Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಇರುವ ಒಂದು ರೈಲನ್ನೂ ವಿಸ್ತರಿಸುವುದು...

ಇರುವ ಒಂದು ರೈಲನ್ನೂ ವಿಸ್ತರಿಸುವುದು ಸರಿಯೇ?

ರೈಲು ಬವಣೆ

ಒಲಿವರ್ ಡಿ’ಸೋಜಾ,ಒಲಿವರ್ ಡಿ’ಸೋಜಾ,4 Aug 2022 10:59 AM IST
share
ಇರುವ ಒಂದು ರೈಲನ್ನೂ ವಿಸ್ತರಿಸುವುದು ಸರಿಯೇ?

ಕಾರ್ಯಕಾರಿ ಕಾರ್ಯದರ್ಶಿ, ರೈಲ್ವೇ ಯಾತ್ರಿ ಸಂಘ ಮುಂಬೈ ಪ್ರಸ್ತುತ ಮಂಗಳೂರು ಬೆಂಗಳೂರು ಮಧ್ಯೆ ಸಂಚರಿಸುವ ಒಂದೇ ಒಂದು ರೈಲಿದ್ದು, ಆ ರೈಲು ಬೆಂಗಳೂರು-ಮೈಸೂರು-ಮಂಗಳೂರು ಎಕ್ಸ್ ಪ್ರೆಸ್ (ಸಂಖ್ಯೆ 16585/16586)ನ್ನು ಕಾರವಾರ/ಕಣ್ಣೂರಿಗೆ ವಿಸ್ತರಿಸಲು ಮೈಸೂರು ಸಂಸದರು ರೈಲು ಮಂತ್ರಿಯನ್ನು ಜುಲೈ 26ರಂದು ಭೇಟಿಯಾಗಿ ಸೂಚಿಸಿದ್ದಾರೆ. ದಕ್ಷಿಣ ಕನ್ನಡದ ಸಮಸ್ತ ಜನರಿಗೆ ಈ ಸೂಚನೆ ಖಂಡಿತ ವಾಗಿಯೂ ಸಮಾಧಾನ ತರುವಂತಹದ್ದಲ್ಲ. ಈ ಸೂಚನೆಯು ಮಂಗಳೂರು ಸುತ್ತಮುತ್ತಲಿನ ರೈಲು ಪ್ರಯಾಣಿಕರ ಹಿತಾಸಕ್ತಿಗೆ ವಿರುದ್ಧವಾಗಿದೆ.

ರೈಲು ಸಂಖ್ಯೆ 16511ಮೊತ್ತಮೊದಲು ಪರಿಚಯಿಸಿದಾಗ ಅದು ಬೆಂಗಳೂರು-ಮಂಗಳೂರು ಮಧ್ಯೆ ಮಾತ್ರ ಸಂಚರಿಸುತ್ತಿತ್ತು. ಆಗ ಅದು ಸದಾ ಪ್ರಯಾಣಿಕರಿಂದ ಭರ್ತಿಯಾಗುತ್ತಿತ್ತು ತೀವ್ರ ವಿರೋಧದ ನಡುವೆಯೂ ಈ ರೈಲನ್ನು ಕಣ್ಣೂರಿಗೆ ವಿಸ್ತರಿಸಲಾಯಿತು. ಹಾಗೆಯೇ ಇನ್ನೊಂದು ರೈಲು (ಸಂಖ್ಯೆ 16515/16516) ಯಶವಂತಪುರದಿಂದ ಮಂಗಳೂರು ಸೆಂಟ್ರಲ್ ನಡುವೆ ಓಡುತ್ತಿತ್ತು. ಆನಂತರ ರೈಲು ಪ್ರಯಾಣಿಕರ ಹೆಚ್ಚಿನ ವಿರೋಧದ ನಡುವೆಯೂ ಈ ರೈಲನ್ನು ವೇಳಾ ಪಟ್ಟಿ ಪರಿಷ್ಕರಿಸಿ ಮಂಗಳೂರು ಸೆಂಟ್ರಲ್‌ನಿಂದ ಕಾರವಾರಕ್ಕೆ ವಿಸ್ತರಿಸಲಾಯಿತು. ಅನನುಕೂಲ ವೇಳಾಪಟ್ಟಿ ಹಾಗೂ ಕಾರವಾರ ವಿಸ್ತರಣೆಯಿಂದಾಗಿ ದಕ್ಷಿಣ ಕನ್ನಡದ ಪ್ರಯಾಣಿಕರಿಗೆ ತುಂಬಾ ಕಷ್ಟವಾಯಿತು. ಈಗಾಗಲೇ ಈ ಮೇಲಿನ ರೈಲುಗಳು ವಿಸ್ತರಣೆಯಿಂದಾಗಿ ಬವಣೆ ಪಡುತ್ತಿರುವ ಪ್ರಯಾಣಿಕರಿಗೆ ಗಾಯದ ಮೇಲೆ ಬರೆ ಎಳೆದಂತೆ ರೈಲು ಸಂಖ್ಯೆ 16511 ಒಂದನ್ನು ಕ್ಯಾಲಿಕಟ್‌ಗೆ ವಿಸ್ತರಿಸಲು ನಿರ್ಧರಿಸಲಾಯಿತು. ಇದರಿಂದಾಗಿ ಮಂಗಳೂರು ಪ್ರದೇಶದ ಸಾರ್ವಜನಿಕರಿಗೆ ಆಸನ/ಬರ್ತ್ ಸೌಲಭ್ಯ ಕಡಿಮೆಯಾಗಿದೆ.

ಮಾಹಿತಿ ಹಕ್ಕಿನ ಮೂಲಕ ಸಿಕ್ಕಿದ ವಿವರಣೆಯಂತೆ 16511 ರೈಲಿನಲ್ಲಿ ಪ್ರತೀ ದಿನ 450ಕ್ಕೂ ಹೆಚ್ಚು ಪ್ರಯಾಣಿಕರು ಬೆಂಗಳೂರಿನಿಂದ ಮಂಗಳೂರಿಗೆ ಹಾಗೂ ಕೇವಲ 45 ಜನರು ಬೆಂಗಳೂರಿನಿಂದ ನೇರವಾಗಿ ಕಣ್ಣೂರಿಗೆ ಪ್ರಯಾಣಿಸಿದ್ದಾರೆಂದು ತಿಳಿದುಬಂತು. (ಇದು ಕಳೆದ ಆರ್ಥಿಕ ವರ್ಷದಲ್ಲಿನ ಸರಾಸರಿ ಪ್ರಯಾಣಿಕರು)

ಸಂಖ್ಯೆ 16585/16586 ರೈಲನ್ನು ಮಂಗಳೂರು ಸೆಂಟ್ರಲ್‌ಗೆ ತಲುಪಿಸದೆ ಮಂಗಳೂರು ಜಂಕ್ಷನ್ ಮುಖಾಂತರವೇ ಕಾರವಾರ-ಕಣ್ಣೂರಿಗೆ ವಿಸ್ತರಿಸಲು ಸೂಚಿಸಿದ್ದು ಬಲುದೊಡ್ಡ ತಪ್ಪು. ಇದರಿಂದಾಗಿ ಸುಬ್ರಹ್ಮಣ್ಯ-ಮಂಗಳೂರು ಸೆಂಟ್ರಲ್ ನಡುವೆ ಪ್ರಯಾಣಿಕರು ಜಂಕ್ಷನ್‌ನಲ್ಲಿ ಇಳಿದು ನೂರಾರು ರೂ. ರಿಕ್ಷಾಕ್ಕೆ ನೀಡಿ ಮಂಗಳೂರು ತಲುಪಬೇಕಾಗುತ್ತದೆ.

ಈಗಾಗಲೇ ಮಂಗಳೂರು-ಬೆಂಗಳೂರು ಮಧ್ಯೆ ಮಾತ್ರ ಓಡಾಡುತ್ತಿದ್ದ ಎರಡು ರೈಲುಗಳನ್ನು ಒಂದು ಕಾರವಾರಕ್ಕೆ ಹಾಗೂ ಒಂದು ಕಣ್ಣೂರಿಗೆ ವಿಸ್ತರಿಸಿ ಆಗಿದೆ. ಆದುದರಿಂದ ಬೆಂಗಳೂರು- ಮಂಗಳೂರು ಮಧ್ಯೆ ರೈಲು ಸೇವೆಗೆ ಬೇಡಿಕೆ ಹೆಚ್ಚಾಗಿದೆ. ಇತ್ತೀಚೆಗೆ ಘಟ್ಟ ಪ್ರದೇಶದಲ್ಲಿ ರಸ್ತೆ ಕುಸಿದು ಹಾಳಾಗಿ ಬಸ್ಸುಗಳ ಓಡಾಟ ಸಂಪೂರ್ಣವಾಗಿ ನಿಂತಿದೆ ಅಥವಾ ಸುತ್ತಿ ಬಳಸಿ ಪ್ರಯಾಣಿಸಬೇಕಾಗುತ್ತದೆ. ಆದುದರಿಂದ ಮಂಗಳೂರು- ಬೆಂಗಳೂರು ನಡುವೆ ಪ್ರತಿದಿನ ಇನ್ನೂ ಮೂರು ರೈಲುಗಳು ಓಡಾಟ ನಡೆಸಿದರೂ ಅವೆಲ್ಲ ಪ್ರಯಾಣಿಕರಿಂದ ಭರ್ತಿಯಾಗಲಿವೆ. ಹೀಗಿರುವಾಗ ಇದ್ದ ಒಂದೇ ಒಂದು ರೈಲನ್ನು ವಿಸ್ತರಿಸಿ ಮಂಗಳೂರಿಗರಿಗೆ ಕಷ್ಟ ಕೊಡುವುದು ತಪ್ಪಲ್ಲವೇ?

 ದಕ್ಷಿಣ ಕನ್ನಡದ ಜನರಿಗೆ ಇಂತಹ ಅನ್ಯಾಯವಾಗುತ್ತಿರುವಾಗ ನಮ್ಮ ಸಂಸದ, ಶಾಸಕರು ಕೂಡಲೇ ಎಚ್ಚೆತ್ತು ವಿಸ್ತರಣೆಯನ್ನು ನಿಲ್ಲಿಸಬೇಕು. ಮಂಗಳೂರಿನಲ್ಲಿ ಪೆಟ್ರೋ ಕೆಮಿಕಲ್ ರಿಫೈನರಿ, ಎಲ್ಲ ಋತುಗಳ ಪ್ರಮುಖ ಬಂದರು, ಹತ್ತಾರು ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳು ಇರುವುದರಿಂದ ಪ್ರತಿದಿನ ಸುಮಾರು 6000 ಜನರು ಬೆಂಗಳೂರು-ಮಂಗಳೂರು ಮಧ್ಯೆ ಪ್ರಯಾಣಿಸುತ್ತಾರೆ. ಆದರೆ ಇದೀಗ ಕೇವಲ ಒಂದು ರೈಲು ಮಾತ್ರ ಬೆಂಗಳೂರು ಮಂಗಳೂರು ಮಧ್ಯೆ ಓಡಾಡುತ್ತಿದ್ದು, ಅದನ್ನೂ ವಿಸ್ತರಿಸಿದರೆ ಮಂಗಳೂರು ಪ್ರಯಾಣಿಕರ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದರ ವಿಸ್ತರಣೆ ಖಂಡಿತ ನ್ಯಾಯಸಮ್ಮತವಲ್ಲ.

ಈ ಬಗ್ಗೆ ರೈಲು ಸಂಘಗಳು ಹಾಗೂ ಇತರ ಸಂಘ ಸಂಸ್ಥೆಗಳು ರೈಲು ಮಂತ್ರಿಗೆ ಕಾಗದ ಬರೆದಿದ್ದು ನಮ್ಮ ವಿನಂತಿಯನ್ನು ಸಕಾರಾತ್ಮಕವಾಗಿ ಪರಿಗಣಿಸಬೇಕಾಗಿದೆ.

share
ಒಲಿವರ್ ಡಿ’ಸೋಜಾ,
ಒಲಿವರ್ ಡಿ’ಸೋಜಾ,
Next Story
X