ವಿದ್ಯಾರ್ಥಿ ನಾಪತ್ತೆ

ಮಲ್ಪೆ, ಆ.5: ಉಡುಪಿಯ ವಿದ್ಯಾವೇತನ ಟ್ಯುಟೋರಿಯಲ್ನಲ್ಲಿ 12ನೆ ತರಗತಿ ಓದುತ್ತಿರುವ ತೆಂಕನಿಡಿಯೂರು ಲಕ್ಷ್ಮೀನಗರ ನಿವಾಸಿ ರವಿ ಕುಲಾಲ್ ಹಾಗೂ ಶರ್ಮಿಳಾ ದಂಪತಿ ಮಗ ಸೃಜನ್(17) ಎಂಬವರು ಆ.4ರಂದು ಬೆಳಗ್ಗೆ ಮನೆಯಿಂದ ಹೋದವನು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.
ಸೃಜನ್ ಈ ಹಿಂದೆ ಎರಡು ಬಾರಿ ಮನೆ ಬಿಟ್ಟು ಹೋದವನು ಮರುದಿನ ವಾಪಸ್ಸು ಬಂದಿದ್ದಾನೆ. ಈತ ಮನೆಯಿಂದ ಹೋಗುವಾಗ ಕ್ರೀಮ್ ಕಲರ್ ಪ್ಯಾಂಟ್ ಮತ್ತು ಕಾಪಿ ಬಣ್ಣದ ಹೂಗಳಿರುವ ಉದ್ದತೋಳಿನ ಶರ್ಟ್ ಧರಿಸಿದ್ದನು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story