗಳು ಮತ್ತು ನಡವಳಿಕೆಗಳು ಅಷ್ಟೇನೂ ಪ್ರಮಾದಕರವಾಗಿ ಕಾಣುವುದಿಲ್ಲ. ‘‘ಈಗ ಗೊತ್ತಾಗೋದಿಲ್ಲ. ಮಗೂ ಅಲ್ವಾ. ಮುಗ್ದತೆ ಇರತ್ತೆ. ದೊಡ್ಡವನಾಗುತ್ತಾ ತಿಳುವಳಿಕೆ ಬರುತ್ತೆ. ಸರಿ ಹೋಗುತ್ತಾನೆ’’ ಹೀಗೆ ಸಾಮಾನ್ಯವಾಗಿ ಪೋಷಕರು ಉದಾಸೀನ ಮಾಡುವುದು. ಕಹಿ ಕಾಯಿ ಬಿಡುತ್ತಿರುವ ಪುಟ್ಟ ಗಿಡ ಬೆಳೆಬೆಳೆದಂತೆ ಸಿಹಿಯಾದ ಹಣ್ಣುಗಳನ್ನು ಬಿಡುವುದು ಎಂದು ಭ್ರಮಿಸಿದಂತೆ. ಅದು ಎಂದಿಗೂ ಆಗದು. ಈಗ ಹತ್ತು ಕಾಯಿಗಳನ್ನು ಬಿಡುವ ಸಸಿ, ಮರವಾದ ಮೇಲೆ ನೂರು, ಸಾವಿರ ಕಾಯಿಗಳನ್ನು ಬಿಡುವುದು. ಯಾವುದ್ಯಾವುದೋ ಅವಘಡಗಳು, ಅಪರಾಧಗಳು, ವಿದ್ರೋಹದ ಸಂಗತಿಗಳು, ಭಯಾನಕ ಪ್ರಸಂಗಗಳು ನಡೆದಾಗ, ಈ ಜಿಲ್ಲೆಗೆ ಏನಾಗಿದೆ? ಈ ಜನಕ್ಕೆ ಏನಾಗಿದೆ? ಈ ಜನ ಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ? ಇಲ್ಲಿನ ಕಾನೂನು ಮತ್ತು ಪೋಲಿಸ್ ವ್ಯವಸ್ಥೆ ಏನು ಮಾಡ್ತಿದೆ? ಎಂದೆಲ್ಲಾ ಪ್ರಶ್ನಿಸುವ ಮಂದಿ ಆಲೋಚಿಸಲೇ ಬೇಕಾದ ಬಹು ಮುಖ್ಯವಾದ ಅಂಶವಿದೆ. ಅಪರಾಧಗಳ, ಅವಘಡಗಳ, ವಿಧ್ವಂಸಕ ಕೃತ್ಯಗಳ ಮಾಡಿದವರ ಬಾಲ್ಯ ಹೇಗಿತ್ತು? ಅವರಿಗೆ ಎಂತಹ ಶಿಕ್ಷಣ ಸಿಕ್ಕಿದೆ? ಅವರ ಆರ್ಥಿಕ ಪರಿಸ್ಥಿತಿ ಯಾವ ಮಟ್ಟದಲ್ಲಿ ಇತ್ತು? ಅವರ ಕುಟುಂಬದವರು ಮತ್ತು ಇತರರು ಆ ಮಗುವಿನ ಮಾನಸಿಕ ಬೆಳವಣಿಗೆಯಲ್ಲಿ, ಭಾವನೆಗಳನ್ನು ರೂಪಿಸುವಲ್ಲಿ ಎಂತಹ ಪಾತ್ರವಹಿಸಿದ್ದರು. ಅವರದ್ದೇ ದೋಷಪೂರ್ಣವಾಗಿತ್ತೇ? ದೋಷಪೂರ್ಣ ಪರಿಸರವನ್ನೇ ರೂಪಿಸಿಕೊಂಡು ವಿಷಮಯವಾದ ಮನಸ್ಥಿತಿಗಳು ರೂಪುಗೊಂಡವೇ? ಬೇರಿನ ಸಾಮರ್ಥ್ಯ ಮತ್ತು ಗುಣಮಟ್ಟವೇ ಚಿಗುರುಗಳ ಗುಣಮಟ್ಟವನ್ನು ನಿರ್ಧರಿಸುವುದು. ಅದರಲ್ಲಿ ಅನುಮಾನವೇ ಇಲ್ಲ. ಅದು ಅತ್ಯಂತ ನೈಸರ್ಗಿಕ, ಸ್ವಾಭಾವಿಕ, ವೈಜ್ಞಾನಿಕ ಮತ್ತು ವೈಚಾರಿಕ. ಹಾಗಿರುವಾಗ ನಮ್ಮ ಪ್ರತಿಯೊಂದು ನಡೆ, ನುಡಿ, ಯೋಚನೆ, ಯೋಜನೆ; ಇವುಗಳೆಲ್ಲವೂ ಶಿಶುಪ್ರಧಾನವಾದರೆ ಮಾತ್ರವೇ ಒಂದಷ್ಟು ವರ್ಷಗಳ ನಂತರ ವ್ಯಕ್ತಿಗತ, ಕೌಟುಂಬಿಕ ಮತ್ತು ಸಾಮಾಜಿಕ ಅನಾಹುತಗಳೂ ಗಮನೀಯ ಪ್ರಮಾಣದಲ್ಲಿ ಇಳಿಯಬಹುದು. ಇಲ್ಲವಾದರೆ ಬರೀ ತೌಡು ಕುಟ್ಟುವ ಕೆಲಸವಾಗುತ್ತದೆ ಅಷ್ಟೇ!

share
ಯೋಗೇಶ್ ಮಾಸ್ಟರ್
ಯೋಗೇಶ್ ಮಾಸ್ಟರ್
Next Story
X