ಕಲ್ಯಾಣಪುರ: ವಿಜ್ಞಾನ ವಿದ್ಯಾರ್ಥಿಗಳ ‘ವಿಜ್ಞಾನ ಸಂಗಮ’
ಉಡುಪಿ, ಆ.5: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ವಿಜ್ಞಾನ ಸಂಘದ ವತಿಯಿಂದ ಪದವಿ ಪೂರ್ವ, ಪದವಿ ಹಾಗೂ ಸ್ನಾನಕೋತ್ತರ ವಿಭಾಗಗಳ ವಿದ್ಯಾರ್ಥಿಗಳಿಗೆ ವಂ.ಸ್ವಾಮಿ ಗ್ರೆಗರಿ ಎಲ್.ಡಿಕ್ರೂಜ್ ಸ್ಮಾರಕ ವಿಚಾರ ಸಂಕೀರಣ ಮತ್ತು ವಿದ್ಯಾರ್ಥಿಗಳ ಸಮಾಗಮ ವಿಜ್ಞಾನ ಸಂಗಮ ಆ.3ರಂದು ನಡೆಯಿತು.
ಅತಿಥೇಯ ಕಾಲೇಜು ಮತ್ತು 13 ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆ ಹಾಗೂ ಕಾರ್ಯಕ್ರಮ ಗಳಲ್ಲಿ ಭಾಗವಹಿಸಿದರು. ಸ್ಪರ್ಧೆಯ ಹಿರಿಯರ ವಿಭಾಗದಲ್ಲಿ ಮಹಾತ್ಮ ಗಾಂಧೀ ಕಾಲೇಜು ಉಡುಪಿ- ಪ್ರಥಮ ಹಾಗೂ ಡಾ.ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜು( ಸ್ನಾನಕೋತ್ತರ ವಿಭಾಗ) ದ್ವಿತೀಯ ಸ್ಥಾನ ಪಡೆಯಿತು.
ಕಿರಿಯರ ವಿಭಾಗದಲ್ಲಿ ಪೂರ್ಣಪ್ರಜ್ಞಾ ಪದವಿ ಪೂರ್ವ ಕಾಲೇಜು, ಉಡುಪಿ ಪ್ರಥಮ, ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜು ಕಲ್ಯಾಣಪುರ ದ್ವಿತೀಯ ಸ್ಥಾನದ ತಂಡ ಪ್ರಶಸ್ತಿ ಪಡೆದುಕೊಂಡಿತು.
Next Story