ಮಡಿಕೇರಿ | ಕೊಯನಾಡು ಸೇತುವೆ ಬಳಿ ರಸ್ತೆ ಕುಸಿತ: ಆತಂಕದ ನಡುವೆ ವಾಹನ ಸಂಚಾರ
ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ

ಮಡಿಕೇರಿ, ಆ.3: ನಿರಂತರ ಮಳೆಯಿಂದ ದೇವರಕೊಲ್ಲಿ ಕೊಯನಾಡು ರಸ್ತೆಯಲ್ಲಿ ಭಾರೀ ಬಿರುಕುಗಳು ಕಾಣಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಸದ್ಯಕ್ಕೆ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಆತಂಕದ ನಡುವೆ ವಾಹಗಳು ಸಂಚರಿಸುತ್ತಿವೆ.
ಸ್ಥಳಕ್ಕೆ ತಹಶೀಲ್ದಾರ್ ಮಹೇಶ್, ಕಂದಾಯ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Next Story







